ಕೊಲ್ಲೂರು: ಸದ್ಗುರು ಶ್ರೀ ನಿತ್ಯಾನಂದ ಆಶ್ರಮದ ವೆಬ್ಸೈಟ್ ಲೋಕಾರ್ಪಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು:ಸದ್ಗುರು ಶ್ರೀ ನಿತ್ಯಾನಂದರ ಭಕ್ತರು ವಿಶ್ವದೆಲ್ಲೆಡೆ ನೆಲೆಸಿದ್ದು, ಕೊಲ್ಲೂರಿನ ನಿತ್ಯಾನಂದಆಶ್ರಮದಲ್ಲಿ ನಡೆಯುವ ವಿವಿಧಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯನ್ನುಅಂತರ್ಜಾಲದ ಪಡೆದುಕೊಳ್ಳಲು ಆಶ್ರಮದ ವೆಬ್ಸೈಟ್‌ರೂಪಿಸಲಾಗಿದ್ದುಆಶ್ರಮದ ಭಕ್ತರುಇದರಸದುಪಯೋಗವನ್ನು ಪಡದುಕೊಳ್ಳುವಂತಾಗಲಿಎಂದುಶ್ರೀ ನಿತ್ಯಾನಂದಗುರುದೇವರ ಹಿರಿಯ ಭಕ್ತಮಂಬೈನ ನರೇಂದ್ರದೇಶಪಾಂಡೆ ಹೇಳಿದರು

Call us

Click Here

ಅವರು  ಗುರುಪೂರ್ಣಿಮೆ ಅಂಗವಾಗಿ ಕೊಲ್ಲೂರು ಸದ್ಗುರು ಶ್ರೀ ನಿತ್ಯಾನಂದ ಆಶ್ರಯಮದಲ್ಲಿ ಜರುಗಿದ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶ್ರಮ ವೆಬ್ಸೈಟ್‌  www.kollurunithyanandaashrama.com ಲೋಕಾರ್ಪಣೆಗೋಳಿಸಿ ಮಾತನಾಡಿದರು.

ಶ್ರೀ ನಿತ್ಯಾನಂದ ಗುರುದೇವರ ನೇರ ಶಿಷ್ಯರಾದ ಶ್ರೀ ವಿಮಲಾನಂದ ಸ್ವಾಮೀಜಿಯವರು ನಿತ್ಯಾನಂದರ ಅಣತಿಯಂತೆ ಕೊಲ್ಲೂರಿನಲ್ಲಿ ನೆಲೆಸಿ ತಮ್ಮಸೇವಾಕಾರ್ಯವನ್ನು ನಡೆಸುತ್ತಾ ಬಂದಿದ್ದರು. ಅವರ ಸಮಾಧಿಯ ಬಳಿಕವೂ ಸೇವಾ ಕಾರ್ಯಗಳು ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದಲ್ಲಿ ನಡೆಯುತ್ತಿದ್ದು ಶ್ರೀ ನಿತ್ಯಾನಂದರ ಭಕ್ತರಿಗೂ ಸಂತೃಪ್ತಿ ತಂದಿದೆ ಎಂದರು.

ಕೊಲ್ಲೂರು ಶ್ರೀ ನಿತ್ಯಾನಂದ ಆಶ್ರಮದ ಮುಖ್ಯಸ್ಥ ಜಯಾನಂದ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶ್ರಮದ ವೆಬ್ಸೈಟನ್ನು ಸಮಷ್ಠಿ ಮೀಡಿಯಾ ವೆಂಚರ‍್ಸ್ ಸಂಸ್ಥೆ ರೂಪಿಸಿತ್ತು. ಶಿರೂರು ಶ್ರೀ ನಿತ್ಯಾನಂದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಆಶ್ರಮದ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply