ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಶೋಧನಾ ಘಟಕದ ವತಿಯಿಂದ, ಸೈಬರ್ ಇಮ್ಯುನಿಟಿ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಶ್ರೇಷ್ಠತಾ ಕೇಂದ್ರದ ಉದ್ಘಾಟನಾ ಸಮಾರಂಭವು ಬುಧವಾರ ಕಾಲೇಜು ಆವರಣದಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ದೆಹಲಿ ಸೈಬರ್ ಸೆಕ್ಯುರಿಟಿ ಅಸೋಸಿಯೇಷನ್ ಆಫ್ ಇಂಡಿಯಾ ಡೈರೆಕ್ಟರ್ ಜನರಲ್ ವಿಜಯಂತ್ ಗೌರ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿ, ಸೈಬರ್ ಜಾಗೃತಿ, ಡಿಜಿಟಲ್ ರಕ್ಷಣಾ ವ್ಯವಸ್ಥೆ ಹಾಗೂ ಡಿಜಿಟಲ್ ಫರೆನ್ಸಿಕ್ಸ್ನ ನೈಜ ಜಗತ್ತಿನ ಲ್ಲಿ ಆಗುಹೋಗುಗಳ ಕುರಿತಂತೆ ಮಾರ್ಮಿಕವಾಗಿ ಮಾತನಾಡಿದರು.

ಡಾ. ಇಂದ್ರ ವಿಜಯ್ ಸಿಂಗ್ (ಸಂಶೋಧನೆ ವಿಭಾಗದ ಡೀನ್) ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಹೊಸ ಸೆಂಟರ್ ನ ಮಹತ್ವವನ್ನು ತಿಳಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಫರೆನ್ಸಿಕ್ಸ್ನ ಮಹತ್ವವನ್ನು ಒತ್ತಿ ಹೇಳಿದರು.
ಐಎಂಜೆ ಇನ್ಸ್ಟಿಟ್ಯೂಶನ್ ಅಕಾಡೆಮಿಕ್ ಡೈರೆಕ್ಟರ್ ಡಾ. ಎಸ್.ಎನ್.ಭಟ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ತಮ್ಮ ಅಭಿನಂದನೆ ತಿಳಿಸಿದರಲ್ಲದೆ ಈ ಸೈಬರ್ ಸೆಂಟರ್, ಸೈಬರ್ ಕ್ಷೇತ್ರದ ಸರಕಾರದ ವಿಭಾಗಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ನೋಡಲ್ ಸೆಂಟರ್ ಆಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಡಾ. ರಾಮಕೃಷ್ಣ ಹೆಗ್ಡೆ, ಪ್ರಾಂಶುಪಾಲರು ಹಾಗೂ ಡಾ. ಮೆಲ್ವಿನ್ ಡಿಸೋಜಾ, ಉಪಪ್ರಾಂಶುಪಾಲರು, ತಮ್ಮ ಭಾಷಣಗಳಲ್ಲಿ ಪ್ರಯೋಗಾಲಯದ ಸ್ಥಾಪನೆಗೆ ಕೈಜೋಡಿಸಿದವರ ಪ್ರಯತ್ನಗಳನ್ನು ಹೊಗಳಿದರು.
ಕಾರ್ಯಕ್ರಮವು ಕೀರ್ತನಾ, ರಶ್ಮಿ ಹಾಗೂ ಹೇಮಾ ಅವರ ಪ್ರಾರ್ಥನೆಯಿಂದ ಆರಂಭಗೊಂಡಿತು. ಅಂಜಲಿ ಅವರು ಸ್ವಾಗತ ಭಾಷಣ ನೀಡಿದರು.
ಲಕ್ಷ್ಮಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಸೃಜನ್ ಕೆ. ಸಹಕಾರ ನೀಡಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.















