Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಇಂಗ್ಲೆಂಡ್‌ನ ‘ಪ್ರೆಸ್ಟನ್ ಸಿಟಿ ಮೇಳ’ದಲ್ಲಿ ಯಕ್ಷಗಾನದ ರಂಗು
    ಊರ್ಮನೆ ಸಮಾಚಾರ

    ಇಂಗ್ಲೆಂಡ್‌ನ ‘ಪ್ರೆಸ್ಟನ್ ಸಿಟಿ ಮೇಳ’ದಲ್ಲಿ ಯಕ್ಷಗಾನದ ರಂಗು

    Updated:12/09/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಮಧ್ಯ ಇಂಗ್ಲೆಂಡ್‌ನ ಪ್ರೆಸ್ಟನ್ ನಗರದಲ್ಲಿ ಈಚೆಗೆ ನಡೆದ 19ನೆಯ ದಕ್ಷಿಣ ಏಷಿಯಾ ಸಾಂಸ್ಕೃತಿಕ ಉತ್ಸವ ‘ಪ್ರೆಸ್ಟನ್ ಸಿಟಿ ಮೇಳ’ದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಯಾದ ಯಕ್ಷಗಾನದ ಕಿರು ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು ಎಂದು ಹಗಲಿಡೀ ನಡೆದ ಮೇಳದ ಪ್ರೇಕ್ಷಕರಾಗಿದ್ದ ಅನಿವಾಸಿ ಕನ್ನಡಿಗ ಡಾ. ಲಕ್ಷ್ಮೀನಾರಾಯಣ ಗುಡೂರು ತಿಳಿಸಿದ್ದಾರೆ.

    Click Here

    Call us

    Click Here

    ‘ಮೇಳ’ ಎಂಬ ಭಾರತೀಯ ಪರಿಕಲ್ಪನೆಯ ಈ ಬಹುಸಂಸ್ಕೃತಿಯ ಕಲಾ ಪ್ರದರ್ಶನದಲ್ಲಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ದಕ್ಷಿಣ ಏಷಿಯಾ ಮೂಲದ ಹೆಸರಾಂತ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ, ವಾದ್ಯಗೋಷ್ಠಿ, ಸಿನಿಡಾನ್ಸ್, ಬಾಂಗ್ಡಾ ನೃತ್ಯ ಇತ್ಯಾದಿ ಪ್ರದರ್ಶನಗೊಳ್ಳುತ್ತವೆ. ಆರ್ಟ್ಸ್ ಕೌನ್ಸಿಲ್ ಆಫ್ ಇಂಗ್ಲೆಂಡ್ ಮತ್ತು ಪ್ರೆಸ್ಟನ್ ಸಿಟಿ ಕೌನ್ಸಿಲ್ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಪ್ರೆಸ್ಟನ್ ನಗರದಲ್ಲಿ ನಡೆಯುವ ವೈವಿಧ್ಯಮಯ ಕಲೆಗಳ ಪ್ರದರ್ಶನ ನೋಡಲು ಏಷಿಯಾ ಮೂಲದವರಲ್ಲದೆ ಸ್ಥಳೀಯ ವಾಸಿಗಳಾದ ಆಂಗ್ಲರೂ ಬರುತ್ತಾರೆ.

    ಇಂಗ್ಲೆಂಡ್‌ನ ಪ್ರೆಸ್ಟನ್ ಮೇಳದಲ್ಲಿ ಪ್ರಸ್ತುತಗೊಂಡ ಯಕ್ಷಗಾನ ಪ್ರದರ್ಶನ

    ಇಂಗ್ಲೆಂಡ್‌ನಲ್ಲಿ ದೀರ್ಘಕಾಲದಿಂದ ‘ಅನ್ನಪೂರ್ಣ ಇಂಡಿಯನ್ ಡಾನ್ಸ್’ ಸಂಸ್ಥೆಯನ್ನು ನಡೆಸುತ್ತಿರುವ ಕುಂದಾಪುರ ಮೂಲದ ಹಿರಿಯ ಕಲಾವಿದೆ ಶಾಂತಾ ರಾವ್ ಅವರ ಉಪಕ್ರಮದಿಂದ ಈ ವರ್ಷದ ಪ್ರೆಸ್ಟನ್ ಕಲಾ ಮೇಳದಲ್ಲಿ ಯಕ್ಷಗಾನವನ್ನು ಪರಿಚಯಿಸಲಾಯಿತು. ಕೆಲವು ವರ್ಷಗಳಿಂದ ಇಂಗ್ಲೆಂಡ್‌ನ ಬ್ರಿಸ್ಟಲ್ ನಗರದಲ್ಲಿ ನೆಲೆಸಿ, ವಿವಿಧೆಡೆ ಯಕ್ಷಗಾನದ ತುಣುಕುಗಳ ಪ್ರದರ್ಶನ ನೀಡುತ್ತಿರುವ ಯೋಗೀಂದ್ರ ಮರವಂತೆ, ಅವರ ಪುತ್ರಿ ಸುನಿಧಿ ಮರವಂತೆ, ಆಯೋಜಕರ ಅಪೇಕ್ಷೆಯಂತೆ ನೃತ್ಯ ಪ್ರಧಾನವಾದ ವನವಿಹಾರದ ದೃಶ್ಯವನ್ನು ಬಯಲು ರಂಗದಲ್ಲಿ ಸಾದರಪಡಿಸಿದರು.

    ಪ್ರದರ್ಶನ ಪೂರ್ವದಲ್ಲಿ ಸಣ್ಣ ಟೆಂಟ್‌ಅನ್ನು ಚೌಕಿಮನೆ ಮಾಡಿಕೊಂಡು ತಂದೆ, ಮಗಳು ಮಾಡಿಕೊಂಡ ಬಣ್ಣಗಾರಿಕೆ, ವೇಷ ತೊಡುವ ಕ್ರಿಯೆ ಕೂಡ ಪ್ರೇಕ್ಷಕರನ್ನು ಸೆಳೆಯಿತು. ಪ್ರದರ್ಶನದುದ್ದಕ್ಕೂ ಪ್ರೇಕ್ಷಕರಿಂದ ಪ್ರಶಂಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ನೃತ್ಯ, ಅಭಿನಯವನ್ನು ಅನುಕರಿಸಲೆತ್ನಿಸುತ್ತಿದ್ದುದೂ ಕಂಡು ಬಂತು. ಹಿಮ್ಮೇಳಕ್ಕೆ ಹೊಂದಿಕೊಂಡು ಮಾಡಿದ್ದ ನೃತ್ಯ, ಅಭಿನಯ, ಭಾವಾಭಿವ್ಯಕ್ತಿ ತುಂಬ ಅಚ್ಚುಕಟ್ಟಾಗಿ ಮೂಡಿಬಂದಿತ್ತು. ಹಾಡಿನ ಭಾವಾರ್ಥವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಪ್ರೆಸ್ಟನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಯಕ್ಷಗಾನದ ತುಣುಕು ಅದರ ಪರಿಚಯವೇ ಇಲ್ಲದ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರಾಂತೀಯ ಪತ್ರಿಕೆಗಳಲ್ಲಿ, ಪ್ರೆಸ್ಟನ್ ನಗರದ ಫೇಸ್ಬುಕ್ ಪುಟಗಳಲ್ಲಿ ಯಕ್ಷಗಾನ ಪ್ರದರ್ಶನದ ಚಿತ್ರಗಳು ಪ್ರಕಟಗೊಂಡಿವೆ ಎಂದು ಡಾ, ಲಕ್ಷ್ಮೀನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.

    ಯೋಗೀಂದ್ರ ಮರವಂತೆ, ಪುತ್ರಿಯ ಜತೆಗೆ ಬೈಂದೂರು ಮೂಲದ ಡಾ. ಗುರುಪ್ರಸಾದ ಪಟ್ವಾಲ್ ಸೇರಿಕೊಂಡು ಇಂಗ್ಲೆಂಡ್‌ನಲ್ಲಿ ನೀಡುವ ಪ್ರದರ್ಶನಗಳಿಗೆ ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಗಾರ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆವಾದಕ ರಾಕೇಶ ಮಲ್ಯ ಹಳ್ಳಾಡಿ ಅವರ ಧ್ವನಿಮುದ್ರಿತ ಹಿಮ್ಮೇಳವನ್ನು, ಉಪ್ಪುಂದದ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ ಸಿದ್ಧಪಡಿಸಿರುವ ಪೋಷಾಕುಗಳನ್ನು ಬಳಸಿಕೊಳ್ಳುತ್ತಾರೆ.

    Click here

    Click here

    Click here

    Call us

    Call us

    • ಪ್ರೆಸ್ಟನ್ ಮೇಳದಲ್ಲಿ ಪ್ರಸ್ತುತಗೊಂಡ ಯಕ್ಷಗಾನ ಪ್ರದರ್ಶನ
    • ವೇಷ ಧರಿಸಿಕೊಳ್ಳುತ್ತಿರುವ ಯೋಗೀಂದ್ರ ಮರವಂತೆ
    • ಪ್ರದರ್ಶನಕ್ಕೆ ದೊರೆತ ಸಹೃದಯಿ ಪ್ರೇಕ್ಷಕರ ಸ್ಪಂದನೆ

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

    05/12/2025

    ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು

    05/12/2025

    ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ

    05/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d