ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಬಾರಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಇದರ ಪ್ರಾಯೋಜಕತ್ವದಲ್ಲಿ ‘ ನಿಂದೊಳ್ಳೆ ಕತಿಯಾಯ್ತಲ್ಲ ಮಾರಾಯ್ತಿ! ‘ ಎನ್ನುವ ಶೀರ್ಷಿಕೆಯಲ್ಲಿ ಕುಂದಾಪ್ರ ಕನ್ನಡದ ಸಣ್ಣ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಾರ್ಕೂರು ದೀಪಕ್ಕುಮಾರ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ₹10,000, ಎರಡನೆಯ ಬಹುಮಾನವಾಗಿ ₹7,000, ಮೂರನೆಯ ಬಹುಮಾನವಾಗಿ ₹4,000 ಹಾಗೂ 7 ಸಮಾಧಾನಕರ ಬಹುಮಾನಗಳು ನೀಡಲಾಗುವುದು. ಕಥೆ ಸಂಪೂರ್ಣವಾಗಿ ಕುಂದಾಪ್ರ ಕನ್ನಡದಲ್ಲಿಯೇ ಇರಬೇಕು. ಈ ಮೊದಲು ಕಥೆ ಯಾವುದೇ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲಿಯೂ ಪ್ರಕಟಗೊಂಡಿರಬಾರದು. ಒಬ್ಬರು ಒಂದೇ ಕಥೆಯನ್ನು ಕಳುಹಿಸಬೇಕು. ಕಥೆ 600 ಪದಗಳ ( ಎ4 ಗಾತ್ರದ ಎರಡು ಪುಟ) ಮಿತಿಯೊಳಗಿರಬೇಕು.
ಕಥೆಯ ಜೊತೆ ಸ್ಪರ್ಧಿಗಳು ತಮ್ಮ ಹೆಸರು, ಸಂಪೂರ್ಣ ಅಂಚೆ ವಿಳಾಸ ಹಾಗೂ ಸಂಪರ್ಕ ಸಂಖ್ಯೆಗಳನ್ನು ನಮೂದಿಸಬೇಕು. ಜುಲೈ20 ರ ಮೊದಲು ಸ್ವರ್ಣರೇಖಾ ಇಂಟೀರಿಯರ್ಸ್, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ರಸ್ತೆ. ಕುಂಭಾಶಿ -576257 ಕುಂದಾಪುರ ತಾಲ್ಲೂಕು ಇಲ್ಲಿಗೆ ಅಥವಾ ವಾಟ್ಸ್ ಆ್ಯಪ್ ದೂರವಾಣಿ ಸಂಖ್ಯೆ 7204829938 ಇದಕ್ಕೆ ಕಥೆಗಳನ್ನು ಕಳುಹಿಸುವಂತೆ ಕೋರಲಾಗಿದೆ.
ಆ.4 ರಂದು ಸಂಜೆ 5 ಗಂಟೆಗೆ ವಿಜೇತರ ಹೆಸರನ್ನು ಘೋಷಿಸಲಾಗುವುದು. ಸ್ಪರ್ಧೆಗೆ ಬಂದಿರುವ ಕಥೆಗಳಲ್ಲಿ ಓದಬಹುದಾದ ಕಥೆಗಳನ್ನು ಸಂಕಲಿಸಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










