Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶ್ರಾವಣ ಮಾಸದ ಚೂಡಿ ಪೂಜೆ: ಜಿಎಸ್‌ಬಿ ಸಮಾಜದ ಮುತ್ತೈದೆಯರ ಪ್ರಮುಖ ಆಚರಣೆ
    ತನ್ನಿಮಿತ್ತ

    ಶ್ರಾವಣ ಮಾಸದ ಚೂಡಿ ಪೂಜೆ: ಜಿಎಸ್‌ಬಿ ಸಮಾಜದ ಮುತ್ತೈದೆಯರ ಪ್ರಮುಖ ಆಚರಣೆ

    Updated:07/08/2017No Comments
    Facebook Twitter Pinterest LinkedIn WhatsApp Reddit Tumblr Email
    ?
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಲೇಖನ.
    ಕರಾವಳಿ ಭಾಗದಲ್ಲಿ ಮುಖ್ಯವಾಗಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಮುತ್ತೈದೆಯರಿಗೆ ವರ್ಷದ ಉಳಿದ ಎಲ್ಲ ಮಾಸಗಳಿಗಿಂತ ಶ್ರಾವಣಮಾಸ ಪ್ರಮುಖವಾದದ್ದು. ಅದಕ್ಕೆ ಕಾರಣ ಅವರು ಶ್ರಾವಣಮಾಸ ಪೂರ್ತಿ ಶುಕ್ರವಾರ ಹಾಗೂ ಭಾನುವಾರ ಮಾಡುವ ಚೂಡಿ ಪೂಜೆ. ಮುತ್ತೈದೆಯರು ಚೂಡಿ ಪೂಜೆ ಮಾಡುವುದು ತುಳಸಿ ಗಿಡಕ್ಕೆ. ತುಳಸಿಯ ತೌರುಮನೆ ಗಂಗಾನದಿ ಎನ್ನುವ ನಂಬಿಕೆಯೂ ಇದೆ. ಇದು ಕರಾವಳಿ ಭಾಗದಲ್ಲಿ ಆಚರಿಸಲ್ಪಡುವ ವಿಶಿಷ್ಟವಾದ ಸಂಪ್ರದಾಯಗಳಲ್ಲೊಂದು.

    Click Here

    Call us

    Click Here

    ಮನೆಯ ಮುಂದೆ ತುಳಸಿಕಟ್ಟೆ ಕಟ್ಟಿ, ಅದರಲ್ಲಿ ಹುಲುಸಾಗಿ ಬೆಳೆದ ತುಳಸಿಗಿಡ ನೆಟ್ಟು ಪ್ರತಿದಿವಸ ಅದರ ದರ್ಶನ ಮಾಡುತ್ತಿದ್ದರೆ ಸರ್ವದೋಷಗಳ ನಿವಾರಣೆಯಾಗುವುದಂತೆ. ಯಾವುದೇ ರೀತಿಯ ಅನಿಷ್ಟ, ಕೆಟ್ಟ ದೃಷ್ಟಿ ಇದ್ದರೂ ಪರಿಹಾರವಾಗುವುದೆನ್ನುವ ನಂಬಿಕೆ ಶ್ರದ್ಧಾವಂತರಿಗಿದೆ. ಇದರಿಂದ ಅನೇಕ ಆರೋಗ್ಯದ ಲಾಭಗಳೂ ಉಂಟು. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದೊಳಗಿನ ಕಲ್ಮಶವೆಲ್ಲವೂ ವಿಸರ್ಜನೆಯಾಗಿ ಶರೀರ ಸ್ವಚ್ಛವಾಗುವುದು. ತುಳಸಿಯಿಂದ ಮನೆಯ ಸುತ್ತಲಿನ ವಾತಾವರಣದಲ್ಲಿ ಪರಿಶುದ್ಧ ಪ್ರಾಣವಾಯು ಆಮ್ಲಜನಕ ವಿಪುಲವಾಗಿ ದೊರಕುತ್ತದೆ. ಅಲ್ಲದೆ ತುಳಸಿ ಕ್ರಿಮಿನಾಶಕವೂ ಹೌದು! ಚರ್ಮರೋಗ, ವಾತ, ಗಂಟಲು ನೋವು, ನೆಗಡಿ, ಎದೆನೋವು ಇತ್ಯಾದಿ ರೋಗಗಳಿಗೆ ತುಳಸಿಯಿಂದ ತಯಾರಿಸಿದ ಔಷಧ ರಾಮಬಾಣ.

    ತುಳಸಿಯ ಈ ರೀತಿಯ ಬಹೂಪಯೋಗಿ ಗುಣಧರ್ಮದ ಕಾರಣದಿಂದ ಮಹಿಳೆಯರು ಪ್ರತಿದಿವಸ ಸ್ನಾನ ಮಾಡಿದ ಕೂಡಲೇ ತುಳಸಿಕಟ್ಟೆಗೆ ನೀರು ಹಾಕಿ ಪ್ರದಕ್ಷಿಣೆ ಹಾಕುವ ಪದ್ಧತಿ ಬಂದಿರಬಹುದು. ಆ ವೇಳೆಯಲ್ಲಿ ತುಳಸಿಯಿಂದ ಉತ್ತಮ ಪರಿಣಾಮಗಳು ಅವರ ಮೇಲೆ ಆಗಬಹುದಲ್ಲವೆ?

    ಚೂಡಿ ಎಂದರೇನು?: ನಿಜ, ಕರಾವಳಿ ಭಾಗದ ಮಹಿಳೆಯರಿಗೆ ಶ್ರಾವಣಮಾಸ ಬಂತೆಂದರೆ ಚೂಡಿ ಪೂಜೆ ನೆನಪಾಗುತ್ತದೆ. ಹೂವು, ಹುಲ್ಲುಗಳನ್ನು ಸೇರಿಸಿ ಕಟ್ಟುವುದಕ್ಕೆ ಚೂಡಿ ಎನ್ನುತ್ತಾರೆ. ಚೂಡಿಯೊಂದಿಗೆ ತುಳಸಿಕಟ್ಟೆ, ಬಾವಿಕಟ್ಟೆ ಹಾಗೂ ಹೊಸ್ತಿಲು ಪೂಜೆಯನ್ನು ಮಾಡುತ್ತಾರೆ. ಶ್ರಾವಣಮಾಸದ ಚೂಡಿಪೂಜೆಗೆ ಸೂರ್ಯದೇವರ ಹಾಗೂ ನಿಸರ್ಗದ ಪೂಜೆ ಎಂಬ ಹೆಸರೂ ಇದೆ. ಹೌದು ‘ಚೂಡಿ’ ಎಂದರೆ ಗರಿಕೆಹುಲ್ಲು, ವಿಷ್ಣುಕ್ರಾಂತಿ, ವಾರಾಹೀ, ಭೃಂಗರಾಜ, ಶಶಶ್ರುತಿ, ಸ್ಪರ್ಷಾಸನಾ, ಇಂದ್ರವಲ್ಲೀ, ಲಕ್ಷಿ?ಮ?, ಸಹದೇವಿ ಮತ್ತು ಭದ್ರಾ ಈ ಹತ್ತು ಹೂ(ದಶಪುಷ್ಪ)ಗಳನ್ನು ಬಾಳೆಗಿಡದ ಒಣನಾರಿನಿಂದ ಒಟ್ಟಾಗಿ ಕಟ್ಟುವ ಹೂವಿನ ಗುಚ್ಛ ಎನ್ನಬಹುದು. ಇವುಗಳ ದೆಸೆಯಿಂದ ಪಾಪ, ಬಡತನ, ಬಾಲಗ್ರಹಗಳು ದೂರವಾಗಿ, ತ್ರಿದೋಷಗಳು ನಾಶವಾಗುತ್ತವೆಂಬ ನಂಬಿಕೆ ಇದೆ.

    ಆಚರಣೆ ಹೀಗಿರುತ್ತದೆ: ಶ್ರಾವಣಮಾಸದ ಪ್ರತಿ ಶುಕ್ರವಾರ ಮತ್ತು ಭಾನುವಾರ ಮುತೆದೆ ಬೆಳಗ್ಗೆ ಬೇಗ ಎದ್ದು ಮಂಗಲಸ್ನಾನಗೈದು, ಚೂಡಿ ಪೂಜೆ ಮಾಡುತ್ತಾಳೆ. ಮೊದಲು ಬಾವಿಕಟ್ಟೆಗೆ ಹೂ, ಅರಿಶಿಣ-ಕುಂಕುಮ ಹಚ್ಚಿ, ನೀರಿಗೂ ಅರ್ಪಿಸಿ ಶುದ್ಧ ನೀರನ್ನು ತಂದು, ತುಳಸಿಕಟ್ಟೆಯನ್ನು ತೊಳೆದು, ರಂಗೋಲಿ ಹಾಕಿ, ಹೊಸ್ತಿಲ ಮೇಲೆ ರಂಗೋಲಿಯನ್ನು ಬರೆದು, ಹೂವಿಟ್ಟು ಚೂಡಿ ಪೂಜೆ ಆರಂಭಿಸಬೇಕು.

    Click here

    Click here

    Click here

    Call us

    Call us

    ಆ ಬಳಿಕ ತುಳಸಿಯ ಮುಂದೆ ದೀಪವನ್ನು ಹಚ್ಚಿಡಬೇಕು. ತುಳಸಿಕಟ್ಟೆಗೆ ನೀರು ಹಾಕಿ, ತುಳಸಿಗೆ ಗಂಧ, ಹರಿದ್ರಾ-ಕುಂಕುಮಗಳನ್ನು ಹಚ್ಚಿ, ಹೂವಿಟ್ಟು ಅಲಂಕರಿಸಬೇಕು. ಕಟ್ಟಿದ ಚೂಡಿಗಳನ್ನು ತುಳಸಿಮಾತೆಗೆ ಅರ್ಪಿಸಿ, ಕಾಯಿ ಒಡೆದು, ಹಣ್ಣು-ಕಾಯಿ, ಪಂಚಕಜ್ಜಾಯವನ್ನು ನೈವೇದ್ಯ ಮಾಡಬೇಕು ಹಾಗೂ ಆರತಿ ಬೆಳಗಬೇಕು. ನಂತರ ತುಳಸಿಗೆ ಹಾಗೂ ಸೂರ್ಯದೇವನಿಗೆ ಅಕ್ಷತೆಯನ್ನು ಹಾಕುತ್ತ ತುಳಸಿಕಟ್ಟೆಗೆ ಐದು ಪ್ರದಕ್ಷಿಣೆಗಳನ್ನು ಮಾಡಬೇಕು. ನಂತರ ತೆಂಗಿನಮರಕ್ಕೆ ಒಂದು ಚೂಡಿ ಅರ್ಪಿಸಬೇಕು. ಮಡಿದ ಹಿರಿಯರ ಸ್ಮರಣೆ ಮಾಡಿ ಮನೆಯ ಮಾಡಿನ ಮೇಲೆ ಒಂದು ಚೂಡಿ ಇಡಬೇಕು. ಮನೆಯೊಳಗೆ ಪ್ರವೇಶಿಸುವಾಗ ಮನೆಯ ಹೆಬ್ಬಾಗಿಲಿನ ಹೊಸ್ತಿಲ ಪೂಜೆ ಮಾಡಿ ದೇವರಕೋಣೆಗೆ ಬಂದು ಸರ್ವದೇವರನ್ನು ಸ್ಮರಿಸಿ, ತನ್ನ ಮನೋಭಿಲಾಷೆಯನ್ನು ಹೇಳಿ ದೇವರಿಗೆ ಒಂದು ಚೂಡಿಯನ್ನು ಅರ್ಪಿಸಬೇಕು.

    ಮೊದಲಿನ ಹೂವುಗಳು ಇಂದು ಸಿಗುವುದಿಲ್ಲ. ಆ ಕಾರಣದಿಂದ ಇಂದು ಚೂಡಿ ತಯಾರಿಸಲು ತೇರಿನ ಹೂವು, ಕರವೀರ, ರತ್ನಗಂಧಿ, ಗೊರಟೆ, ದಾಸವಾಳ, ಮಂದಾರ, ಶಂಖಪುಷ್ಪ, ಮಿಠಾಯಿ ಹೂವುಗಳೊಂದಿಗೆ ನಿಸರ್ಗದತ್ತವಾಗಿ ದೊರಕುವ ನೆಲನೆಲ್ಲಿ ಇತ್ಯಾದಿ ಗದ್ದೆಯ ಅಂಚಿನಲ್ಲಿ ಬೆಳೆಯುವ ಸಸ್ಯದ ಎಲೆಗಳನ್ನು ಬಳಸಿ ಚೂಡಿ ಕಟ್ಟುತ್ತಾರೆ.

    ಹಿಂದಿನ ಕಾಲದಲ್ಲಿ ಬೆಳಗ್ಗೆ ಬೇಗ ಎದ್ದು ಗದ್ದೆಯ ಅಂಚಿನ ಮೇಲೆ ಚಿಗುರಿರುವ ಚೂಡಿಗೆ ಬೇಕಾಗುವ ಹೂವು ಹಾಗೂ ಪತ್ರೆಗಳನ್ನು ತಂದು, ಜೋಡಿಸಿ ಬಾಳೆಯ ನಾರಿನಿಂದ ಕಟ್ಟಿಟ್ಟರೆ ಅರ್ಧ ಕೆಲಸ ಮುಗಿದಂತಾಗುತ್ತಿತ್ತು. ಆ ಕಾಲದಲ್ಲಿ ಮನೆತುಂಬ ಮಕ್ಕಳಿರುತ್ತಿದ್ದರು. ಅವರೇ ಹೋಗಿ ಚೂಡಿ ಸಾಮಗ್ರಿಗಳನ್ನು ಕಿತ್ತು ತರುತ್ತಿದ್ದರು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಮರ, ಗಿಡ, ಬಳ್ಳಿಗಳ ಪರಿಚಯವಾಗುತ್ತಿತ್ತು.

    ದೂರದ ಊರಿನಲ್ಲಿರುವ ನೆಂಟರಿಗೆ ಅಂಚೆಯ ಮೂಲಕ ಚೂಡಿ ಕಳುಹಿಸುತ್ತಿದ್ದರು. ನಮ್ಮ ಹಿರಿಯರು ಸಹಬಾಳ್ವೆಗೆ ಎಷ್ಟೊಂದು ಮಹತ್ವ ನೀಡುತ್ತಿದ್ದರು ಎನ್ನುವುದು ಇದರಿಂದಲೇ ಅರ್ಥವಾಗುತ್ತದೆ. ಹೊಸದಾಗಿ ಲಗ್ನವಾದ ವಧುವು ಪ್ರಥಮ ಶುಕ್ರವಾರ ಅಥವಾ ಭಾನುವಾರ ಗಂಡನ ಮನೆಯಲ್ಲಿ ಹಾಗೂ ನಂತರದ ಶುಕ್ರವಾರ ಅಥವಾ ಭಾನುವಾರ ತವರುಮನೆಯಲ್ಲಿ ಚೂಡಿ ಪೂಜೆ ಮಾಡಿ, ನೆಂಟರಿಷ್ಟರಿಗೆ ಹಂಚುವ ಪದ್ಧತಿ ಕೂಡ ಇದೆ.

    ಸಂಜೆ ವಧುವನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಲಕ್ಷಿ?ಮ?ದೇವಿಗೆ ಫಲ-ತಾಂಬೂಲ ಸಹಿತ ಚೂಡಿ ಇರಿಸಿ ಬರುತ್ತಾರೆ. ಚೂಡಿ ಪೂಜೆ ಮಾಡುವಾಗ ಮನೆಯ ಹೊಸ್ತಿಲಿಗೆ ಪೂಜೆ ಮಾಡಿ ಚೂಡಿ ಇಡುವುದು ಸಹ ‘ಭಾಗ್ಯಲಕ್ಷಿ’ ಪೂಜೆಯೇ ಆಗಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಚೂಡಿ ಪೂಜನ, ಚೂಡಿ ಪ್ರದರ್ಶನ, ಚೂಡಿ ಸ್ಪರ್ಧೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಪ್ರಕೃತಿಗೆ ಸಂಬಂಧಿಸಿದ ಈ ಚೂಡಿ ಹಬ್ಬ ನಿಜಕ್ಕೂ ಕರಾವಳಿ ಭಾಗದ ವಿಶಿಷ್ಟವಾದ ಆಚರಣೆಯೇ ಸರಿ!

    – ಅರಗೋಡು ಸುರೇಶ್ ಶೆಣೈ

    ?

    Like this:

    Like Loading...

    Related

    GSB
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d