Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಎ.22: ಗುರು ಫ್ರೆಂಡ್ಸ್ ಆಶ್ರಯದಲ್ಲಿ ‘ಸುರ್‌ಗುದ್ದ್ 2017’
    ಎಲ್ಲಿ ಏನು

    ಎ.22: ಗುರು ಫ್ರೆಂಡ್ಸ್ ಆಶ್ರಯದಲ್ಲಿ ‘ಸುರ್‌ಗುದ್ದ್ 2017’

    Updated:19/04/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ಗುರು ಫ್ರೆಂಡ್ಸ್ ರಿ. ಮಯ್ಯಾಡಿ ಸಂಸ್ಥೆಯ ಆಶ್ರಯದಲ್ಲಿ 12ನೇ ಬಾರಿಗೆ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾಟ ’ಸುರ್‌ಗುದ್ದ್ 2017’ ಎಪ್ರಿಲ್ 22ರ ಶನಿವಾರ ಸಂಜೆ ಮಯ್ಯಾಡಿ ಮಹಾಸತಿ ವಠಾರದಲ್ಲಿ ಜರುಗಲಿದೆ.

    Click Here

    Call us

    Click Here

    ತಿರುಮಲ ಟ್ರೋಫಿ:
    ಗುರು ಫ್ರೆಂಡ್ಸ್ ಆಶ್ರಯದಲ್ಲಿ ಜರುಗುವ ಸುರ್‌ಗುದ್ದ್ 2017 – ತಿರುಮಲ ಟ್ರೋಫಿ ವಿಜೇತರಿಗೆ ಭಾರಿ ಬಹುಮಾನ ಕಾದಿದೆ. ಮ್ಯಾಟ್ ಪಿಚ್‌ನಲ್ಲಿ ಜರುಗಲಿರುವ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ತಂಡದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಶೇಷ ಆಕರ್ಷಣೆಗಳಿವೆ. ಪುರುಷರ ವಿಭಾಗದಲ್ಲಿ ಪ್ರಥಮ 25,001 ಹಾಗೂ 5 ಅಡಿ ಎತ್ತರದ ಶಾಶ್ವತ ಫಲಕ, ದ್ವೀತಿಯ 15,001 ಹಾಗೂ 4 ಅಡಿ ಎತ್ತರದ ಶಾಶ್ವತ ಫಲಕ, ತೃತೀಯ 8,001 ಹಾಗೂ 3 ಅಡಿ ಎತ್ತರದ ಶಾಶ್ವತ ಫಲಕ ಬಹುಮಾನ ಹಾಗೂ ಎಲ್ಲರಿಗೂ, ಅತಿ ಶಿಸ್ತಿನ ತಂಡ, ಉತ್ತಮ ಹಿಡಿತಗಾರ, ದಾಳಿಗಾರ, ಸವ್ಯಸಾಚಿ ತಂಡ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಹುಮಾನಗಳಿವೆ. ಮಹಿಳೆಯರ ವಿಭಾಗದಲ್ಲಿ ಪ್ರಥಮ 10,001 ಹಾಗೂ ದ್ವಿತೀಯ 5,001 ಹಾಗೂ ತೃತೀಯ ಚತುರ್ಥ ಬಹುಮಾನ, ಶಾಶ್ವತ ಫಲಕವಿದೆ. ಉತ್ತಮ ಹಿಡಿತಗಾರ್ತಿ, ದಾಳಿಗಾರ್ತಿ ಹಾಗೂ ಸವ್ಯಸಾಚಿ ಆಟಗಾರ್ತಿಯರಿಗೂ ಬಹುಮಾನವಿದೆ.

    ಕಬ್ಬಡ್ಡಿ ಪಂದ್ಯದಲ್ಲಿ ವಿಶೇಷ ಆಕರ್ಷಣೆ:
    ಕಬ್ಬಡ್ಡಿ ಪಂದ್ಯಾಟ ಆರಂಭಕ್ಕೂ ಮುನ್ನ ರಿದಂ ಡಾನ್ಸ್ ಗ್ರೂಪ್ ಬೈಂದೂರು ತಂಡದಿಂದ ಸಾಂಸ್ಕೃತಿಕ ರಸಸಂಜೆ, ಆಯ್ದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ, ಕೋಟ ಭಗತ್‌ಸಿಂಣ್ ಚಂಡೆ ಬಳಗದಿಂದ ಉರಿಚಂಡೆ ವಾದನ, ಮತ್ತು ಬಸ್ರೂರು ಸೌಮ್ಯ ಡ್ರಾಮಾ ಆರ್ಟ್ಸ್‌ನಿಂದ ಆಕರ್ಷಕ ಗೊಂಬೆ ನೃತ್ಯದೊಂದಿಗೆ ಕಬ್ಬಡ್ಡಿ ಅಂಕಣ ಉದ್ಘಾಟನೆ ನಡೆಯಲಿದೆ. ಪಂದ್ಯಾಟದಲ್ಲಿ ಹೀಗೆ ಹಲವು ವೈವಿಧ್ಯಗಳಿವೆ.

    ಗ್ರಾಮೀಣ ಸೊಗಡು ನೆನಪಿಸಿದ್ದ ಕಬ್ಬಡ್ಡಿ:
    2016ರಲ್ಲಿ ಗುರು ಫ್ರೆಂಡ್ಸ್ ಆಶ್ರಯದಲ್ಲಿ ತಗ್ಗರ್ಸೆಯಲ್ಲಿ ಜರುಗಿದ್ದ ಕಬ್ಬಡ್ಡಿ ಪಂದ್ಯಾಟ ಗ್ರಾಮೀಣ ಸೊಗಡನ್ನು ನೆನಪಿಸಿತ್ತು. ಎತ್ತಿನ ಬಂಡಿಯ ಮೂಲಕ ಕ್ರೀಡಾಪಟುಗಳು ಕಬ್ಬಡ್ಡಿ ಅಂಕಣ ಪ್ರವೇಶಿಸುವಂತೆ ಮಾಡಿದ್ದು, ಹಳ್ಳಿಮನೆ ಅಟ್ಟಣಿಗೆಯಲ್ಲಿ ಕುಳಿತು ವೀಕ್ಷಕ ವಿವರಣೆ ಹೇಳಿದ್ದು ಕಬ್ಬಡ್ಡಿ ಪಂದ್ಯಾಟದಲ್ಲಿ ಗ್ರಾಮೀಣ ಮೆರಗು ನೀಡಿತ್ತು. ಕಬ್ಬಡ್ಡಿಗೂ ಮೊದಲು ಆಯೋಜಿಸಲಾಗಿದ್ದು ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

    ಒಟ್ಟಿನಲ್ಲಿ ವಿಭಿನ್ನವಾಗಿ ಕಬ್ಬಡ್ಡಿ ಪಂದ್ಯಾಟ ಆಯೋಜಿಸಿ ಗಮನ ಸೆಳೆದಿದ್ದ ಗುರು ಫ್ರೆಂಡ್ಸ್ ಮಯ್ಯಾಡಿ ತಂಡ ಈ ಭಾರಿಯೂ ಉತ್ತಮ ಪಂದ್ಯಾಟ ನಡೆಸುವ ತಯಾರಿ ನಡೆಸಿದೆ. ಜಿಲ್ಲಾ ಮಟ್ಟದ ವಿವಿಧ ತಂಡಗಳು ಈಗಾಗಲೇ ಹೆಸರು ನೊಂದಾಯಿಸಿದ್ದು, ರೋಚಕ ಪಂದ್ಯಾಟ ನಡೆಯಲಿದೆ. ಇದರೊಂದಿಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದೆ/ಕುಂದಾಪ್ರ ಡಾಟ್ ಕಾಂ/

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಂಗಭೂಮಿಯಿಂದ ಸಮಾಜದ ಸವಾಲುಗಳನ್ನು ಎದುರಿಸುವ ಶಿಕ್ಷಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    15/12/2025

    ಉಡುಪಿ ಜಿಲ್ಲಾ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ರಿಷಿಕಾ ದೇವಾಡಿಗ ಆಯ್ಕೆ

    13/12/2025

    ಬೈಂದೂರು ಕ್ಷೇತ್ರದಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜ್ಯ ಸರಕಾರ ವಿಫಲ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ

    12/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ
    • ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ನಿಧನ 
    • ಸರಕಾರದ ಯೋಜನೆಗಳ ಆರ್ಥಿಕ ನೆರವು ಅರ್ಹರಿಗೆ ತಲುಪಿಸಿ: ಸಿ.ಇ.ಒ ಪ್ರತೀಕ್ ಬಾಯಲ್

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.