Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅಪಘಾತವಾದಾಗ ಪೋಟೋ ಕ್ಲಿಕ್ಕಿಸುವುದು ಮಾನವೀಯತೆಯಲ್ಲ: ಎಸ್ಪಿ ಅಣ್ಣಾಮಲೈ
    ಉಡುಪಿ ಜಿಲ್ಲೆ

    ಅಪಘಾತವಾದಾಗ ಪೋಟೋ ಕ್ಲಿಕ್ಕಿಸುವುದು ಮಾನವೀಯತೆಯಲ್ಲ: ಎಸ್ಪಿ ಅಣ್ಣಾಮಲೈ

    Updated:25/10/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಉಡುಪಿ: ರಸ್ತೆ ಅಪಘಾತ ನಡೆದಾಗ ಅಲ್ಲಿ ಬಿದ್ದವರ ಪೊಟೋ ಕ್ಲಿಕ್ಕಿಸಿ ಅದನ್ನು ಫೇಸ್‌ಬುಕ್‌, ವಾಟ್ಸ್‌ಪ್‌ಗೆ  ಅಪ್‌ಲೋಡ್‌ ಮಾಡಿ ಅನಾಗರೀಕತೆ ತೋರ್ಪಡಿಸುವ ಬದಲಿಗೆ ಆ ಸಮಯದಲ್ಲಿ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆಯಬೇಕು ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಕರೆ ನೀಡಿದರು.

    Click Here

    Call us

    Click Here

    ಅಪಘಾತ ನಡೆದ ಕೂಡಲೇ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೆಲವರು ಪೊಲೀಸ್‌, ಕೋರ್ಟ್‌ ಭಯದಿಂದ ಹಿಂಜರಿಯುತ್ತಾರೆ. ಹೀಗೆ ಭಯಪಡಬೇಕಾಗಿಲ್ಲ. ಅಪಘಾತವನ್ನು ಮೊದಲು ನೋಡಿದವನನ್ನಾಗಲಿ, ಆಸ್ಪತ್ರೆಗೆ ದಾಖಲಿಸಿದವನನ್ನಾಗಲಿ ಪೊಲೀಸರು ಒತ್ತಾಯಪಡಿಸಿ ಸಾಕ್ಷಿದಾರನನ್ನಾಗಿ ಮಾಡುವಂತಿಲ್ಲ. ನ್ಯಾಯಾಲಯ ಕೂಡ ಪ್ರಶ್ನಿಸುವುದಿಲ್ಲ. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೆ ಸಹಾಯ ಮಾಡಬಹುದು. ಒಂದು ವೇಳೆ ಅಗತ್ಯ ಬಿದ್ದಾಗ ಸಾಕ್ಷಿ ಹೇಳಿದರೆ ಅಪಘಾತದಿಂದ ನಿಜವಾಗಿ ಅನ್ಯಾಯಕ್ಕೊಳಗಾದವನಿಗೆ ವಿಮಾ ಪರಿಹಾರ ಮತ್ತಿತರ ಪರಿಹಾರ ಧನ ದೊರೆಯಲು ಸಹಾಯವಾಗುತ್ತದೆ. ಸಹಾಯ ಮಾಡಿದವರು ಬಯಸಿದರೆ ಮಾತ್ರ ಸಾಕ್ಷಿಯಾಗುತ್ತಾರೆ ಎಂದು ಅವರು ರಸ್ತೆ ಅಪಘಾತ ದೇಶದ ದೊಡ್ಡ ರೋಗದಂತಾಗಿದೆ. ನಾಲ್ಕು ನಿಮಿಷ ಕ್ಕೋರ್ವರು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ಇಂತಹ ಅಪಘಾತಗಳಾದಾಗ ಸಾರ್ವಜನಿಕರ ತುರ್ತು ಸ್ಪಂದನದಿಂದ ಕೆಲವು ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದರು.

    ಉಡುಪಿ ಪರಿಸರದ ಯುವಕರ ತಂಡವೊಂದು ಅಪಘಾತ-ಸಾರ್ವಜನಿಕರ ಹೊಣೆಗಾರಿಕೆ ಕುರಿತಾಗಿ ಸಿದ್ಧಪಡಿಸಿದ ‘ಮಾನವೀಯತೆ’ ಶೀರ್ಷಿಕೆಯ ಕಿರುಚಿತ್ರವನ್ನು ಸೆ.18ರಂದು ಪ್ರಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಮಾನವೀಯತೆ ಕಿರುಚಿತ್ರವನ್ನು ಸುರೇಂದ್ರ ಮಾರ್ಪಳ್ಳಿ ನಿರ್ದೇಶಿಸಿದ್ದಾರೆ. ಸುರೇಂದ್ರ ಪಣಿಯೂರು ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರದೀಪ್‌ ಶೆಟ್ಟಿ ಕುಕ್ಕಿಕಟ್ಟೆ, ಬ್ರಿಜೇಶ್‌, ಸುಜಿತ್‌, ಉದಯ ಕುಲಾಲ್‌, ಹಿತೇಶ್‌ ಬನ್ನಂಜೆ, ಸಂದೀಪ್‌ ಕುಂದರ್‌, ಸುಧೀರ್‌ ಶೇಟ್‌ ಈ ಚಿತ್ರತಂಡದಲ್ಲಿದ್ದಾರೆ. ಎಸ್‌ಪಿ ಅಣ್ಣಾಮಲೈ, ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿ ಅವರ ಸಂದೇಶವೂ ಕಿರುಚಿತ್ರದಲ್ಲಿದೆ. ಸಮಾರಂಭದಲ್ಲಿ ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ನ್ಯಾಯವಾದಿ ಸುನಿಲ್‌ ಮೂಲ್ಯ, ಸೂರಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    SP Annamalai
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    18/12/2025

    ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು: ಸಿ.ಇ.ಓ ಪ್ರತೀಕ್ ಬಾಯಲ್

    18/12/2025

    ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    17/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.