Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶೈಕ್ಷಣಿಕ ಮಹತ್ಸಾದನೆಯ ಗೌರವ ಸ್ವೀಕರಿಸಿದ ಬಾಂಡ್ಯಾ ಪ್ರೇರಣಾ ಪೈ
    ಊರ್ಮನೆ ಸಮಾಚಾರ

    ಶೈಕ್ಷಣಿಕ ಮಹತ್ಸಾದನೆಯ ಗೌರವ ಸ್ವೀಕರಿಸಿದ ಬಾಂಡ್ಯಾ ಪ್ರೇರಣಾ ಪೈ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಗಂಗೊಳ್ಳಿ/ಶಾರ್ಜಾ : ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾದನೆಯ ಬಿರುದು ಪಡೆದುಕೊಂಡಿದ್ದಾರೆ.

    Click Here

    Call us

    Click Here

    ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಜನಾಬ್ ಶೇಖ್ ಸುಲ್ತಾನ್ ಬಿನ್ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಕಾಸಿಮಿ ಇವರು ಪ್ರೇರಣಾ ಪೈ ಇವರಿಗೆ ಬಿರುದು ಪ್ರದಾನ ಮಾಡಿದರು.

    ಪ್ರೇರಣಾ ಮೂಲತ: ಗಂಗೊಳ್ಳಿಯವರಾದ ಮಣಿಪಾಲದ ನಿವಾಸಿ ಬಾಂಡ್ಯ ಸಂಜೀವ ಪೈ ಹಾಗೂ ಶಾರದಾ ಎಸ್.ಪೈ ಅವರ ಮೊಮ್ಮಗಳಾಗಿದ್ದು, ಬಾಂಡ್ಯ ಹರೀಶ್ ಪೈ ಮತ್ತು ರಾಗಿಣಿ ಹರೀಶ್ ಪೈ ಅವರ ಪುತ್ರಿಯಾಗಿದ್ದಾಳೆ.

    ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠತೆಗಾಗಿ 2012-13ನೇ ಆವೃತ್ತಿ 15ರ ‘ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಕ್ತೂಮ್ ಬಿರುದನ್ನು ಪಡೆದುಕೊಂಡಿರುವ ಪ್ರೇರಣಾ ತನ್ನ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ತನ್ನ ನೆಚ್ಚಿನ ವಿಷಯಗಳಾದ ವಿಜ್ಞಾನ ಮತ್ತು ಗಣಿತದಲ್ಲಿ ಸರ್ವಶ್ರೇಷ್ಠ ವಿದ್ಯಾರ್ಥಿನಿಯಾಗಿದ್ದಾರೆ. ತಾನು ಕೈಗೆತ್ತಿಕೊಂಡಿರುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಬಂದಿರುವ ಇವರು ನಿರಂತರ ಅಭ್ಯಾಸವು ನಮ್ಮನ್ನು ಪಾರಂಗತರನ್ನಾಗಿಸುತ್ತದೆ ಮತ್ತು ನಿಖರ ಗುರಿಯು ಉತ್ತಮ ನಿರ್ವಹಣೆಗೆ ಪ್ರೇರಕ ಎಂದು ಬಲವಾಗಿ ನಂಬಿದ್ದಾರೆ. ವಿಜ್ಞಾನದಲ್ಲಿನ ಆಕೆಯ ಆಸಕ್ತಿ ಆಂತರಿಕ್ಷದ ಬಗ್ಗೆ ಪ್ರಯೋಗ ನಡೆಸಲು ಪ್ರೇರೆಪಿಸಿದೆ.

    ಆಕೆಯ ಎರಡು ಆ ರೀತಿಯ ಪ್ರಯೋಗಗಳು 2014 ರಲ್ಲಿ ಮತ್ತು 2015ರಲ್ಲಿ ಆಯ್ಕೆಯಾಗಿ ‘ಕ್ಯೂಬ್ಸ್ ಇನ್ ಸ್ಪೇಸ್’ ಎಂಬ ಮಾದರಿಯಲ್ಲಿ ಆಂತರಿಕ್ಷದಲ್ಲಿ ತೇಲಿ ಬಿಡಲಾಗಿದ್ದು ಇದೊಂದು ಶೈಕ್ಷಣಿಕ ಉತ್ತೇಜಕವಾಗಿ ‘ನಾಸಾ’ದ ಸೌಂಡಿಂಗ್ ರಾಕೆಟ್‌ಗೆ ಇತರ ವಿದ್ಯಾರ್ಥಿಗಳು ರವಾನಿಸಲು ಪ್ರೇರಕವಾಗಿದೆ.

    Click here

    Click here

    Click here

    Call us

    Call us

    ಪ್ರೇರಣಾರದು ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲ ೫ ವರ್ಷ ಕಿರಿಯ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸಕ್ಕೆ ತೊಡಗಿದ ಆಕೆ ಪ್ರಖ್ಯಾತ ಚಂಡಿಗಢದ ಪ್ರಾಚೀನ ಕಲಾ ಕೇಂದ್ರದಿಂದ ಸೀನಿಯರ್ ಭರತ ನಾಟ್ಯ ಡಿಪ್ಲೊಮಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿ ನೃತ್ಯಭೂಷಣ ಪದವಿ ಪಡೆದಿರುತ್ತಾರೆ. ಇದೀಗ ಆಕೆ ವಿದುಷಿ ರೋಹಿಣಿ ಅನಮತ್ ಎಂಬ ಶ್ರೇಷ್ಠ ನೃತ್ಯ ಗುರುವಿನ ಬಳಿ ತರಬೇತಿ ಪಡೆಯುತ್ತಿದ್ದಾರೆ.

    ಈಕೆ ‘ಡ್ರಮ್’ ಬಾರಿಸುವುದರಲ್ಲಿಯೂ ಪ್ರವೀಣೆಯಾಗಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸುತ್ತಿದ್ದಾರೆ. ಆಕೆಯ ಅಚ್ಚುಮೆಚ್ಚಿನ ಹವ್ಯಾಸವೆಂದರೆ ಪುಸ್ತಕ ಓದುವುದು. ಪುಸ್ತಕ ಓದದೆ ನಾನು ಬದುಕಲೇ ಸಾಧ್ಯವಿಲ್ಲ ಎಂಬುದು ಇವರ ಅಂಬೋಣ. ಇವರು ಚಿಕ್ಕ ವಯಸ್ಸಿನಿಂದ ಅತೀವ ಓದಿನ ಲಾಲಸೆ ಉಳ್ಳವರಾಗಿದ್ದಾರೆ. ಇವರ ಹೆತ್ತವರು ಹೇಳುವಂತೆ ಈಕೆ ಬರೇ ಪುಸ್ತಕ ಕಬಳಿಸುವವಳಾಗಿದ್ದು ಒಮ್ಮೆ ಓದಲು ಕೈಗೆತ್ತಿಕೊಂಡ ಪುಸ್ತಕವನ್ನು ಸಂಪೂರ್ಣ ಮುಗಿಸಿದ ಬಳಿಕವೇ ವಿಶ್ರಾಂತಿ ಪಡೆಯುವ ಸ್ವಭಾವದವರಾಗಿದ್ದಾರೆ.

    ಈಕೆ ಪ್ರಕೃತಿ ಆರಾಧಕಿಯಾಗಿದ್ದು ಪ್ರಾಣಿಗಳ ರಕ್ಷಣಾ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಈ ನಿಟ್ಟಿನ ಪ್ರಚಾರಾಂದೋಲನದಲ್ಲಿಯೂ ಈಕೆ ಸಕ್ರಿಯರಾಗಿದ್ದಾರೆ. ಪ್ರಾಣಿಗಳ ಬಗೆಗಿನ ಅನುಕಂಪವೇ ಈಕೆಯನ್ನು ಮಾಂಸಹಾರ ತ್ಯಜಿಸಿ ಶುದ್ಧ ಸಸ್ಯಾಹಾರ ಸೇವನೆಯತ್ತ ಪರಿವರ್ತಿಸಿತು. ಈ ಬಗ್ಗೆ ಈಕೆ ವೀಡಿಯೋ ಒಂದನ್ನು ರಚಿಸಿ ಇತರರನ್ನು ಸಸ್ಯಾಹಾರ ಸೇವನೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಈ ವೀಡಿಯೋವನ್ನು ವೀಕ್ಷಿಸಿದ ಅಮೆರಿಕನ್ ವೆಜಿಟೇರಿಯನ್ ಗ್ರೂಪ್ ನವರು ಈಕೆಗೆ ೨೫೦ ಡಾಲರ್ ಸ್ಕಾಲರ್‌ಶಿಪ್‌ನ್ನು ನೀಡಿ ಗೌರವಿಸಿದ್ದಾರೆ. ಈಕೆಯ ಈ ಬಗೆಯ ವೀಡಿಯೋ ಒಂದು ಯೂರೋಪಿನ ಪ್ರಕೃತಿ ಸಂರಕ್ಷಣಾ ಕಿರು ಚಿತ್ರ ‘ಗ್ರೀನ್ ಗೋ’ ದವರಿಂದ ಸ್ವೀಕರಿಸಲ್ಪಟ್ಟಿದ್ದು ಪ್ರತಿಯೊಬ್ಬರಿಂದ ಅಪಾರ ಮೆಚ್ಚಿಗೆಗೂ ಪ್ರಾಪ್ತವಾಗಿದೆ. ಮಹಾನ್ ಧರ್ಮ ಶೃದ್ಧೆ ಮತ್ತು ದೈವ ಭಕ್ತೆಯೂ ಆಗಿರುವ ಈಕೆ ತನ್ನೆಲ್ಲಾ ಸಾಧನೆಗೆ ಪರಮಾತ್ಮ ಹೆತ್ತವರು ಮತ್ತು ಶಿಕ್ಷಕರೇ ಕಾರಣ ಎಂದು ವಿನೀತಲಾಗಿ ನುಡಿಯುತ್ತಾಳೆ.

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025

    ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.