Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ ರಕ್ಷಾಬಂಧನ
    ತನ್ನಿಮಿತ್ತ

    ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ ರಕ್ಷಾಬಂಧನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಅಣ್ಣ ಎಂದರೆ ಅವಳಿಗೆ ಜೀವ. ಅವನಿಗೂ ಅಷ್ಟೇ ತಂಗಿ ಎಂದರೆ ತನ್ನದೇ ಒಂದು ಭಾಗವಿದ್ದಂತೆ. ಅ ಸಂಬಂಧವೇ ಹಾಗೆ. ಅಲ್ಲಿ ಮೊಗೆದಷ್ಟು ಪ್ರೀತಿ, ಅಲ್ಪ ಹೊಟ್ಟೆಕಿಚ್ಚು, ಒಮ್ಮೊಮ್ಮೆ ಹೊಡೆದಾಟ. ಆದ್ರೆ ಇದೆಲ್ಲವನ್ನು ಮೀರಿದ ಬಾಂಧವ್ಯವೊಂದಿದೆಯಲ್ಲ ಅದನ್ನು ಬಣ್ಣಿಸಲಾಗದು. ಪ್ರತಿ ಅಣ್ಣ- ತಂಗಿಯರಲ್ಲಿನ ಮಧುರ ಭಾವನೆ ಅದು. ಈ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನವೇ ರಕ್ಷಾಬಂಧನ. ತನ್ನ ಅಣ್ಣ-ತಮ್ಮಂದಿರು ಯಾವಾಗಲೂ ನಗುತ್ತಿರಬೇಕೆಂದು ಸಹೋದರಿ ಆಶಿಸುತ್ತಾಳೆ. ಸಹೋದರಿಗೆ ನೆರಳಾಗಿ ನಿಲ್ಲಬೇಕು ಎಂದು ಆ ಸಹೋದರ ಬಯಸುತ್ತಾನೆ. ಅಣ್ಣ-ತಂಗಿಯರ ಭಾಂಧವ್ಯದ ಸಂಕೇತವಾದ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆಗೆ ಭಾರತೀಯ ಸಂಸ್ಕ್ರತಿಯಲ್ಲಿ ತನ್ನದೇ ಆದ ಮಹತ್ವ ಇದೆ.

    ಹಿಂದೂ ಸಂಪ್ರದಾಯದಂತೆ ಶ್ರಾವಣ ಮಾಸದ ಹುಣ್ಣಿಮೆಯಂದು ಯಜುರ್ವೇದ ಉಪಕರ್ಮವನ್ನು(ನೂಲು ಹುಣ್ಣಿಮೆ) ಚತುರ್ದಶಿಯಂದು ಋಗ್ವೇದ ಉಪಕರ್ಮವನ್ನು ಆಚರಿಸಲಾಗುತ್ತದೆ. ಯಜುರ್ವೇದ ಉಪಕರ್ಮದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ.

    Click Here

    Call us

    Click Here

    ರಕ್ಷಾ ಬಂಧನಕ್ಕೊಂದು ಪೌರಾಣಿವಾದ ಹಿನ್ನೆಲೆ ಇದೆ. ಅಂದು ಇಂದ್ರನು ಯುದ್ದದಲ್ಲಿ ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಆತ ಬೃಹಸ್ಮತಿಯ ಸಲಹೆ ಮೇರೆಗೆ ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೂ ಏನೋ ಇಂದ್ರ ಆ ಯುದ್ಧದಲ್ಲಿ ಗೆಲ್ಲುತ್ತಾನೆ. ಹಾಗಾಗಿಯೇ ಆ ದಿನವನ್ನು ರಕ್ಷಾ ಬಂಧನ ಎಂದು ಕರೆಯಲಾಯಿತೆಂಬ ಕಥೆ ಪ್ರಚಲಿತದಲ್ಲಿದೆ.

    ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ರಾಖಿ ಹಬ್ಬ ಇಂದು ಭಾರತದಾದ್ಯಂತ ಹರಡಿದೆ. ಜಾತಿ ಭೇದವಿಲ್ಲದೇ ಎಲ್ಲರೂ ಸಂಭ್ರಮಿಸುತ್ತಾರೆ. ಮಾರುಕಟ್ಟೆಯಲ್ಲಿ ತಿಂಗಳುಗಳ ಹಿಂದೆ ಬಂದ ವಿಧ ವಿಧದ ರಾಖಿಗಳನ್ನು ಖರೀದಿಸಿ ಬಂದಿದ್ದಾರೆ ಅಕ್ಕ-ತಂಗಿಯರು.

    ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಖಂಡಿತವಾಗಿಯೂ ರಕ್ಷಬಂಧನ ಎಂಬುದು ತಂಗಿಗೆ ಅಣ್ಣನೆಡೆಗಿನ ಅಕ್ಕರೆಯನ್ನು, ಅಣ್ಣನಿಗೆ ತಂಗಿಯೆಡೆಗಿನ ಕಾಳಜಿಯನ್ನು ಹೊರಹಾಕುವ, ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನ. ಸಮಾಜದ ದುಷ್ಟಶಕ್ತಿಗಳಿಂದ ತನ್ನನ್ನು ರಕ್ಷಿಸೆಂದು ಸಹೋದರಿಯು, ಸಹೋದರನಿಗೆ ರಾಖಿ ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗಿನ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು  ರಕ್ಷಾ ಬಂಧನದ ನೀತಿಯಾಗಿದೆ. ಆತನ ಅಭಿವೃದ್ಧಿಗೆ ಹಾರೈಸುವ ಅಕ್ಕ-ತಂಗಿಯರು ರಾಖಿ ಕಟ್ಟಿದ ಬಳಿಕ ಉಡುಗೊರೆ ಪಡೆದು, ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸುವುದು ರೂಡಿಯಾಗಿದೆ.

    ತಂಗಿ ಕಟ್ಟುವ ರಾಖಿಗೆ ಕೈಯೊಡ್ಡಿ ಸಂಭ್ರಮಿಸುತ್ತಿರುವ; ದೂರದಲ್ಲಿರುವ ತಂಗಿ ಕಳಿಸುವ ರಾಖಿಗಾಗಿ ಹಂಬಲಿಸುತ್ತಿರುವ; ಅಣ್ಣ ಕೊಡಬಹುದಾದ ಉಡುಗೊರೆಗಾಗಿ ಕಾಯುತ್ತಿರುವ; ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವ ಎಲ್ಲರಿಗೂ ಕುಂದಾಪ್ರ ಡಾಟ್ ಕಾಂ ಕಡೆಯಿಂದ ರಕ್ಷಾ ಬಂಧನ ಹಾಗೂ ನೂಲು ಹುಣ್ಣಿಮೆಯ ಶುಭಾಶಯಗಳು.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ
    • ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d