Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಗುತಾ ನಗುತಾ ಬನ್ನಿ..ಖುಷಿ ಖುಷಿಯಲ್ಲಿ ಮತದಾನ ಮಾಡಿ.. ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಕರೆ
    ಊರ್ಮನೆ ಸಮಾಚಾರ

    ನಗುತಾ ನಗುತಾ ಬನ್ನಿ..ಖುಷಿ ಖುಷಿಯಲ್ಲಿ ಮತದಾನ ಮಾಡಿ.. ಚುನಾವಣೆ ಅಧಿಕಾರಿ ಟಿ.ಭೂಬಾಲನ್ ಕರೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕುಂದಾಪುರ: ಉತ್ಸವಕ್ಕೆ ಬರುವಂತೆ ಮತದಾನಕ್ಕೆ ಕೇಂದ್ರಕ್ಕೆ ಮತದಾರರು ಬರಬೇಕು. ಜಾತ್ರೆ ಉತ್ಸವ, ಹಬ್ಬ-ಹರಿದಿನಗಳಲ್ಲಿ ಜನ ಹೇಗೆ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಾರೋ ಹಾಗೆ ಮತದಾನದಲ್ಲಿ ಪಾಲ್ಗೊಳ್ಳಬೇಕು. ಸರದಿ ರಹಿತ, ಪಿಂಕ್, ವಿಕಲಚೇತನ, ಯುವ,ಹಿರಿಯ ನಾಗರಿಕ ಮತಗಟ್ಟೆಗಳ ಮೂಲಕ ಮತದಾನ ಶೇ.ಹೆಚ್ಚಳಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗುತಾ ನಗುತಾ ಬನ್ನಿ..ಮತದಾನ ಮಾಡಿ..

    Click Here

    Call us

    Click Here

    …ಹೀಗೆ ಹೇಳಿದವರು ಕುಂದಾಪುರ ಚುನಾವಣೆ ಅಧಿಕಾರಿ ಟಿ.ಭೂಬಾಲನ್.

    ಕುಂದಾಪುರ ಮಿನಿ ವಿಧಾನ ಸೌಧ ಎಸಿ ಕೋರ್ಟ್ ಹಾಲ್‌ನಲ್ಲಿ ಶನಿವಾರ ನಡೆದ ಎಲೆಕ್ಟ್ರಾನಿಕ್ ಮತಯಂತ್ರ ಪ್ರಾತ್ಯಕ್ಷಕೆಯಲ್ಲಿ ಮಾತನಾಡಿ, ಕುಂದಾಪುರ ಮಧುಸೂಧನ ಕುಶೆ ಸರ್ಕಾರಿ ಪ್ರೌಢಶಾಲೆ, ಕೋಣಿ ಗ್ರಾಮ ಮೇಲ್ಕಟ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಂಕ್ ಮತಘಟ್ಟೆಯಾಗಿದ್ದು, ಸಿಬ್ಬಂದಿಯಿಂದ ಹಿಡಿದು ಪೊಲೀಸ್ ತನಕ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಮಹಿಳಾ ಮತದಾರರು ಹೆಚ್ಚಿರುವ ನಿಮಿತ್ತ ಈ ಎರಡು ಮತಘಟ್ಟೆ ಪಿಂಕಾಗಿದೆ ಎಂದು ತಿಳಿಸಿದರು.

    ವಿಕಲಚೇತನರಿಗೆ ರ‍್ಯಾಂಪ್ ಇರುವ ಮತಘಟ್ಟೆ ತೆರೆಯಲಾಗಿದ್ದು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತಘಟ್ಟೆ ಒಂದಿದ್ದು, ಅವರನ್ನು ಕರೆತಂದು ಹಿಂದಕ್ಕೆ ಬಿಡುವ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ವಾಹನ ಸೌಕರ್ಯವಿಲ್ಲದ ಮತಕೇಂದ್ರಗಳಿಗೆ ನಿರ್ಧಷ್ಠ ಸ್ಥಳದಿಂದ ಮತದಾರರ ಕರೆತಂದು ಬಿಡುವ ಜತೆ ಕುದ್ರುಗಳ ವಾಸಿಗಳಿಗೆ ಮತದಾನ ಮಾಡಲು ದೋಣಿ ಹಾಗೂ ಇನ್ನಿತರ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಮೂರು ಮಾದರಿ ಮತಘಟ್ಟೆ, ಮೂರು ಯುವ ಮತಘಟ್ಟೆ, ಒಂದು ವಿಕಲಚೇತನ ಮತಘಟ್ಟೆ ಹಾಗೂ ಸರತಿ ಸಾಲುರಹಿತ ಮತಘಟ್ಟೆಗಳು ಇದ್ದು, ಎಲ್ಲಾ ೨೧೫ ಮತಘಟ್ಟೆಗಳಲ್ಲಿ ರ‍್ಯಾಂಪ್, ವಿದ್ಯುತ್, ವೀಲ್‌ಚೇರ್, ಶೌಚಾಲಯದ ವ್ಯವಸ್ಥೆ ಇರುತ್ತದೆ. ವಲ್ನರಬಲ್ ಮತಘಟ್ಟೆಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದ್ದು, ಎಲ್ಲರೂ ನಿರ್ಭೀತರಾಗಿ ಮತದಾನ ಮಾಡಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಲಾಗುತ್ತದೆ ಎಂದು ಹೇಳಿದರು.

    Click here

    Click here

    Click here

    Call us

    Call us

    ಕುಂದಾಪುರ ಚುನಾವಣೆ ಸಹಾಯಕ ಅಧಿಕಾರಿ ರವಿ, ಕಂದಾಯ ಇಲಾಖೆ ಆರ್‌ಒ ನರಸಿಂಹ ಕಾಮತ್, ಕಚೇರಿ ಸಿಬ್ಬಂದಿ ಇದ್ದರು.

    ಪ್ರಮುಖ ಸಂಗತಿ :
    *ಒಟ್ಟು ಮತದಾರರು-1,99,583, ಪುರುಷ-95,935, ಮಹಿಳೆ_1,03,648

    *ಮತದಾನ ಕೇಂದ್ರ ಸಂಖ್ಯೆ 215, ಹೆಚ್ಚುವರಿ ಮತಘಟ್ಟೆ 3, ಒಟ್ಟು 218

    *ಸೇವಾ ಮತದಾರರು ಪುರುಷರು_41, ಮಹಿಳೆ-1, ಒಟ್ಟು 42

    *ಹೊಸ ಸೇರ್ಪಡೆ ಪುರುಷ_1996, ಮಹಿಳೆ_2,165, ಒಟ್ಟು 4,161

    *ಕೈಬಿಟ್ಟ ಮತದಾರರು ಪುರುಷ_714,,ಮಹಿಳೆ_925ಒಟ್ಟು 1639

    ವಶಕ್ಕೆ ಪಡೆದ ಮಧ್ಯ ಮತ್ತು ಹಣ

    ಚುನಾವಣೆ ಘೋಷಣೆ ನಂತರ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ 7,20,310 ಲಕ್ಷ ರೂ ವಶಕ್ಕೆ ಪಡೆಯಲಾಗಿದೆ. ದೂರ ಬಂದ ಹಿನ್ನೆಲೆಯಲ್ಲಿ 9 ಪ್ರಕರಣ ದಾಖಲಾಗಿದ್ದು, 6 ಪ್ರಕರಣ ಎಫ್‌ಐಆರ್ ಮಾಡಲಾಗಿದೆ. ಇದೂವರೆಗೆ ಒಟ್ಟು 1380.785 ಲೀಟರ್ ಮಧ್ಯ, 447.250 ಲೀಟರ್ ಬೀರ್ ವಶಕ್ಕೆ ಪಡೆಯಲಾಗಿದ್ದು, ಲಿಕ್ಕರ್ ಪ್ರಕರಣದಲ್ಲಿ 4 ಘೋರ ಹಾಗೂ 9 ಬಿಎಲ್‌ಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

    ಕೋಟ್ :
    ಈ ಬಾರಿ ಚುನಾವಣೆಯಲ್ಲಿ ಸರತಿರಹಿತ ಮತಘಟ್ಟೆ ತೆರೆಯಲಾಗುತ್ತಿದ್ದು, ಮತಘಟ್ಟೆ ಹೊರಗೆ ಮತದಾರರಿಗೆ ಮತದಾನದ ಚೀಟಿ ವಿತರಿಸಿ, ಅವರ ಸರತಿ ಬಂದ ನಂತರ ಮತದಾನ ಮಾಡಬಹುದು. ಅವರಿಗೆ ರೆಸ್ಟ್ ರೂಮ್ ಇದ್ದು, ಅಲ್ಲಿ ನೀರು, ಶೌಚಾಲಯ, ದಿನಪತ್ರಿಕೆ ವ್ಯವಸ್ಥೆ ಮಾಡಲಾಗಿದ್ದು, ಕಡಿಮೆ ಬೆಲೆಯಲ್ಲಿ ಚಾ-ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ಫಿ ಪಾಯಿಂಟ್, ಟೆಚ್ ಪ್ಯಾಡ್ ವ್ಯವಸ್ಥೆ ಮಾಡಿದ್ದು, ತೆಗೆದ ಸೆಲ್ಪಿ ಪೋಟೋ ವಾಟ್ಸ್‌ಅಫ್ 9606779366 ಕಳುಹಿಸಿದರೆ, ಆಯ್ಕೆಯಾದ ಪೊಟೋಕ್ಕೆ ಚುನಾವಣೆ ನಂತರ ಬಹುಮಾನ ನೀಡಲಾಗುತ್ತದೆ. ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಸ್ಟ್ರಾಂಗ್ ರೋಮ್‌ನಲ್ಲಿ ಮಸ್ಟರಿಂಗ್ ರೀಮಸ್ಟರಿಂಗ್ ಮಾಡಲಾಗುತ್ತದೆ. ಬೇರೆ ಕಡೆಯಿಂದ ಬರುವ ಮತಘಟ್ಟೆ ಸಿಬ್ಬಂದಿಗೆ ಮೇ.5 ರಂದು ತರಬೇತಿ ನೀಡಲಾಗುತ್ತಿದ್ದು, ಶಾಂತ ಹಾಗೂ ಸಸೂತ್ರ ಮತದಾನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025

    ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕ ವಾಹನಗಳ ಓವರ್ ಲೋಡ್ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.