Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಸ್ಪತ್ರೆಯಲ್ಲಿದ್ದುಕೊಂಡೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ 580 ಅಂಕ ಪಡೆದ ಶ್ರಾವ್ಯಾ!
    ಊರ್ಮನೆ ಸಮಾಚಾರ

    ಆಸ್ಪತ್ರೆಯಲ್ಲಿದ್ದುಕೊಂಡೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ 580 ಅಂಕ ಪಡೆದ ಶ್ರಾವ್ಯಾ!

    Updated:23/05/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಪ್ರಕೃತಿ ವಿಕೋಪ ಸಂತೃಸ್ತರ ನೆರವಿಗೆ ನಿಂತಿದ್ದ ಬಾಲಕಿ ಈಗ ಅಸಹಾಯಕಿ

    Click Here

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ:
    ತಾಲೂಕು ಹಕ್ಲಾಡಿ ಗ್ರಾಮದ ಬಗ್ವಾಡಿಯ ಈ ಯುವತಿ ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಇದೀಗ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಕಳೆದ ಶೈಕ್ಷಣಿಕ ಸಾಲಿನ ಜುಲೈಯಿಂದ ಮೂರು ತಿಂಗಳು ಹಾಗೂ ಆಕ್ಟೋಬರ್‌ನಿಂದ ಮೂರು ತಿಂಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾ ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಆರ್. (15), ಶಾಲೆಗೆ ತೆರಳದೇ ನೋಟ್ಸ್ ಜೆರಾಕ್ಸ್ ಪ್ರತಿಯನ್ನು ಮಲಗಿಕೊಂಡೇ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.92.64 ಅಂಕಗಳಿಸಿ ಸಾಧನೆಗೈದಿದ್ದಾಳೆ.

    ಶ್ರಾವ್ಯ ತಂದೆ ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಟ್ ಅಂಗಡಿ ನಡೆಸುತ್ತಿದ್ದಾರೆ. ಅತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾಳೆ. ಎಲ್ಲರಂತೆ ಚೂಟಿಯಾಗಿದ್ದ ಶ್ರಾವ್ಯ ಕರಳು ಸಂಬಂಧಿ ಅನಾರೋಗ್ಯದಿಂದ (ಐಬಿಡಿ ಕ್ರೋಮ್ಸ್) ದೇಹದ ತೂಕ ಕಳೆದುಕೊಂಡಿದ್ದಾಳೆ.

    ಅತ್ರಾಡಿ ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಶ್ರಾವ್ಯ ದೈಹಿಕ ಅಸಮಾನತೆ ನಡೆಯೂ ಓದಿನ ತುಡಿತ ಕಂಡು ಶಾಲಾ ನೋಟ್ಸ್ ಹಾಗೂ ಅನ್‌ಲೈನ್ ಪಾಠದ ಜರಾಕ್ಸ್ ಕಾಪಿ ನೀಡುವ ಮೂಲಕ ಸಹಕರಿಸಿದ್ದಾರೆ. ಒಟ್ಟಾರೆ ಎಲ್ಲ ಸರಿಯಿದ್ದೂ ಎಲ್ಲಾ ಸೌಲತ್ತು ಸಿಕ್ಕರೂ ಶಿಕ್ಷಣ ಕಬ್ಬಣದ ಕಡಲೆ ಎನ್ನೋರಿಗೆ 580 ಅಂಕ ಗಳಿಸಿದ ಶ್ರಾವ್ಯ ಮಾದರಿ.

    Click here

    Click here

    Click here

    Call us

    Call us

    ಕಳೆದ ಮೂರು ವರ್ಷದಿಂದ ಆನಾರೋಗ್ಯದ ನಡುವೆಯೂ ಓದಿಗೆ ಹೆಚ್ಚು ಗಮನ ಕೊಡುತ್ತಿದ್ದ ಶ್ರಾವ್ಯಾ ೧೦ನೇ ತರಗತಿ ಬಂದ ನಂತರ ಆಸ್ಪತ್ರೆ ಮಂಚದ ಮೇಲೆ ಮಲಗಿಯೇ ಕಳೆದಿದ್ದಾಳೆ. ಅವಳ ಓದಿನ ಹಠ ನೋಡಿ ನಮ್ಮ ಕಣ್ಣುತುಂಬಿ ಬರುತ್ತಿತ್ತು. ಪರೀಕ್ಷೆ ಸಮಯದಲ್ಲಿ ರಾತ್ರಿ 3 ಗಂಟೆಗಲ್ಲಾ ಎದ್ದು ಓದುತ್ತಿದ್ದಳು. ಎಸ್ಸೆಸ್‌ಎಲ್ಸಿಯಲ್ಲಿ ಶೇ.೯೮ ಅಂಕ ನಿರೀಕ್ಷಿದ್ದು, ಅಷ್ಟು ಬರಲಿಲ್ಲ ಎಂದು ಮುಸುಕು ಹೊದ್ದು ಮಲಗಿದ ಅವಳ ಸಮಾಧಾನ ಮಾಡುವುದರಲ್ಲಿ ಸಾಕಾಯಿತು. – ಸುಶೀಲಾ ಪೂಜಾರಿ, ಶ್ರಾವ್ಯ ದೊಡ್ಡಮ್ಮ

    ಪ್ರಕೃತಿ ವಿಕೋಪಕ್ಕೆ ಸ್ಪಂದಿಸಿದ ಶ್ರಾವ್ಯಾ ಅಸಹಾಯಕಿ:
    ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಶ್ರಾವ್ಯಾ ಮಾನವೀಯ ಮಿಡಿದಿದ್ದಳು. ೮ನೇ ತರಗತಿ ಓದುತ್ತಿದ್ದ ಶ್ರಾವ್ಯಾ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರ ಪರವಾಗಿ ಪೋಷಕರ, ಶಿಕ್ಷಣ ಪ್ರೇಮಿಗಳ ಮೂಲಕ ೬೦ ಸಾವಿರ ಹಣ ಸಂಗ್ರಹಿಸಿ ನೆರವು ನೀಡಿದ್ದ ಶ್ರಾವ್ಯ ಇಂದು ಅಸಹಾಯಕಿ. ಶ್ರಾವ್ಯ ದೈಹಿಕ ಶಕ್ತಿ ಕುಂದಿದ್ದರೂ ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಸ್ವಂತ ಕಾಲಮೇಲೆ ನಿಲ್ಲಬೇಕು ಎನ್ನುವ ಕನಸು ಕಟ್ಟಿಕೊಂಡಿದಾಳೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ಡಾ. ನಾಗೇಶ್ ಶ್ರಾವ್ಯ ಕಾಯಿಲೆ ಗುಣಪಡಿಸಲಾಗದ್ದಲ್ಲ. ನಿಯಮಿತವಾಗಿ ಚಿಕಿತ್ಸೆ ತೆಗೆದುಕೊಂಡರೆ ಶ್ರಾವ್ಯ ಮುಂಚಿನಂತೆ ಆಗುತಾರೆ ಎನ್ನುತ್ತಾರೆ. ಶ್ರಾವ್ಯ ಶಿರಸಿ ಪ್ರಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ವಲ್ಪ ಸುಧಾರಣೆ ಕಂಡುಕೊಂಡಿದ್ದಾಳೆ. ಶ್ರಾವ್ಯ ಮುಂದೆ ಅನಾರೋಗ್ಯ ಮತ್ತು ಶಿಕ್ಷಣ ಸವಾಲಾಗಿದ್ದು, ಮಾನವೀಯತೆ ಬೆಂಬಲ ಬೇಕಾಗಿದೆ.

    ಶ್ರಾವ್ಯಾ ಅನುಭವಿಸುತ್ತಿರುವ ಕಾಯಿಲೆ ಕರುಳು ಸಂಬಂಧಿಯಾಗಿದ್ದು ಹೊಟ್ಟೆ ನೋವು, ಪದೇ ಪದೇ ಮಲವಿಸರ್ಜನೆ ಆಗುತ್ತಿರುವ ಜೊತೆ ಭಾರಿ ತೂಕ ಕಡಿಮೆ ಆಗಿತ್ತದೆ. ಕರಳು ಹುಣ್ಣು, ಕರಳು ಕೆರಳುವಿಕೆ ಎಂದೂ ಇದನ್ನು ಕರೆಯಲಾಗುತ್ತದೆ. ನಿಯಮಿತವಾಗಿ ಚಿಕಿತ್ಸೆ ಪಡೆದರೆ ಕಾಯಲೆ ಸಂಪೂರ್ಣ ಗುಣ ಪಡಿಸಲಾಗುತ್ತದೆ. – ಡಾ. ನಾಗೇಶ್, ನೋಡಲ್ ಅಧಿಕಾರಿ, ತಾಲೂಕು ಸರ್ಕಾರಿ ಆಸ್ಪತ್ರೆ ಕುಂದಾಪುರ

    ಶ್ರಾವ್ಯಾ – ದೂರವಾಣಿ 7022088015

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ

    06/12/2025

    ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ

    06/12/2025

    ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 

    06/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ
    • ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d