Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ
    ಉಡುಪಿ ಜಿಲ್ಲೆ

    ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಆದಿಗ್ರಾಮೋತ್ಸವ ಗೌರವ

    Updated:12/01/2020No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಆಜೆಕಾರು: ಎರಡು ದಶಕಗಳ ಸಾರ್ಥಕ ಸಂಭ್ರಮ ಕಂಡು ಮುಂದುವರಿಯುತ್ತಿರುವ ಅಜೆಕಾರು ಆದಿಗ್ರಾಮೋತ್ಸವದ ಪ್ರತಿಷ್ಠಿತ ರಾಜ್ಯಮಟ್ಟದ ಆದಿಗ್ರಾಮೋತ್ಸವ ಗೌರವವನ್ನು ವಾಗ್ಮಿ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಜನವರಿ 25 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿದ್ದಾರೆ ಎಂದು ಉತ್ಸವದ ರೂವಾರಿ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.

    Click Here

    Call us

    Click Here

    ಕಲಾವಿದರಿಗೆ ಹಿರಿಯ ಸಾಧಕರಿಗೆ ನೀಡಲಾಗುವ ಅಜೆಕಾರು ಗ್ರಾಮ ಗೌರವಕ್ಕೆ ನಾದವೈಭವಂ ಉಡುಪಿ ವಾಸುದೇವ ಭಟ್ ಮತ್ತು ಸಮಾಜ ಸೇವಕ-ಉದ್ಯಮಿ ವಿಶ್ವನಾಥ ಶೆಣೈ ಅವರು ಪಾತ್ರರಾಗಲಿದ್ದಾರೆ.

    17 ಮಂದಿಗೆ ಯುವ ಗೌರವ:
    ಯುವ ಗೌರವಕ್ಕೆ ನಾಡಿನ ವಿವಿದ ಕಡೆಯ ೧೭ ಮಂದಿ ಯುವ ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಂದಾ ಪ್ರೇಮ್‌ಕುಮಾರ್-ಶಿಕಾರಿಪುರ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಮಂಗಳೂರು, ನಾಗರಾಜ ಗುರುಪುರ, ಮುಂಬಯಿ,ಜೆಸಿಂತಾ ಡಿಸೋಜಾ, ನಿಟ್ಟೆ, ಉಪನ್ಯಾಸಕಿ ಜ್ಯೋತಿ ಜ್ಯು.ಕಾಲೇಜ್, ಸುಜಾತ ಲಕ್ಷ್ಮಣ ಆಚಾರ್ಯ- ವರಂಗ, ಮಾಲಿನಿ.ಜೆ.ಶೆಟ್ಟಿ-ಹಿರ್ಗಾನ, ಸದಾನಂದ ಆಚಾರ್ಯ ನೂರಾಳಬೆಟ್ಟು, ಕಿಶೋರ್ ರೈ-ಉಜಿರೆ, ಡಾ.ರಕ್ಷಿತಾ ಕೋಟ್ಯಾನ್- ಅಜೆಕಾರು, ಪುಷ್ಪಾ ಅಂಗನವಾಡಿ ಶಿಕ್ಷಕಿ ಕಡ್ತಲ, ದಿನೇಶ ಆಚಾರ್ಯ ಆಲಿಬೆಟ್ಟು- ಅಜೆಕಾರು, ಅರುಣ್ ಶೆಟ್ಟಿಗಾರ್ -ಅಜೆಕಾರು ಅಜೆಕಾರು, ಪ್ರವೀಣ್ ದೇವಾಡಿಗ, ಅಜೆಕಾರು, ಪ್ರವೀಣ್ ಶೆಟ್ಟಿ, ಅಜೆಕಾರು, ದಿವ್ಯ ಪೂಜಾರಿ ವರಂಗ,ಇಸ್ಮಾಯಿಲ್ ಬಿಜಾಪುರ, ಸದಾನಂದ ನಾಯ್ಕ್-ಕುರ್ಪಾಡಿ.

    ಗ್ರಾಮೀಣ ಕೋಗಿಲೆ ಸಂಗೀತ ಸ್ಪರ್ಧೆ:
    ಗ್ರಾಮೋತ್ಸವ ವಿಶೇಷ ಆಕರ್ಷಣೆಯಾಗಿ ಹಳ್ಳಿಯಲ್ಲಿ ಹಾಡು ಹಕ್ಕಿ ಗ್ರಾಮೀಣ ಕೋಗಿಲೆ ಸ್ಪರ್ಧೆಯನ್ನು ಆ ದಿನ ಮಧ್ಯಾಹ್ನ 3 ಗಂಟೆಯಿಂದ ನಡೆಸಲಾಗುತ್ತಿದೆ. ಸ್ಪರ್ಧೆಯನ್ನು ಖ್ಯಾತ ಗಾಯಕಿ ಟಿವಿ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ಕ್ಷಿತಿ ರೈ ಧರ್ಮಸ್ಥಳ ಅವರು ಉದ್ಘಾಟಿಸಲಿದ್ದಾರೆ. ಜನವರಿ22 ರೊಳಗೆ ಹೆಸರು ನೋಂದಾಯಿಸಿದವರಿಗೆ ಆ ದಿನ ಮೂರು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಕರ್ಷಕ ನಗದು ಬಹುಮಾನ ಮತ್ತು ಜ್ಯೂನಿಯರ್ ವಿಭಾಗಕ್ಕೆ ವಿಶೇಷ ಟ್ರೋಫಿಯಿದೆ. ಸಂಘಟಕರು, ಆದಿಗ್ರಾಮೋತ್ಸವ ಸಮಿತಿ ಅಂಚೆ ಅಜೆಕಾರು ಇಲ್ಲಿಗೆ ಪತ್ರ ಬರೆಯ ಬಹುದು. ದೂರವಾಣಿ ಸಂಖ್ಯೆ 8710978493 ಅಥವಾ ನವೀನ್ ಟಿ.ಆರ್. ಮೂಡುಬಿದಿರೆ 9886109102 ಗಳ ಮೂಲಕವೂ ಹೆಸರು ನೋಂದಾಯಿಸ ಬಹುದು.

    Click here

    Click here

    Click here

    Click Here

    Call us

    Call us

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    21/05/2026

    ಜೂ.1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

    21/05/2026

    ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್‌ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿ ದಿನಾಚರಣೆ

    20/05/2026
    Leave A Reply Cancel Reply

    four × four =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.