6 ರೈಲುಗಳಿಗೆ ಕುಂದಾಪುರ, ಕುಮಟಾ ಸ್ಟೇಶನ್‌ನಲ್ಲಿ ಪ್ರಾಯೋಗಿಕ ನಿಲುಗಡೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ 6  ರೈಲುಗಳಿಗೆ ರೈಲ್ವೆ ಸಚಿವಾಲಯವು ಕುಮಟಾ ಮತ್ತು ಕುಂದಾಪುರ ಸ್ಟೇಶನ್‌ಗಳಲ್ಲಿ ಪ್ರಾಯೋಗಿಕ ನಿಲುಗಡೆ ಮಾ. 15ರಿಂದ ನೀಡಲಾಗುವುದು.

Call us

Click Here

ತಿರುವನಂತಪುರಂ ಸೆಂಟ್ರಲ್ – ನಿಝಾಮುದ್ದೀನ್ ಎಕ್ಸ್‌ಪ್ರೆಸ್ (22653) ಹರ್ಝತ್ ರೈಲು ಕುಂದಾಪುರ ಸ್ಟೇಶನಿಗೆ ಮಾ. 15ರಂದು ಮಧ್ಯಾಹ್ನ 2.06ಕ್ಕೆ ಆಗಮಿಸಿ 2.08ಕ್ಕೆ ತೆರಳಲಿದೆ. ಹರ್ಝತ್ ನಿಝಾಮು ದ್ದೀನ್ – ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ (22656) ರೈಲು ಮಾ. 15ರಂದು ಕುಂದಾಪುರಕ್ಕೆ ಮಧ್ಯಾಹ್ನ 1.28ಕ್ಕೆ ಆಗಮಿಸಿ 1.30ಕ್ಕೆ ತೆರಳಲಿದೆ.

ಕೊಯಮತ್ತೂರು – ಹಿಸ್ಸಾ‌ರ್ ಎಕ್ಸ್‌ಪ್ರೆಸ್ (22476) ರೈಲು ಮಾ. 16ರಂದು ಕುಮಟಾ ಸ್ಟೇಶನಿಗೆ ರಾತ್ರಿ 1.46ಕ್ಕೆ ಆಗಮಿಸಿ, 1.48ಕ್ಕೆತೆರಳಲಿದೆ. ಹಿಸಾರ್ – ಕೊಯಮತ್ತೂರು ಎಕ್ಸ್‌ಪ್ರೆಸ್ (22475) ರೈಲು ಮಾ. 21ರಂದು ಬೆಳಗ್ಗೆ 2.10ಕ್ಕೆ ಆಗಮಿಸಿ, 2.12ಕ್ಕೆ ತೆರಳಲಿದೆ.

ಹರ್ಝತ್ ನಿಝಾಮು ದ್ದೀನ್‌ – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ (22654) ರೈಲು ಕುಂದಾಪುರಕ್ಕೆ ಮಾ. 18ರಂದು ಮಧ್ಯಾಹ್ನ 1.28ಕ್ಕೆ ಆಗಮಿಸಿ 1.30ಕ್ಕೆ ತೆರಳಲಿದೆ. ಎರ್ನಾಕುಲಂ ಜಂಕ್ಷನ್ – ಹರ್ಝತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್ (22655) ರೈಲು ಮಾ. 19ರಂದು ಕುಂದಾಪುರ ಸ್ಟೇಶನಿಗೆ ಮಧ್ಯಾಹ್ನ 2.06ಕ್ಕೆ ಆಗಮಿಸಿ 2.08ಕ್ಕೆ ತೆರಳಲಿದೆ.

ರೈಲುಗಳ ಆಗಮನ, ನಿರ್ಗಮನ, ನಿಲುಗಡೆ ತಾಣಗಳ ಮಾಹಿತಿಯನ್ನು www.enquiry.indianrail.gov.in ಎನ್‌ಟಿಎಸ್‌ ಆ್ಯಪ್ ಮೂಲಕ ಪಡೆದುಕೊಳ್ಳಬಹುದು.

Click here

Click here

Click here

Call us

Call us

ಮಾ.15ರಂದು ಕುಂದಾಪುರದಲ್ಲಿ ಸ್ವಾಗತ:

ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಕುಂದಾಪುರ-ದಿಲ್ಲಿ ನಡುವಿನ ತಿರುವನಂತಪುರಂ-ನಿಜಾಮುದ್ದೀನ್ ಹಾಗೂ ಎರ್ನಾಕುಲಂ-ನಿಜಾಮುದ್ದೀನ್ ರೈಲುಗಳ ನಿಲುಗಡೆಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಾ.15ರಂದು ಮಧ್ಯಾಹ್ನ 1.38ಗಂಟೆ ಹಾಗೂ 2ಗಂಟೆಗೆ ಸ್ವಾಗತ ಕೋರಲಾಗುವುದು ಎಂದು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ತಿಳಿಸಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಯ ಮೇರೆಗೆ ರೈಲ್ವೆ ಸಚಿವರು ಕುಂದಾಪುರದಲ್ಲಿ ಈ ರೈಲುಗಳ ನಿಲುಗಡೆಗೆ ಆದೇಶ ಹೊರಡಿಸಿದ್ದಾರೆ. 1.38 ಗಂಟೆಗೆ ಮೊದಲು ಕೇರಳದ ಕಡೆ ತೆರಳುವ ರೈಲು ನಿಲುವಡೆ ಆಗಲಿದ್ದು, ನಂತರ ಮಧ್ಯಾಹ್ನ ಗಂಟೆ ದೆಹಲಿ ಕಡೆ ತೆರಳುವ ರೈಲು ನಿಲುಗಡೆಯಾಗಲಿದೆ. ಈ ಎರಡು ರೈಲುಗಳನ್ನು ಪ್ರಯಾಣಿಕರ ಮತ್ತು ರೈಲ್ವೆ ಸಮಿತಿ ಅವರ ಜತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಸ್ವಾಗತಿಸಲಿದ್ದಾರೆ.

Leave a Reply