ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಭಾಗದ ಮಕ್ಕಳ ರಜಾ ದಿನಗಳ ಸದ್ಬಳಕೆಗಾಗಿ ಮತ್ತು ಸುಪ್ತ ಪ್ರತಿಭೆಯನ್ನು ಹೊರತರಲು ಹಮ್ಮಿಕೊಳ್ಳಲಾಗಿದ್ದ ಒಂದು ವಾರಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಹಾಲಾಡಿ ಗ್ರಾಮ ಪಂಚಾಯತ್, ಅರಿವು ಕೇಂದ್ರ ಹಾಗೂ ಜೆಸಿಐ ಹಾಲಾಡಿ ವಾರಾಹಿ ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಈ ವಿಶೇಷ ಶಿಬಿರದಲ್ಲಿ ಜೆಸಿಐ ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ, ಕಾರ್ಯದರ್ಶಿಗಳಾದ ಅಶೋಕ್ ಆಚಾರಿ, ಜೆಸಿ ಸಂಯೋಜಕಿ ದೀಪಾ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಾಳೆಕೋಡ್ಲು, ಉಪಾಧಕ್ಷ್ಯರಾದ ನಾಗೇಶ್ ಕಿಣಿ, ಸಹ ಕಾರ್ಯದರ್ಶಿ ಮಂಜುಳ ಶೆಟ್ಟಿ, ಪ್ರಶಾಂತ್ ಪೂಜಾರಿ, ಉಪಸ್ಥಿತರಿದ್ದರು.

ಶಿಬಿರದಲ್ಲಿ ಮಕ್ಕಳಿಗೆ ವೈವಿಧ್ಯಮಯ ಮತ್ತು ಉಪಯುಕ್ತ ವಿಷಯಗಳ ಕುರಿತು ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಅತ್ಯುತ್ತಮವಾಗಿ ತರಬೇತಿ ನೀಡಿದ ಹೆಮ್ಮೆಯ ತರಬೇತುದಾರರಾದ: ಜೆಸಿ ಯೋಗೀಶ್ ದೇವಾಡಿಗ ಹಂಚಿನಮನೆ, ಜೆಸಿ ಪಲ್ಲವಿ ಪ್ರವೀಣ್ ಬಾಳೆಕೋಡ್ಲು ಅವರುಗಳು ಉಪಸ್ಥಿತರಿದ್ದರು. ಇವರ ನಿರಂತರ ಮಾರ್ಗದರ್ಶನ ಮತ್ತು ತರಬೇತಿಯು ಮಕ್ಕಳ ಜ್ಞಾನ ವಿಕಸನಕ್ಕೆ ಹಾಗೂ ಸೃಜನಶೀಲತೆ ಹೆಚ್ಚಲು ಪ್ರಮುಖ ಕಾರಣವಾಗಿದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಹಲವು ಕ್ರಾಫ್ಟ್ ವರ್ಕ್, ಜ್ಞಾನ ವಿಕಸನ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿಬಂದಿದ್ದು, ಮಕ್ಕಳ ಮತ್ತು ಪೋಷಕರ ವಲಯದಲ್ಲಿ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಅರಿವು ಕೇಂದ್ರದ ಶಾರದಾ ಹಾಲಾಡಿ, ಜೆಸಿಐ ಹಾಲಾಡಿ ವಾರಾಹಿ ಘಟಕದ ಸದಸ್ಯರು, ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸರ್ವರಿಗೂ, ತರಬೇತಿ ನೀಡಿದ ತರಬೇತುದಾರರಿಗೂ ಹಾಗೂ ಸಕ್ರಿಯವಾಗಿ ಪಾಲ್ಗೊಂಡ ಎಲ್ಲಾ ಮುದ್ದು ಮಕ್ಕಳಿಗೂ, ಮಕ್ಕಳಿಗೆ ಉಪಯುಕ್ತವಾದ ಪೆನ್ನು, ಪೆನ್ಸಿಲ್, ಸ್ಕೇಲ್, ಪೇಂಟಿಂಗ್ ಬಾಕ್ಸ್ ವಿತರಿಸಿದ ಲೇಡಿ ಜೇಸಿ ಸಂಯೋಜಕಿ ದೀಪಾ ಶೆಟ್ಟಿ ಮತ್ತು ಮಂಜುಳ ಶೆಟ್ಟಿ ಅವರಿಗೆ ಜೆಸಿಐ ಹಾಲಾಡಿ ವಾರಾಹಿ ಘಟಕದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
















