Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬಂದ್ ಬಿಸಿ: ತಾಯಿಯನ್ನು ಕಳೆದುಕೊಂಡ ಕಾರ್ಮಿಕರ ಸಂಕಷ್ಟಕ್ಕೆ ಪತ್ರಕರ್ತರ ಸ್ಪಂದನ
    Recent post

    ಬಂದ್ ಬಿಸಿ: ತಾಯಿಯನ್ನು ಕಳೆದುಕೊಂಡ ಕಾರ್ಮಿಕರ ಸಂಕಷ್ಟಕ್ಕೆ ಪತ್ರಕರ್ತರ ಸ್ಪಂದನ

    Updated:03/09/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ಆ ಕಾರ್ಮಿಕರಿಗೆ ತಾಯಿಯನ್ನು ಅಗಲಿದ ದುಃಖ. ಕೊನೆ ಪಕ್ಷ ಆಕೆಯ ಮುಖವನ್ನಾದರೂ ನೋಡಲು ಸಿಗುತ್ತದೋ ಇಲ್ಲವೋ ಎಂಬ ಆತಂಕ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಊರಿಗೆ ತೆರಳಲು ಏನೂ ಊಳಿದಿಲ್ಲ. ಕಡೆಗೆ ದುಡ್ಡು ಹೊಂದಿಸಿಕೊಂಡರೂ ತೆರಳಲು ಬಸ್ಸಿಲ್ಲ.

    Click Here

    Call us

    Click Here

    ರಾಷ್ಟ್ರವ್ಯಾಪಿ ನಡೆದ ಕಾರ್ಮಿಕ ಸಂಘಟನೆಗಳ ಮುಷ್ಕರದ ಕರಾಳ ಮುಖವೊಂದು ಕುಂದಾಪರದಲ್ಲಿ ಅನಾವರಣಗೊಂಡ ಪರಿಯಿದು. ತಾಯಿಯನ್ನು ಕಳೆದುಕೊಂಡ ಕಾರ್ಮಿಕ ಹಾಗೂ ಆತನ ಸಂಬಂಧಿಗಳೇ ಮುಷ್ಕರದಿಂದ ಅನುಭವಿಸಿದ ಪರಿಪಾಟಲು ಹೇಳತೀರದು.

    ನಂದಿಕೂರಿನಿಂದ ಕುಮಟಾ ಬಳಿಯ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರು ಬಸ್ಸಿಲ್ಲದ್ದರಿಂದ ಕುಂದಾಪುರದವರೆಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದಿದ್ದರು. ಎಕ್ಸ್‌ಪ್ರೆಸ್ ರೈಲಾಗಿದ್ದರಿಂದ ಕುಂದಾಪುರದವರೆಗಷ್ಟೇ ತೆರಳಲು ಹಣವಿದ್ದುದರಿಂದ ಅಲ್ಲಿಯ ತನಕವಷ್ಟೇ ಟಿಕೇಟ್ ಮಾಡಿದ್ದರು. ಅದೇ ರೈಲಿನಲ್ಲಿ ಕುಮಟಾ ವರೆಗೆ ತೆರಳಬಹುದಿದ್ದರೂ ಸಹ ನೋವಿನಲ್ಲೂ ಕಾನೂನು ಪಾಲಿಸುವುದನ್ನು ಆ ಕಾರ್ಮಿಕರು ಮರೆತಿರಲಿಲ್ಲ. ಬಸ್ಸಿಗಾಗಿ ಹೊಂದಿಕೊಂಡಿದ್ದ ಹಣವೂ ಖರ್ಚಾಗಿ ಹೋಗಿತ್ತು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದು ಶಾಸ್ತ್ರೀವೃತ್ತದ ತನಕ ಬಂದರೂ ಮುಷ್ಕರದ ಹಿನ್ನೆಲೆಯಲ್ಲಿ ಯಾವೊಂದು ಬಸ್ಸು ಸಂಚರಿಸುತ್ತಿರಲಿಲ್ಲ. ಅತ್ತ ತೆರಳುತ್ತಿದ್ದ ಕೆಲವೊಂದು ಖಾಸಗಿ ವಾಹನಗಳೂ ನಿಲ್ಲಿಸುತ್ತಿರಲಿಲ್ಲ. ಕೈಯಲ್ಲಿ ಹಣವೂ ಇಲ್ಲದ್ದರಿಂದ ಸಾಧ್ಯವಾದಷ್ಟು ದೂರ ನಡೆದು ಸಾಗುವುದೆಂದು ಒಂದು ಹಂತದಲ್ಲಿ ತೀರ್ಮಾನಿಸಿದ್ದರು. ಕೊನೆಗೆ ಪತ್ರಕರ್ತರು ಹಾಗೂ ಪೊಲೀಸರ ಸಹಕಾರದಿಂದ ಊರಿನತ್ತ ಮುಖಮಾಡುವಂತಾಯಿತು.

    ಮಾನವೀಯತೆ ಮೆರೆದ ಪತ್ರಕರ್ತರು, ನೆರವಿಗೆ ಬಂದ ಪೊಲೀಸರು:
    ಮುಷ್ಕರದ ವರದಿಗೆಂದು ಕುಂದಾಪುರ ಶಾಸ್ತ್ರೀವೃತ್ತದ ಬಳಿ ತೆರಳಿದ್ದ ಪತ್ರಕರ್ತರು, ನಡೆದು ಬರುತ್ತಿದ್ದ ಕಾರ್ಮಿಕರನ್ನು ತಡೆದು ವಿಚಾರಿಸಿದಾಗ ವಸ್ತುಸ್ಥಿತಿ ಅರಿವಿಗೆ ಬಂದಿತ್ತು. ಒಂದು ಹಂತದಲ್ಲಿ ಅಸಹಾಯಕರಾಗಿದ್ದ ಕಾರ್ಮಿಕರಿಗೆ ಊರಿಗೆ ತೆರಳಲು ಹಣವನ್ನು ಹೊಂದಿಸಿದರು. ಪತ್ರಕರ್ತರಾದ ಗಣೇಶ್ ಬೀಜಾಡಿ, ಶ್ರೀಕಾಂತ್ ಹೆಮ್ಮಾಡಿ, ಹರೀಶ್ ತುಂಗಾ ಹಾಗೂ ರಾಘವೇಂದ್ರ ಬಳ್ಕೂರು ಕೂಡಲೇ ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಾಸಿರ್ ಹುಸೈನ್ ಅವರಿಗೆ ಮಾಹಿತಿ ನೀಡಿದರು. ಕರ್ತವ್ಯದಲ್ಲಿದ್ದ ಎಎಸೈ ಪಾಂಡುರಂಗ ಹಾಗೂ ಪಿಸಿ ರಂಜಿತ್ ಅವರು ಸ್ಥಳಕ್ಕೆ ಧಾಮಿಸಿ ಮೂರು ಲಾರಿಗಳನ್ನು ನಾಲ್ಕು ನಾಲ್ಕು ಜನರಂತೆ ಹನ್ನೆರಡು ಮಂದಿಯನ್ನೂ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

    ತಾಯಿಯನ್ನು ಕಳೆದುಕೊಂಡ ನೋವಿನ ನಡುವೆ ಊರಿಗೆ ತೆರಳಲು ಹೆಣಗಾಡುತ್ತಿದ್ದ ಮಗ ಹಾಗೂ ಸಂಬಂಧಿಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿದ ಪತ್ರಕರ್ತರು ಹಾಗೂ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕುಮಟಾದಿಂದ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರುಗಳಿಗೆ ಸಂಬಂಧಿಗಳು ವಾಹನ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.

    Click here

    Click here

    Click here

    Call us

    Call us

    [quote font_size=”15″ bgcolor=”#ffffff” bcolor=”#ff0000″ arrow=”yes”]ಮೃತ ಮಡದಿಯನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಲು ಹಣವಿಲ್ಲದೇ ಗಂಡನೇ ಹೊತ್ತು ಸಾಗುತ್ತಿದ್ದ ಹೃದಯವಿದ್ರಾವಕ ದೃಶ್ಯವನ್ನು ಚಿತ್ರಿಸುತ್ತಿದ್ದ ವರದಿಗಾರರೇ ಸಹಾಯಕ್ಕೆ ಬರಬಹುದಿತ್ತಲ್ಲ ಎಂಬ ಟೀಕೆಗಳ ಬರುತ್ತಿರುವ ಬೆನ್ನಲ್ಲೇ ಪತ್ರಕರ್ತರೂ ಮಾನವೀಯತೆಯನ್ನೆಂದೂ ಮರೆಯುವುದಿಲ್ಲ ಎಂಬುವುದನ್ನು ಇಂತಹ ನಿದರ್ಶನಗಳು ಆಗಾಗ್ಗೆ ಸಾಬೀತು ಪಡಿಸುತ್ತವೆ. [/quote]

    Like this:

    Like Loading...

    Related

    Journalist John Dsoza kundapura Protest
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ

    06/12/2025

    ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ

    06/12/2025

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    06/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d