Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೆರಂಜಾಲು: ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತಡೆ
    ಊರ್ಮನೆ ಸಮಾಚಾರ

    ಹೆರಂಜಾಲು: ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತಡೆ

    Updated:11/05/2019No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ರಾಜಕೀಯ ವೈಷಮ್ಯಕ್ಕಾಗಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಡೆಯೊಡ್ಡಿ ಜನರೊಂದಿಗೆ ಚಲ್ಲಾಟವಾಡುತ್ತಿರುವ ಗ್ರಾಮ ಪಂಚಾಯಿತಿ. ಪಂಚಾಯತ್ ಅಧ್ಯಕ್ಷರ ರಾಜಕೀಯದಾಟಕ್ಕೆ ಹೈರಾಣಾಗಿರುವ ಕಾಲೋನಿಯ ಜನತೆ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯಿತಿ ಹೆರಂಜಾಲು ಗುಡಿ ದೇವಸ್ಥಾನದ ಬಳಿಯ ಜನತಾ ಕಾಲನಿ ನಿವಾಸಿಗಳು ಕುಡಿಯುವ ನೀರಿನಿಂದಲೂ ವಂಚಿತರಾಗಿದ್ದು, ಇರುವ ಒಂದು ಬೋರ್‌ವೆಲ್ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಿದ್ದಪಡಿಸಿದ್ದು, ವಿವರ ಕೆಳಗಿದೆ.

    Click Here

    Call us

    Click Here

    ಲೋಕಸಭೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದರು ಎಂಬ ನೆಪವನ್ನಿಟ್ಟುಕೊಂಡು ಒಂದಿಡೀ ಕಾಲನಿಗೆ ಪೂರೈಕೆ ಮಾಡಬೇಕಿದ್ದ ನೀರನ್ನು ಕಂಬದಕೋಣೆ ಗ್ರಾಮ ಪಂಚಾಯಿತಿ ಏಕಾಏಕಿ ನಿಲ್ಲಿಸಿ ಜನಸಾಮಾನ್ಯರ ಬದುಕಿನೊಟ್ಟಿಗೆ ಚೆಲ್ಲಾಟವಾಡುತ್ತಿದೆ. ಜನತಾ ಕಾಲನಿಯಲ್ಲಿ ಎಪ್ಪತ್ತಕ್ಕೂ ಮಿಕ್ಕ ಮನೆಗಳಿದ್ದು, ಮಕ್ಕಳು ಮರಿ ಸೇರಿ ಏಳುನೂರರಷ್ಟು ಜನರಿದ್ದಾರೆ. ಪ್ರತಿದಿನ ಕುಡಿಯುವ ನೀರಿಗಾಗಿ ತಮ್ಮ ಶ್ರಮ ವ್ಯಯ ಮಾಡುತ್ತಿದ್ದಾರೆ. ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆ ಇಳಿದರೆ ಹಿಟ್ಟಿಲ್ಲ. ಈ ಎರಡರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದ್ವಂದ್ವದಲ್ಲಿ ಕಾಲನಿ ಜನರಿದ್ದಾರೆ.

     

    ಇರುವುದು ಎರಡು ಕೊಳವೆ, ಒಂದು ತೆರೆದ ಬಾವಿ. ತೆರದ ಬಾವಿ ಬತ್ತಿ ಒಂದೆರಡು ತಿಂಗಳಾಗಿದೆ. ಮತ್ತೊಂದು ಕೊಳವೆ ಬಾವಿ ನೀರು ನಿಲ್ಲಿಸಿದೆ. ಇರುವ ಒಂದೇ ಕೊಳವೆ ಬಾವಿಯಿಂದ ಇಡೀ ಜನತಾ ಕಾಲನಿ ನೀರು ಪೂರೈಕೆ ಮಾಡಿಕೊಳ್ಳಬೇಕು. ಹತ್ತು ಕೊಡ ನೀರೆತ್ತುವರೆಗೆ ನೀರು ಶುದ್ಧವಾಗಿರುತ್ತದೆ. ನಂತರ ಕೊಳಕು ನೀರು ಕಿಲಬು ವಾಸನೆ. ಅಚ್ಚರಿ ಎಂದರೆ ಪೈಪ್‌ಲೈನ್ ನಳ್ಳಿ ಎಲ್ಲಾ ಫಿಟ್ ಮಾಡಲಾಗಿದೆ. ನಳ್ಳಿ ತಿರುಗಿಸಿದರೆ ಬರೋದು ಗಾಳಿ! ಕುಂದಾಪ್ರ ಡಾಟ್ ಕಾಂ ಸುದ್ದಿ.

    Click here

    Click here

    Click here

    Call us

    Call us


    ಚುನಾವಣೆಗೂ ಮುನ್ನಾ ಗ್ರಾಪಂ ಪ್ರತಿ ಮನೆಗೆ ಐದು ಕೊಡ ನೀರುಕೊಡುತ್ತಿದ್ದು, ಬ್ಯಾನರ್ ವಿಷಯ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ರಾಜಕೀಯ ಪಕ್ಷದ ಮುಖಂಡರೊಬ್ಬರು ಬ್ಯಾನರ್ ತೆಗೆಯಲು ಹೇಳಿದರೂ ತೆಗೆಯಲಿಲ್ಲ ಎಂಬ ಒಂದೇ ಉದ್ದೇಶದಿಂದ ಗ್ರಾಪಂ ನೀರು ಕೊಡುವುದು ನಿಲ್ಲಿಸಿದೆ ಎಂದು ಸ್ಥಳೀಯರು ನೇರವಾಗಿ ಆರೋಪಿಸುತ್ತಾರೆ. ನೀರು ಕೊಡುವಂತೆ ಗ್ರಾಪಂ ಪಿಡಿಒ ಕೇಳಿದರೆ ಅವರು ಕೊಟ್ಟ ಉತ್ತರ.. ಅಧ್ಯಕ್ಷರು ನೀರು ಕೊಡಬಾರದು ಎಂದಿದ್ದಾರೆ ಅದಕ್ಕಾಗಿ ನಿಲ್ಲಿಸಿದ್ದೇವೆ..! ಇಂದೆತಾ ವ್ಯವಸ್ಥೆ.

    • ಚುನಾವಣೆ ಮುಗಿಯುವ ತನಕ ಕಾಲನಿಯ ಮನೆಗೆ ಐದು ಕೊಡ ನೀರಂತೆ ನೀರು ಕಂಬದಕೋಣೆ ಗ್ರಾಮ ಪಂಚಾಯಿತಿ ನೀಡುತ್ತಿತ್ತು. ನಾವು ನಮ್ಮ ಸಮಸ್ಯೆ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದು, ಅದನ್ನೇ ನೆವವಾಗಿಟ್ಟುಕೊಂಡು ಕುಡಿಯುವ ನೀರು ಮತದಾನ ಆದ ಮರುದಿನದಿಂದ ಬಂದ್ ಮಾಡಿದ್ದಾರೆ. ನಾವೆಲ್ಲಾ ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ನೀರು ತಂದು ಸ್ಟಾಕ್ ಮಾಡುವುದಾ ಹೊಟ್ಟೆ ತುಂಬಿಸಿಕೊಳ್ಳುವುದಾ ಎನ್ನೋದು ಗೊತ್ತಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡಿದ್ದರೆ ಕಾಲನಿಯ ಮಹಿಳೆಯರು ಖಾಲಿ ಕೊಡ ಹಿಡಿದು ಕಂಬದಕೋಣೆ ಗ್ರಾಪಂ ಮುಂದೆ ಧರಣಿ ನಡೆಸುತ್ತೇವೆ. – ಚಂದು, ಸ್ಥಳೀಯ ಹಿರಿಯ ಮಹಿಳೆ

     

    • ಕೊಳವೆ ಬಾವಿಯಿಂದ ಎಷ್ಟು ಜೋರು ನೀರು ಜಗ್ಗಿದರೂ ಕಿರುಬೆರಳಿನ ಗಾತ್ರದಲ್ಲಿ ನೀರು ಬರುತ್ತದೆ. ಒಂದು ಕೊಡ ನೀರು ತುಂಬಿಸಕೊಳ್ಳುವದರಲ್ಲಿ ಕೊಳವೆ ಬಾವಿ ಹ್ಯಾಂಡಲ್ ಹೊಡೆದು ಎದೆ ನೋವು ಆರಂಭವಾಗುತ್ತದೆ. ನೀರು ಕೂಡಾ ಕಿಲುಬಾಗಿದ್ದು, ನೀರಲ್ಲಿ ಕಬ್ಬಿಣಿದ ಕಿಲುಬು ಬರುತ್ತಿದ್ದು, ಅದನ್ನು ಕೊಡಿದ ನಮ್ಮ ಆರೋಗ್ಯ ಹಾಳಾದರೆ ಮದ್ದು ಮಾಡೋದು ಯಾರು? ಗ್ರಾಪಂ ಪಿಡಿಒ ನೀರು ಕೊಡುವಂತೆ ಕೇಳಿದರೆ ಅಧ್ಯಕ್ಷರು ನೀರು ಕೊಡಬಾರದು ಎಂದು ಹೇಳಿದ್ದು, ಅಧ್ಯಕ್ಷರನ್ನೇ ಕೇಳಿ ಎಂದು ನಮಗೆ ಧಮ್ಕಿ ಹಾಕುತ್ತಾರೆ. ಚುನಾವಣೆ ಬಹಿಷ್ಕಾರಕ್ಕೂ ಕುಡಿಯುವ ನೀರಿಗೂ ಎತ್ತಿಂದೆತ್ತ ಸಂಬಂಧ. – ರಾಜೀವಿ, ಜನತಾ ಕಾಲನಿ.

     

    • ಕಂಬದಕೋಣೆ ಗ್ರಾಮ ಸ್ಥಳೀಯ ಗ್ರಾಪಂ ಸದಸ್ಯ ನನ್ನ ಗಮನಕ್ಕೂ ತಾರದೆ, ಕುಡಿಯುವ ನೀರು ಏಕಾಏಕಿ ನಿಲ್ಲಿಸಿದ್ದು ಅಕ್ಷಮ್ಯ. ಇಡೀ ಕಾಲನಿ ವಾಸಿಗಳು ನೀರಿಗಾಗಿ ಪರದಾಡುತ್ತಿದ್ದು, ಮಾನವೀಯತೆ ಮರೆತ ಗ್ರಾಪಂ ಕುಡಿಯುವ ನೀರು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನೀರು ಕೊಡದಿದ್ದರೆ ಹೋರಾಟ ಅನಿವಾರ್ಯ. – ಶೇಷು ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಕಂಬದಕೋಣೆ.

     

    • ಕಂಬದಕೋಣೆ ಗ್ರಾಮ ಪಂಚಾಯಿತಿ ಜನತಾ ಕಾಲಿನಿಗೆ ನೀರು ಪೂರೈಕೆ ಮಾಡುತ್ತಿರುವುದನ್ನು ನಿಲ್ಲಿಸಿರುವುದು ಏಕೆ ಎಂದು ಗ್ರಾಪಂ ಬಿಡಿಒ ಮೂಲಕ ತಿಳಿದು, ತಕ್ಷಣ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಲಾಗುತ್ತದೆ. ಮತದಾನ ಬಹಿಷ್ಕಾರ ಮುಂದಿಟ್ಟುಕೊಂಡು ಕುಡಿಯುವ ನೀರು ವ್ಯವಸ್ಥೆ ನಿಲ್ಲಿಸಿರುವುದು ತಪ್ಪು. – ಡಾ| ಮಧುಕೇಶ್ವರ, ಎಸಿ, ಕುಂದಾಪುರ

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ

    05/12/2025

    ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ

    05/12/2025

    ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

    05/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d