ಕುಂದಾಪುರ: ಕಾರ್ಟೂನ್ ಹಬ್ಬಕ್ಕೆ ಚಾಲನೆ ನೀಡಿದ ಬಾಲಿವುಡ್ ನಟ ಸೋನು ಸೂದ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಲಾಕ್ಷೇತ್ರದಲ್ಲಿ ನಡೆದ 7ನೇ ವರ್ಷದ ರಾಜ್ಯಮಟ್ಟದ ಕಾರ್ಟೂನ್ ಹಬ್ಬಕ್ಕೆ ಬಾಲಿವುಡ್ ನಟ ಸೋನು ಸೂದ್ ವರ್ಚುವಲ್ ಆಗಿ ಚಾಲನೆ ನೀಡಿದರು.

Call us

Click Here

ಬಳಿಕ ಅವರು ಗೋ ಕೊರೊನಾ ಗೋ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕೊರೊನಾ ಮುಕ್ತವಾಗಲು ಎಲ್ಲರೂ ಒಟ್ಟಾಗಬೇಕು. ಕೊರೊನಾ ನಿರ್ಮೂಲನವಾಗಬೇಕು ಕೊರೊನಾ ಕುರಿತಾದ ಕಾರ್ಟೂನ್‌ಗಳಿಸಿರುವ ಸತೀಶ್ ಆಚಾರ್ಯ ಅವರ ಪುಸ್ತಕ ಬಿಡುಗಡೆ ಮಾಡಲು ಸಂತಸವಾಗುತ್ತಿದೆ ಎಂದು ಹೇಳಿದರು.

ಸಹಾಯಕ ಕಮಿಷನರ್ ಕೆ. ರಾಜು ಅವರು ಮಾಸ್ಕ್ ಧರಿಸಿ ಕಿರುನಗೆ ಸೂಸುವ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ, ಕಾರ್ಟೂನ್‌ಗಳಿಂದ ದೊರೆಯುವ ಸಂದೇಶ ಅದ್ಭುತವಾದದ್ದು ಈ ಬಾರಿ ಕೊರೊನಾ ಕೇಂದ್ರಿತವಾಗಿ ಕಾರ್ಟೂನ್ ಹಬ್ಬ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಭಯ ಕಡಿಮೆಯಾಗಲು. ನಿಯಂತ್ರಣದಲ್ಲಿರಲು ಸುಶಿಕ್ಷಿತ ಜನರೇ ಕಾರಣ. ಆದ್ದರಿಂದ ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರೇ ಕೊರೊನಾ ಯೋದರು ಎಂದರು.

ಕೋವಿಡ್ ಕೇರ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ. ನಾಗೇಶ್, ಪಾರಿಜಾತ ಹೋಟೆಲ್ ಮಾಲಕ ಗಣೇಶ್ ಭಟ್, ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷ ನಾಗರಾಜ್ ದಫೇದಾರ್ ಉಪಸ್ಥಿತರಿದ್ದರು.

ಪ್ರದರ್ಶನ ಕೋವಿಡ್ ಹಿನ್ನಲೆಯಲ್ಲಿ ನಿಯಮಾವಳಿಗಳ ಪಾಲನೆ ಮಾಡುತ್ತಾ ಚಿತ್ರ ಪ್ರದರ್ಶನ ನಡೆಯಿತು. ದೇಶದ ನಾನಾ ಭಾಗದ ವ್ಯಂಗ್ಯ ಚಿತ್ರಕಾರರು ಕೊರೊನಾ ಕುರಿತಾಗಿ ಬಿಡಿಸಿದ ನೂರಾರು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಕಲಾಂ ಅವರ ಸೇರಿದಂತೆ ವಿವಿಧ ಕಲಾಕೃತಿಗಳ ಮಾದರಿಗಳಿದ್ದವು. ಕಾರ್ಟೂನು ಕಾರ್ಯಗಾರ ನಡೆಯಿತು ಅವಿನಾಶ್ ಕಾಮತ್ ನಿರ್ವಹಿಸಿದರು. ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು.

Click here

Click here

Click here

Click Here

Call us

Call us

Leave a Reply