ವಂಡ್ಸೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಕನ್ನ

Click Here

Call us

Call us

Call us

ಕುಂದಾಪುರ: ತಾಲೂಕಿನ ವಂಡ್ಸೆ ಪೇಟೆಯಲ್ಲಿರುವ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಭದ್ರ ಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಸುಮಾರು 81,000ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

Call us

Click Here

ಎಂದಿನಂತೆ ದೇವರ ಪೂಜೆಗಾಗಿ ಅರ್ಚಕರು ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಖ್ಯದ್ವಾರವನ್ನು ತೆರೆಯಲು ಬಂದಾಗ ದೇವಳದ ಬಾಗಿಲಿನ ಬೀಗ ಒಡೆದಿರುವುದು ಗೊತ್ತಾಗಿದೆ. ದೇವಳದ ಗರ್ಭಗುಡಿಗೆ ನುಗ್ಗಿದ ಕಳ್ಳರು 1.5ಕೆ.ಜಿ ತೂಕದ ಬೆಳ್ಳಿಯ ಪ್ರಭಾವಳಿ, 1 ಬೆಳ್ಳಿಯ ಕೊಡೆ, 4 ಬೆಳ್ಳಿಯ ಪತಾಕೆ ಕಳುವುಗೈದಿದ್ದಾರೆ. ಒಟ್ಟು 81,000ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆಂದು ಎಂದು ಅಂದಾಜಿಲಾಗಿದೆ.

ಬಳಿಕ ಸಮೀಪದ ಭದ್ರ ಮಹಾಕಾಳಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿನ ಸುಮಾರು ೧,೦೦೦ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಆಗಮಿಸಿ ತನಿಕೆ ನಡೆಸಿದೆ. ಕುಂದಾಪುರದ ಡಿವೈಎಸ್ಪಿ ಮಂಜುನಾಥ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ್, ಕೊಲ್ಲೂರು ಠಾಣಾಧಿಕಾರಿ ಜಯಂತ್ ಭೇಟಿ ನೀಡಿ ತನಿಕೆ ಮುಂದುವರಿಸಿದ್ದಾರೆ.

Click here

Click here

Click here

Call us

Call us

Leave a Reply