Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಹಿತ್ಯಾಸಕ್ತರ ಮನಕ್ಕೆ ತಂಪೆರೆದ ಶತಮಾನದ ಸ್ಮೃತಿಹಬ್ಬ
    ಇತರೆ

    ಸಾಹಿತ್ಯಾಸಕ್ತರ ಮನಕ್ಕೆ ತಂಪೆರೆದ ಶತಮಾನದ ಸ್ಮೃತಿಹಬ್ಬ

    Updated:03/09/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಬೈಂದೂರು ಚಂದ್ರಶೇಖರ ನಾವಡ. ಕುಂದಾಪ್ರ ಡಾಟ್ ಕಾಂ ಲೇಖನ.
    ನಾಡಿನಾದ್ಯಂತ ಹೆಚ್ಚುತ್ತಿರುವ ಆಂಗ್ಲ ಭಾಷೆಯ ಪ್ರಭಾವ ಮತ್ತು ಪರಭಾಷೆಯ ಪಾರಮ್ಯದ ನಡುವೆ ಅಲ್ಲಲ್ಲಿ ನಡೆಯುವ ಸಾಹಿತ್ಯೋತ್ಸವಗಳು, ವಿಚಾರ ಗೋಷ್ಠಿಗಳು, ಸಾಹಿತ್ಯಿಕ ಸಂವಾದಗಳು ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ. ಸಾಹಿತ್ಯಾಸಕ್ತರಿಗೆ ಬರಡು ನೆಲದಲ್ಲಿ ತಂಗಾಳಿ ಬೀಸಿದ ಅನುಭವ ಕೊಡುತ್ತದೆ. ಇಂತಹದೇ ಒಂದು ಮಧುರ ಅನುಭವಕ್ಕೆ ಸಾಕ್ಷಿಯಾದದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಮೂರು ಮಹಾನ್ ಸಾಹಿತ್ಯ ರತ್ನಗಳೆನ್ನಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ, ಉಳ್ಳೂರು ಮೂಕಜ್ಜಿ ಮತ್ತು ಬಿ.ಎಚ್.ಶ್ರೀಧರರ ನೂರರ ಸವಿನೆನಪಿಗಾಗಿ ಇತ್ತೀಚೆಗೆ (27-08-2017) ಏರ್ಪಡಿಸಿದ ವೈಶಿಷ್ಟ್ಯಮಯ ಕಾರ್ಯಕ್ರಮ. ಕುಂದಾಪುರ ತಾಲೂಕಿನ ನಾಗೂರಿನ ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಆಯೋಜಿಸಿದ ಶತಮಾನದ ಸ್ಮೃತಿ ಹಬ್ಬ, ನುಡಿ ಹಬ್ಬದ ತಂಪೆರೆದು ಸಾಹಿತ್ಯಾಸಕ್ತರನ್ನು ಆಹ್ಲಾದಗೊಳಿಸಿತು.

    Click Here

    Call us

    Click Here

    ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅನಿವಾರ್ಯವೆಂಬಂತೆ ವೇದಿಕೆಯಲ್ಲಿ ರಾರಾಜಿಸಿ ಬೇಸರ ಹುಟ್ಟಿಸುವಷ್ಟು ಮಾತನಾಡುವ ರಾಜಕೀಯ ವ್ಯಕ್ತಿಗಳಿಲ್ಲದ, ಅವರ ಹಂಗಿಲ್ಲದ ಕಾರ್ಯಕ್ರಮವನ್ನು ಹಿಂದೊಮ್ಮೆ ನಾಗೂರಿನ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗಳಿಗೆ ವೈದ್ಯಕೀಯ ಸೇವೆ ತಲುಪಿಸಿದ ಶತಾಯುಷಿ ವೈದ್ಯ ಡಾ. ಎಸ್ ಜಿ ಹೊಸ್ಕೋಟೆ ಉದ್ಘಾಟಿಸಿದರು. ಶಾಲೆಯ ಮುಖ ಕಾಣದ ಮೂಕಜ್ಜಿಯ ಅಪಾರ ಜೀವನಾನುಭವದ ಮೂಸೆಯಲ್ಲಿ ಮೂಡಿಬಂದ ಜಾನಪದ ಹಾಡುಗಳನ್ನು ಹೊರಜಗತ್ತಿಗೆ ಪರಿಚಯಿಸಿದ ಡಾ. ಕನರಾಡಿ ವಾದಿರಾಜ ಭಟ್ ಮೂಕಜ್ಜಿಯ ಸಾದನೆಯನ್ನು ಸಾಹಿತ್ಯಾಸಕ್ತರಿಗೆ ಸಾದ್ಯಂತವಾಗಿ ಉಣಬಡಿಸಿದರು. ‘ಕಟ್ಟುವೆವು ನಾವು ಹೊಸ ನಾಡೊಂದನು…’ ಹಾಡಿನ ಗೋಪಾಲಕೃಷ್ಣ ಅಡಿಗರ ಪ್ರಖರ ವ್ಯಕ್ತಿತ್ವ ಮತ್ತು ಹೊಂದಾಣಿಕೆ ಮಾಡಿಕೊಳ್ಳದ ಸ್ವಭಾವ ಹಾಗೂ ಅವರ ಸಾಹಿತ್ಯದ ಒಳ ಹೊರಹುಗಳನ್ನು ಡಾ. ವಸಂತ ಕುಮಾರ್ ಪೆರ್ಲ ಮತ್ತು ಸಾಗರದ ವಿ ಗಣೇಶ್ ತೆರೆದಿಟ್ಟರು. ಭುವನೆಶ್ವರಿ ಹೆಗಡೆ ಮತ್ತು ಕುಮಟಾದ ಡಾ. ಶ್ರೀಧರ ಬಳಗಾರ ಎಚ್ ಶ್ರೀಧರರ ಪ್ರಚಂಡ ಸಾಹಿತ್ಯ ದರ್ಶನವನ್ನು ಅಭಿಮಾನಿಗಳಿಗೆ ಮನ ಮುಟ್ಟುವಂತೆ ತಲುಪಿಸಿದರು.

    ಖ್ಯಾತ ಘಟಂ ವಾದಕ ಗಿರಿಧರ ಉಡುಪರಿಗೆ ಸನ್ಮಾನ ಮಾಡುವುದರೊಂದಿಗೆ ಅವರ ಸಂಗೀತ ಸಮಾರಾಧನೆಯೂ ನಡೆಯಿತು. ಅಡಿಗರ ಹಾಡುಗಳನ್ನು ಹಾಡಿದ ಚಂದ್ರಶೇಖರ ಕೆದ್ಲಾಯ ಮತ್ತು ಗರ್ತಿಕೆರೆ ರಾಘಣ್ಣ ಸಮಾರಂಭಕ್ಕೆ ಸಂಗೀತದ ಕಳೆ ಕಟ್ಟಿಕೊಟ್ಟರು. ಸ್ಥಳದಲ್ಲೇ ಕೊಟ್ಟ ವಿಷಯಾಧರಿಸಿ ಡಾI ರಾಮಕೃಷ್ಣ ಪೆಜತ್ತಾಯ ಮತ್ತು ಮಹೇಶ ಭಟ್ ಪದ್ಯ ರಚಿಸಿ ಮತ್ತು ಆ ಹಾಡುಗಳಿಗೆ ಚಂದ್ರಶೇಖರ ಕೆದ್ಲಾಯರು ಸಂಗೀತ ಸಂಯೋಜಿಸಿ ಹಾಡಿ ಪ್ರೇಕ್ಷಕರನ್ನು ಬಾವ ವಿಭೋರಗೊಳಿಸಿ ಸಮಾರಂಭವನ್ನು ವರ್ಣರಂಜಿತಗೊಳಿಸಿದರು. ಖ್ಯಾತ ಲೇಖಕಿ ವೈದೇಹಿ ಮತ್ತು ಡಾ. ಶಾಂತಾರಾಮ್ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದ ನಂತರ ನಡೆದ ಮೂಕಜ್ಜಿಯ ಜೀವನಾಧರಿತ ಕಿರು ನಾಟಕ ಹಾಗೂ ಹೇರಂಜಾಲು ಗೋಪಾಲ ಗಾಣಿಗರ ಸಾರಥ್ಯದಲ್ಲಿ ನಡೆದ ಯಕ್ಷನೃತ್ಯಾಭಿನಯ ರೂಪಕ ಸ್ಮೃತಿ ಹಬ್ಬವನ್ನು ಕಲಾಹಬ್ಬವಾಗಿಸಿತು.

    ಸಾಹಿತ್ಯ-ಸಂಗೀತ-ಕಲೆಯ ಸೊಬಗಿನೌತಣದ ಜತೆಯಲ್ಲಿ ಉದರದ ಹಸಿವನ್ನು ಹಿಂಗಿಸಲು ರುಚಿಕರ ಉಪಹಾರ, ಸ್ವಾದಿಷ್ಟ ಭೋಜನ ವ್ಯವಸ್ಥೆಯಿಂದ ಕೂಡಿದ ಆಯೋಜಕರ ಆದರಾತಿಥ್ಯಕ್ಕೆ ಎಲ್ಲೂ ಕೊರತೆ ಕಾಣಲೇ ಇಲ್ಲ. ದಿನವಿಡೀ ಬಿಡುವಿಲ್ಲದೇ ನಡೆದ ಸ್ಮೃತಿ ಹಬ್ಬ ನೋಡುಗರ ಸ್ಮೃತಿಪಟಲದಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯುವಂತಹ ಹಿತಾನುಭವ ಕೊಟ್ಟಿತು. ಗ್ರಾಮೀಣ ಪರಿಸರದಲ್ಲಿ ನಡೆದ ಸ್ಮೃತಿ ಹಬ್ಬವನ್ನು ನೇರ ಪ್ರಸಾರ ಮಾಡುವ ಮೂಲಕ ಅಂತರ್ಜಾಲ ಸುದ್ದಿತಾಣ ಕುಂದಾಪ್ರ ಡಾಟ್ ಕಾಂ ದೇಶ-ವಿದೇಶಗಳಲ್ಲಿರುವ ಆಸಕ್ತ ಕನ್ನಡಿಗರಿಗೂ ಕಣ್ತುಂಬಿಕೊಳ್ಳುವ ಸೌಭಾಗ್ಯ ಒದಗಿಸಿತು. ಕುಂದಾಪ್ರ ಡಾಟ್ ಕಾಂ ಲೇಖನ.

    • ಕಾರ್ಯಕ್ರಮ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ – http://kundapraa.com/shatamanada-smruthi-habba/

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d