ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರ ಕೋಟೇಶ್ವರ ಬೈಪಾಸ್ನಿಂದ ಹೆಜಮಾಡಿವರೆಗೆ 26 ಕಿಮೀ ಸರ್ವೀಸ್ ರಸ್ತೆ ಮತ್ತು 3 ಕಡೆ ಪೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೋಟೇಶ್ವರದಿಂದ ಬೀಜಾಡಿ ಕ್ರಾಸ್ ವರೆಗೆ 830 ಮೀ., ಅನ್ನಪೂರ್ಣ ಹೊಟೇಲ್ನಿಂದ ಸಾನ್ವಿ ಏಜೆನ್ಸಿ ತೆಕ್ಕಟ್ಟೆವರೆಗೆ 3,500 ಮೀ ಎರಡು ಕಡೆ, ತೆಕ್ಕಟ್ಟೆ ಸೇವಾ ಸಂಗಮ ಶಿಶು ಮಂದಿರದಿಂದ 1020 ಮೀ ಎರಡು ಕಡೆ, ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರದ ವರೆಗೆ 400 ಮೀ ಎರಡು ಕಡೆ, ಸಂತೆಕಟ್ಟೆ ಇಂದ್ರ ಸರ್ವೀಸ್ ಸ್ಟೇಷನ್ನಿಂದ ಮಂದಾರ ವುಡ್ ಇಂಡಸ್ಟ್ರೀಜ್ವರೆಗೆ 1,000 ಮೀ ಎರಡು ಕಡೆ, ಉದ್ಯಾವರ ಜಂಕ್ಷನ್ನಿಂದ ದೇಶ್ನ ಬ್ಯಾಂಕಿನವರೆಗೆ ಬಲಬದಿ ಮಾತ್ರ 325 ಮೀ., ಉದ್ಯಾವರ ಕಿಯಾ ಶೋರೂಂ ವರೆಗೆ 164 ಮೀ ಎರಡು ಕಡೆ, ಎರ್ಮಾಳ್ ಮಸೀದಿ ಹತ್ತಿರ 2 ಕಿ.ಮೀ, ಎರಡುಕಡೆ, ಪಡುಬಿದ್ರಿ ಬೋಸ್ಕೋ ಕಂಪೆನಿಯಿಂದ ಕಣ್ಣಾಂಗರ್ ಬೇಕರಿ ಸಮೀಪ ಬಲಬದಿ ಮಾತ್ರ 750 ಮೀ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ.
ಮಹೇಶ್ ಹಾಸ್ಪಿಟಲ್ ಬ್ರಹ್ಮಾವರ, ಉಡುಪಿಯ ನಿಟ್ಟೂರು, ತೆಂಕ ಎರ್ಮಾಳ್ ನಲ್ಲಿ ಪೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಸಹ ಅನುಮೋದನೆ ದೊರೆತಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.










