Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನೊಂದ ಜೀವಗಳಿಗೆ ಆಸರೆಯಾಗುತ್ತಿದೆ ‘ಅಪ್ಪ -ಅಮ್ಮ’ ಅನಾಥಾಶ್ರಮ
    ಉಡುಪಿ ಜಿಲ್ಲೆ

    ನೊಂದ ಜೀವಗಳಿಗೆ ಆಸರೆಯಾಗುತ್ತಿದೆ ‘ಅಪ್ಪ -ಅಮ್ಮ’ ಅನಾಥಾಶ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಬ್ರಹ್ಮಾವರ: ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರು, ಬೀದಿ ಬದಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ತಿರುಗುವವರು, ಮನೆಯಲ್ಲಿ ಎಲ್ಲ ಇದ್ದು ಇಲ್ಲದಂತೆ ಶೋಚನೀಯ ಬದುಕನ್ನು ಸಾಗಿಸುವರು. ಇವರೆಲ್ಲರಿಗೂ ಒಂದು ಬದುಕಿದೆ ಅಂತ ಅನಿಸಿದರೂ ಸಾಕಷ್ಟು ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ.

    Click Here

    Call us

    Click Here

    ಆದರೆ ಪ್ರಶಾಂತ್ ಪೂಜಾರಿ ಕೂರಾಡಿ ಎಂಬ ಈ ಕರುಣಾಮಯಿ ಯುವಕನೋರ್ವ ದುಬೈನಲ್ಲಿ ಹತ್ತು ವರ್ಷ ದುಡಿದು ಬಳಿಕ ಆ ಕೆಲಸವನ್ನು ತೊರೆದು ಊರಿಗೆ ಮರಳಿದ್ದಲ್ಲದೇ ಅಸಹಾಯಕರ ನೋವಿಗೂ ಸ್ಪಂದಿಸುತ್ತಿದ್ದಾರೆ. ಅವರಿಗಾಗಿಯೇ ಅಪ್ಪ-ಅಮ್ಮ ಅನಾಥಾಶ್ರಮ ಎಂಬ ಸೂರು ನಿರ್ಮಿಸಿ ತನ್ನ ಹಗಲು-ಇರುಳಿನ ದುಡಿಮೆಯ ಜೊತೆ ಅವರಿವರು ಸಹಕಾರದಿಂದ 20 ಜನರ ಬಾಳಿಗೆ ಬೆಳಕಾಗುತ್ತಿದ್ದಾರೆ.

    ಬ್ರಹ್ಮಾವರದ ಆಕಾಶವಾಣಿ ಸಮೀಪದಲ್ಲಿರುವ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಅವರ ಅಪ್ಪ-ಅಮ್ಮ ಅನಾಥಾಲಯ ನೊಂದವರ ಬದುಕಿಗೆ ಆಧಾರ ಸ್ಥಂಭವಾಗಿ ಹಲವಾರು ಹಿರಿಯ ಜೀವಗಳ ಕಣ್ಣೀರ ಒರೆಸುವ ಕೆಲಸ ಮಾಡುತ್ತಿದೆ. ಅನಾಥಾಲಯ ಸ್ಥಾಪಿಸಿ 18 ತಿಂಗಳು ಕಳೆದಿದ್ದು ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಅನಾಥರು ಸೇರಿದಂತೆ 38 ಜನರಿಗೆ ಪುನರ್ವಸತಿ ಕಲ್ಪಿಸಿದ್ದಾರೆ. 19 ಜನರ ಅಪರಿಚಿತರ ವಿಳಾಸ ಪತ್ತೆಗೊಳಿಸಿ ಮನೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಶ್ರಮದಲ್ಲಿ 20 ಜನ ಹಿರಿಯ ನಾಗರಿಕರನ್ನು ಅನಾಥ ಪ್ರಜ್ಞೆ ಕಾಡದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಎಲ್ಲವನ್ನೂ ಉಚಿತವಾಗಿಯೇ ನಿಭಾಯಿಸುತ್ತಿದ್ದಾರೆ.

    ಇಷ್ಟೇ ಅಲ್ಲದೇ ಉಚಿತ ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ, ಹಾಗೆ ಉಡುಪಿ ಜಿಲ್ಲೆಯ ಕಾಡೂರು ಪಂಚಾಯತ್ ಮುಂಡಾಡಿ ಗ್ರಾಮದ ಶೌಚಾಲಯ ಹೊಸ ಮನೆ ನಿರ್ಮಿಸುವಲ್ಲಿ ಅವರ ಶ್ರಮ -ಕೊಡುಗೆ ದೊಡ್ಡದಿದೆ.

    ತಮ್ಮನ್ನು ಹೆತ್ತು ಹೊತ್ತು ಸಲಹಿದ ಸ್ವಂತ ತಂದೆ-ತಾಯಿಯರನ್ನು ಬೀದಿ ಪಾಲು ಮಾಡುವ ಕೆಲವು ಸ್ವಾರ್ಥಿಗಳ ನಡುವೆ ಹಿರಿಯ ನಾಗರಿಕರು, ನಿರ್ಗತಿಕರು, ಅನಾಥರಿಗೆ ಹೊಸ ಜೀವನ ನೀಡಿ ಅವರು ನಮ್ಮಂತೆ ಬದುಕು ಸಾಗಿಸಬೇಕು ಎನ್ನುವ ಪ್ರಶಾಂತ ಪೂಜಾರಿ ಎನ್ನುವ ಯುವಕನ ನಿಸ್ವಾರ್ಥ ಸೇವೆಗೆ ಮೆಚ್ಚಲೇಬೇಕಾದ್ದು.

    Click here

    Click here

    Click here

    Call us

    Call us

    ನೀವೂ ಸ್ಪಂದಿಸಿ:
    ಅಪ್ಪ-ಅಮ್ಮ ಅನಾಥಾಲಯಕ್ಕೆ ಹಣ ಅಥವಾ ವಸ್ತುವಿನ ರೂಪದಲ್ಲಿ ಸಹಾಯ ಮಾಡಲು ಮನಸ್ಸಿರುವವರು ಪ್ರಶಾಂತ್ ಪೂಜಾರಿ, ಸಂಚಾಲಕರು (9164765898) ಅಪ್ಪ-ಅಮ್ಮ ಅನಾಥಾಲಯ, ಬ್ರಹ್ಮಾವರ, ಪೆಟ್ರೋಲ್ ಬಂಕ್ ಬಳಿ, ನೇರವಾಗಿ ತಲುಪಿಸಿ ಅಥವಾ ಗಿರಿಜಾ ಕೃಷ್ಣ ಚಾರಿಟೇಬಲ್ ಟ್ರಸ್ಟ್(ರಿ) ಕೂರಾಡಿ ಖಾತೆ ಸಂಖ್ಯೆ -021030700001450 IFSC code-SYNB0000210, GOOGLE PAY – 9164765898ಗೆ  ಜಮಾ ಮಾಡಬಹುದು.

    ಸಮಾಜದಲ್ಲಿ ಎಲ್ಲಾ ಇದ್ದು ಯಾರು ಇಲ್ಲದ ಹಾಗೆ ಬದುಕುವುದು ತುಂಬಾ ನೋವಿನ ಸಂಗತಿ. ನಿರ್ಗತಿಕರು, ಅನಾಥರಿಗೆ ಹೊಸ ಬದುಕು ಕಲ್ಪಿಸುವ ಇಂಗಿತ ನಮ್ಮದು, ಸರಕಾರ ಇದರ ಬಗ್ಗೆ ಕಾಳಜಿ ವಹಿಸಿ ಸಹಕಾರ ನೀಡಬೇಕು, ಅವರು ನಮ್ಮಂತೆ ಬದುಕುವಂತೆ ದಾರಿ ತೋರಬೇಕು. -ಪ್ರಶಾಂತ್ ಪೂಜಾರಿಸಂಚಾಲಕರು, ಅಪ್ಪ-ಅಮ್ಮ ಅನಾಥಾಲಯ

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್ ರೆಕಾರ್ಡ್ ಕ್ರಿಯೇಟ್‌ಗೈದ ಮಂಜುನಾಥ ಅವರಿಗೆ ಪ್ರಶಸ್ತಿ ಪ್ರದಾನ

    08/12/2025

    ಸ್ವಚ್ಛತೆ ಎಂಬುವುದು ಮನೆಮನಗಳನ್ನು ತಲುಪಲಿ: ಸಂಸದ ಕೋಟ

    08/12/2025

    ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    08/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್ ರೆಕಾರ್ಡ್ ಕ್ರಿಯೇಟ್‌ಗೈದ ಮಂಜುನಾಥ ಅವರಿಗೆ ಪ್ರಶಸ್ತಿ ಪ್ರದಾನ
    • ಕುಂದಾಪುರದ ರಚಿತಾಗೆ ಕರ್ನಾಟಕ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ನಾಯಕತ್ವ
    • ಕುಂದಾಪುರ: ಡಿ.15ರಿಂದ ಅಣಬೆ ಮತ್ತು ಜೇನು ಕೃಷಿ ತರಬೇತಿ
    • ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿರ್ವಾಣ ದಿನ
    • ಸ್ವಚ್ಛತೆ ಎಂಬುವುದು ಮನೆಮನಗಳನ್ನು ತಲುಪಲಿ: ಸಂಸದ ಕೋಟ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d