ನಿಧನ : ಟಿ. ಕೆ. ಶೇಖರ ಶೆಟ್ಟಿ ಕಡೇಮನೆ ತಲ್ಲೂರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತಲ್ಲೂರಿನ ಪಿಡಬ್ಲ್ಯೂಡಿ ಕಂಟ್ರ್ಯಾಕ್ಟರ್ ಟಿ. ಕೆ. ಶೇಖರ ಶೆಟ್ಟಿ ಕಡೇಮನೆ ತಲ್ಲೂರು (೪೬ ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಡಿ. ೦೨ರಂದು ಹೃದಯಾಘಾತದಿಂದ ನಿಧನರಾದರು.

Call us

Click Here

ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ, ಎಲ್‌ಐಸಿ ಪ್ರತಿನಿಧಿಯಾಗಿರುವ ಇವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನ, ತಲ್ಲೂರು ರಾಜಾಡಿಯ ಶ್ರೀ ರಕ್ತೇಶ್ವರಿ ದೇವಸ್ಥಾನ, ತಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಯಾಗಿ, ರೋಟರಿ ಸಮುದಾಯ ದಳ ತಲ್ಲೂರಿನ ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರಿ, ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Leave a Reply