ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಾಕಾಳಿ ಮಹಿಳಾ ಮಂಡಳಿ (ರಿ) ಖಾರ್ವಿಕೇರಿ ಕುಂದಾಪುರ ಇದರ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಶಿಯನ್ ತರಬೇತಿ ಶಿಬಿರವನ್ನು ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಸ್ತೂರಿ ಡಿ ಪಟೇಲ್ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಅಂಬಿಕಾ ಧೀರಜ್ ನೆರವೇರಿಸಿ, ಸೌಂದರ್ಯವು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಕಿಯೋನಿಕ್ಸ್ ಸಂಸ್ಥೆಯ ಧೀರಜ್, ರೋಟರಿ ಕ್ಲಬ್ ಸನ್ರೈಸ್ನ ಮಾಜಿ ಅಧ್ಯಕ್ಷರಾದ ದಿನಕರ ಪಟೇಲ್ ಹಾಗೂ ಬ್ಯೂಟಿಶಿಯನ್ ತರಬೇತುದಾರರಾದ ಶ್ರೀಮತಿ ರತ್ನ ತೇಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮ ವಿ. ಸ್ವಾಗತಿಸಿದರು. ಶ್ರೀಮತಿ ಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೂಪಾ ಎಂ. ಸಹಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಹೊಸೂರಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯಲ್ಲಿ ಡಿಸೆಂಬರ್ ೩೦ರಂದು ನಡೆಯಿತು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಬೇಕು. ಇಂತಹ ಎನ್.ಎಸ್.ಎಸ್. ಶಿಬಿರಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣವನ್ನು ನೀಡುತ್ತದೆ. ಸಮಾಜದ ಕಟ್ಟಕಡೆಯ ಮಗು ಶಿಕ್ಷಣ ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಗಳ ಮುಖ್ಯ ಧ್ಯೇಯ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ ಸಮಾರೋಪ ಭಾಷಣದಲ್ಲಿ ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ದೇವಲ್ಕುಂದ ಅಶೋಕ ಶೆಟ್ಟಿ, ಹೊಸೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಆ ಕಾಲದ ಹಾಡುಗಳ ಖದರೇ ಬೇರೆ. ಈ ಕಾಲದ ಸಂಗೀತ ಮತ್ತೆ ಮತ್ತೆ ಕೇಳಿದರೆ ಬೋರೇ. ಹೀಗೆ ರಾಗ ಎಳೆತ ಕೂರಬೇಡಿ! ಆ ಕಾಲ ಹಾಡುಗಳನ್ನು ಈ ಕಾಲದಲ್ಲಿ ಕೇಳುವ ಅವಕಾಶ ಕುಂದಾಪುರದ ಕಲಾಕ್ಷೇತ್ರ ಮಾಡಿಕೊಟ್ಟಿದೆ. ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜನವರಿ 7ರ ಶನಿವಾರ ಸಿತಾರ್ ವಾದಕ ಅವಿನಾಶ್ ಹೆಬ್ಬಾರ್ ಸವಿನೆನಪಿಗಾಗಿ ಉಸ್ತಾದ್ ಫಯಾಝ್ ಖಾನ್ ಅವರಿಂದ ‘ಭಜನಾ ಸಂಧಾ’ ನಡೆದರೇ, ಜನವರಿ 8ರ ಭಾನುವಾರ ಸಂಜೆ 6ರಿಂದ ‘ಇನಿದನಿ’ ಸುಮಧುರ ಕನ್ನಡ ಹಾಡುಗಳ ಸಂಗೀತ ಸಂಜೆ ನಡೆಯಲಿದೆ. ಇಂದಿಗೂ ಕಾಡುವ ಹಳೆಯ ಹಾಡುಗಳು ಪ್ರಸಿದ್ಧ ಸಂಗೀತಗಾರರ ಕಂಠದಿಂದ ಮೂಡಿಬರಲಿದೆ. ಭಜನಾ ಸಂಧ್ಯಾ ಹಾಗೂ ಇನಿದನಿ ಸಂಗೀತಪ್ರಿಯರನ್ನು ಒಂದಿಷ್ಟು ಹೊತ್ತು ಸಂಗೀತ ಲೋಕದಲ್ಲಿ ತೇಲಿಸಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೈಹಿಕ ಮಾನಸಿಕ ತೊಂದರೆಗಳಾದಾಗ ಯಾವಾಗಲೂ ದೇಹದ ಒಳಕ್ಕೆ ರಾಸಾಯನಿಕ ಔಷಧ ಸೇವಿಸುವುದನ್ನು ಕನಿಷ್ಠಗೊಳಿಸಿ ದೇಸೀ ಚಿಕಿತ್ಸೆಗಳಾದ ಯೋಗ, ಪ್ರಾಣಾಯಾಮ, ಅಕ್ಯುಪ್ರೆಶರ್ ಮುದ್ರೆ ವಿಜ್ಞಾನ, ಆಯಸ್ಕಾಂತ, ಆರ್ಯುವೇದ ಚಿಕಿತ್ಸೆಗಳನ್ನು ಬಳಸುವುದರಿಂದ ಬಹಳಷ್ಟು ಗುಣಪಡೆದು ಸರಳ, ಸುಲಭ ಮತ್ತು ಸಹಜತೆಯಿಂದ ಬಾಳಬಹುದು ಎಂದು ಸಾಹಿತಿ ಯು ವರಮಹಾಲಕ್ಷ್ಮೀ ಹೊಳ್ಳ ನುಡಿದರು. ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಹೊಳ್ಳರ ದತ್ತಿನಿಧಿ, ಸುವಿಚಾರ ಬಳಗ ಮತ್ತು ಮಹಿಳಾ ವಿವಿದೊದ್ದದೇಶ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಜನವರಿ ೨ ರಿಂದ ೮ ರ ತನಕ ಆಯೋಜಿಸಿದ ಶಿಬಿರದಲ್ಲಿ ರಾಜಸ್ಥಾನದ ಡಾ ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಕಾರದ, ಡಾ|| ಭೂಪೇಂದ್ರ ಚೌಧರಿ ಮತ್ತು ತಂಡದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಡಾ ಭೂಪೇಂದ್ರ ಚೌಧರಿಯವರು ಅಂಗೈ, ಅಂಗಾಲು, ಬೆನ್ನುಹುರಿ, ಸೊಂಟ ಮುಂತಾದೆಡೆ ಹರಿಯುವ ನರಮಂಡಲಗಳನ್ನು ಪ್ರಚೋದಿಸಿ ಸಶಕ್ತಗೊಳಿಸುವುದರಿಂದ ಉದ್ಯೋಗ ಮತ್ತು ಆಹಾರ ನಿಮಿತ್ತ ಬರುವ ಹಲವಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್.ಎಸ್. ಪದವಿಪೂರ್ವ ಕಾಲೇಜು ವಿಜಯಪುರ ಇವರ ಆಶ್ರಯದಲ್ಲಿ ಜರಗಿದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ಅವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ಗಂಗೊಳ್ಳಿಯ ಗೋಪಾಲ ಚಂದನ್ ಹಾಗೂ ಡಾ.ವೀಣಾ ಕಾರಂತ ಇವರ ಪುತ್ರಿಯಾಗಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಆನಗಳ್ಳಿ ಜಾಕ್ಸನ್ ಡಿಸೋಜಾಗೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಿ, ಹುಟ್ಟೂರು ಆನಗಳ್ಳಿಯಲ್ಲಿ ಸನ್ಮಾನಿಸಲಾಯಿತು. ಎರಡು ಬೆಳ್ಳಿ, ಒಂದು ಕಂಚಿನ ಪದಕದೊಂದಿಗೆ ದೇಶಕ್ಕೆ ಮತ್ತು ಊರಿಗೆ ಕೀರ್ತಿ ತಂದ ಆನಗಳ್ಳಿ ಜಾಕ್ಸನ್ ಅವರನ್ನು ಬೈಕ್ ರ್ಯಾಲಿ ಮೂಲಕ ಕುಂದಾಪುರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಅಭಿನಂದನೆ ಸಲ್ಲಿಸಿದರು. ಆನಗಳ್ಳಿ ಜೋಸೆಫ್ ಮತ್ತು ಕಾರ್ಮಿನ್ ಡಿಸೋಜಾ ಪುತ್ರ ಜಾಕ್ಸನ್ ಡಿಸೋಜಾ ತನ್ನ ಸಾಧನೆಗೆ ಬೆಂಗಾವಲಾಗಿ ನಿಂತ ಸಹೋದರ ಜೊಯ್ಸನ್ ಡಿಸೋಜಾ, ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ ಮಾರ್ಗದರ್ಶನದಲ್ಲಿ ದೇಶವೇ ಗುರುತಿಸುವಂಥ ಮಹತ್ವದ ಸಾಧನೆ ಮಾಡಿದ್ದಾರೆ. ಸ್ಥಳೀಯರಾದ ವೇದಮೂರ್ತಿ ಚನ್ನಕೇಶವ ಭಟ್ ಅವರು ಜಾಕ್ಸನ್ ಅವರನ್ನು ಹತ್ತು ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು. ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಗಂಗಾಧರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ತಾಲೂಕಿನ ಆನಗಳ್ಳಿಯ ಯುವಕ, ಬಸ್ರೂರು ಕಾಲೇಜಿನ ವಿದ್ಯಾರ್ಥಿ ಜಾಕ್ಸನ್ ಡಿಸೋಜಾ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ. Read this ► ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್: ಜಾಕ್ಸನ್ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ – http://kundapraa.com/?p=10851 ► ಕುಂದಾಪುರ: ಭರವಸೆಯ ಪವರ್ ಲಿಫ್ಟರ್ ಆನಗಳ್ಳಿಯ ಜಾಕ್ಸನ್ ಡಿಸೋಜಾ – http://kundapraa.com/?p=20027
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಅವರು ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಪವರ್ ಲಿಫ್ಟಿಂಗ್ ಹಾಗೂ ಡೆಡ್ಲಿಫ್ಟಿಂಗ್ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ೮೩ಕೆ.ಜಿ ವಿಭಾಗದಲ್ಲಿ ಸ್ವರ್ಧಿಸಿದ್ದ ವಿಶ್ವನಾಥ್ ಪವರ್ ಲಿಫ್ಟಿಂಗ್ನಲ್ಲಿ ಚಿನ್ನ ಗೆದ್ದಿದ್ದಲ್ಲದೇ ಡೆಡ್ಲಿಫ್ಟ್ನಲ್ಲಿ ಅಗ್ರ ಸ್ಥಾನಿಯಾಗಿದ್ದರು. ಸುಬ್ರತಾ ಕ್ಲಾಸಿಕ್ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಸ್ಟ್ ಲಿಫ್ಟರ್ ಗೌರವಕ್ಕೂ ವಿಶ್ವನಾಥ್ ಪ್ರಾತ್ರರಾದರು. ಬೆಂಗಳೂರಿನ ಸೂಪರ್ ಬಾಡೀಸ್ ಹಾಗೂ ರೆಡ್ ಕೇಜ್ ಜಿಮ್ನಲ್ಲಿ ವಿಶ್ವನಾಥ್ ತರಬೇತಿ ಪಡೆಯುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ, ಸುವರ್ಣ ಮಹೋತ್ಸವ ಸಮಿತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾರಂದಾಡಿಯ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ಕ್ರಾಸ್ ಕುಂದಾಪುರ ಘಟಕದ ಸಹಭಾಗಿತ್ವದಲ್ಲಿ ಬಾರಂದಾಡಿ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ನಾವು ನೀಡುವ ರಕ್ತವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಬಲ್ಲದ್ದಾಗಿದೆ ಅಂತಹ ಶ್ರೇಷ್ಠ ಕಾರ್ಯದಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿ ಎಂದರು ಇಂಡಿಯನ್ ರೆಡ್ಕ್ರಾಸ್ ಕುಂದಾಪುರ ಘಟಕದ ಛೇರ್ಮೆನ್ ಜಯಕರ ಶೆಟ್ಟಿ ಅಧ್ಯಕ್ಷತೆವಹಿಸಿ ರಕ್ತದಾನದ ಮಹತ್ವ ಹಾಗೂ ಕುಂದಾಪುರ ರೆಡ್ಕ್ರಾಸ್ನ ಸೇವೆಯ ಕುರಿತು ತಿಳಿಸಿದರು. ಮುಖ್ಯ ಅಥಿತಿಯಾಗಿ ಕುಂದಾಪುರ ತಾ. ಪಂ ಸದಸ್ಯೆ ಇಂದಿರಾ ಶೆಟ್ಟಿ, ಯೂತ್ ರೆಡ್ಕ್ರಾಸ್ ಸಂಚಾಲಕ ಆವರ್ಸೆ ಮುತ್ತಯ್ಯ ಶೆಟ್ಟಿ, ಶಾಲೆಯ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ಹಕ್ಲಾಡಿ ಗ್ರಾ. ಪಂ ಅಧ್ಯಕ್ಷೆ ಮಾಲತಿ ಶೆಟ್ಟಿ, ಸದಸ್ಯ ಕಿಶೋರ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಬಹುಮುಖ ಕ್ರೀಡಾ ಪ್ರತಿಭೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಸಿಇಬಿಎ ತರಗತಿಯ ವಿದ್ಯಾರ್ಥಿ ನಾಗೇಂದ್ರ ಮೊಗವೀರ ಅವರನ್ನು ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಯಶ್ರೀ ಆರ್ ಪೈ, ಕುಸುಮ ಆರ್ ಕಿಣಿ, ಡಾ.ಕಿಶೋರ್ ಕುಮಾರ್ ಶೆಟ್ಟಿ, ಡಾ.ಕಾಶೀನಾಥ ಪೈ ,ಎನ್ ಸದಾಶಿವ ನಾಯಕ್, ಕವಿತಾ ಎಮ್ ಸಿ, ಸದಾನಂದ ವೈದ್ಯ ಮೊದಲಾದವರು ಉಪಸ್ಥಿತರಿದ್ದರು.
