Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮರೆಯಲಾರದ ಸವಿಯಣ್ಣ ನುಡಿಸಿರಿಯ ಈ ಬೊಂಬಾಟ್ ಭೋಜನ!
    alvas nudisiri

    ಮರೆಯಲಾರದ ಸವಿಯಣ್ಣ ನುಡಿಸಿರಿಯ ಈ ಬೊಂಬಾಟ್ ಭೋಜನ!

    Updated:28/11/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಅಪಾರ ಉಜಿರೆ.

    Click Here

    Call us

    Click Here

    ಒಂದು ದಿನ ಮನೆಗೆ ನೆಂಟರಿಷ್ಟರು ಬಂದರೆ ಆವರು ಮರಳಿ ಹೋಗುವುದನ್ನೇ ಕಾಯುತ್ತಿರುತ್ತೇವೆ. ಸಾಲದ್ದಕ್ಕೆ ಮಕ್ಕಳ ಮೂಲಕ ‘ಅಂಕಲ್, ಆಂಟಿ ನೀವು ಯಾವಾಗ ಹೋಗ್ತೀರಾ’ ಎಂದು ಕೇಳಿಸುವ ಪರಿಪಾಠದ ನಡುವೆ ಯಾರೊಬ್ಬರಿಗೂ ತೊಂದರೆಯಾಗದಂತೆ ದಿನಂಪ್ರತಿ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಜನರಿಗೆ ಬಗೆ ಬಗೆಯ ಭಕ್ಷ, ಭೋಜನಗಳ ಉಪಚಾರ ಅಚ್ಚುಕಟ್ಟಾಗಿ ಸದ್ದಿಲ್ಲದೇ ಸಾಗುತ್ತಿದೆ. ಇದು ಸಾಧ್ಯವಾಗುವುದು ಆಳ್ವಾಸ್ ನುಡಿಸಿರಿಯಲ್ಲಿ.

    ಏಕಕಾಲದಲ್ಲಿ ನುಡಿಸಿರಿಯ ವಿವಿಧ ವೇದಿಕೆಗಳಲ್ಲಿ ನಡೆಯುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳು ಬುದ್ಧಿಯ ಹಸಿವನ್ನು ತಣಿಸಿದರೇ, ಆಳ್ವಾಸ್‌ನ ಭೋಜನಾಲಯದಲ್ಲಿ ತಯಾರಾಗುವ ಖಾದ್ಯಗಳು ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸಾಹಿತ್ಯಪ್ರೀಯರ ಹೊಟ್ಟೆಯನ್ನು ತಂಪಾಗಿರಿಸುತ್ತಿವೆ. ಅಡುಗೆ ಮನೆಯಲ್ಲಿ ಅನ್ನ, ಸಾಂಬಾರ್, ಮೊಸರು, ಪಲ್ಯ ಮೊದಲಾದವುಗಳು ಒಂದೆಡೆ ತಯಾರಾದರೆ ಇನ್ನೊಂದೆಡೆ ಸಿಹಿತಿಂಡಿಗಳು ಪ್ರತ್ಯೇಕವಾಗಿ ತಯಾರಾಗುತ್ತವೆ.

    ಒಟ್ಟು ೨೪ ಕೌಂಟರ್‌ಗಳಲ್ಲಿ ಬೆಳಗ್ಗೆ 7ಗಂಟೆಯಿಂದ ರಾತ್ರಿ 10:30೦ರ ವರೆಗೆ ನಡೆಯುವ ಈ ಸಂತರ್ಪಣಾ ಕಾರ್ಯಕ್ರಮಕ್ಕೆ ಆಹಾರ ಸರಬರಾಜಾಗುವುದು ಕ್ಯಾಂಪಸ್‌ನ ಆವರಣದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ. ನಾಲ್ಕೂ ದಿನಗಳ ಆಹಾರ ತಯಾರಿಕೆಯ ಹೊಣೆಯನ್ನು ನಗರದ ಮಹಾವೀರ ಹೋಟೆಲ್‌ನ ಸನತ್ ಕುಮಾರ್ ಜೈನ್‌ರ ತಂಡವು ವಹಿಸಿಕೊಂಡಿದೆ. ತಯಾರಿ ಮತ್ತು ವಿತರಣೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಎಲೆಮರೆಯ ಕಾಯಿಯಂತೆ ನಿರ್ವಹಿಸುತ್ತಿರುವುದು ಆಳ್ವಾಸ್‌ನ ಪ್ರಮೋದ್ ಹೆಗ್ಡೆಯವರ ನೇತೃತ್ವದ ‘ಹಿತೈಷಿ’ ಎಂಬ ಎಂಭತ್ತು ಸದಸ್ಯರ ಸಮಾನ ಮನಸ್ಕರ ಸಂಘಟನೆ.

    ದಿನವೊಂದಕ್ಕೆ ಸುಮಾರು ತಲಾ ಒಂದೂವರೆ ಸಾವಿರ ಲೀಟರ್‌ಗಳಷ್ಟು ಹಾಲು ಮತ್ತು ಮೊಸರನ್ನು ವ್ಯಯಿಸಲಾಗುತ್ತಿದೆ. ಹೀಗೆ ತಾಯರಾದ ಆಹಾರವು ಎಲ್ಲಾ ೨೪ ಕೌಂಟರ್‌ಗಳಿಗೆ ರವಾನೆಯಾಗುತ್ತದೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ವಿವಿಐಪಿಗಳಿಂದ ಮೊದಲ್ಗೊಂಡು ಸಣ್ಣ ಮಕ್ಕಳು, ಸ್ವಯಂ ಸೇವಕರು, ಪ್ರತಿನಿಧಿಗಳು, ಕಲಾವಿದರು ಹೀಗೆ ಎಲ್ಲರಿಗೂ ಒಂದೇ ರೀತಿಯ ಮೆನು. ಇದರಲ್ಲಿ ಒಂದು ಉಪ್ಪಿನ ಕಾಯಿಯೂ ಬದಲಾಗುವುದಿಲ್ಲ ಎನ್ನುತ್ತಾರೆ ಪ್ರಮೋದ್. ಎರಡನೇ ದಿನದ ಬೆಳಗ್ಗಿನ ಉಪಾಹಾರಕ್ಕೆಂದು ಚನ್ನೈನಿಂದ ಹಲ್ವಾವನ್ನು ತರಿಸಿ ಉಣಬಡಿಸಿದ್ದು ಮತ್ತೊಂದು ವಿಶೇಷ. ಊಟ, ಉಪಾಹಾರ ಮುಗಿದ ಕೂಡಲೆ ಕೆಲವೇ ಕ್ಷಣಗಳಲ್ಲಿ ತಟ್ಟೆಗಳು, ವೇಸ್ಟೇಜ್‌ಗಳು ಮಿಜಾರಿನಲ್ಲಿರುವ ತೋಟಕ್ಕೆ ಗೊಬ್ಬರ ರೂಪದಲ್ಲಿ ಬಳಸಲಾಗುತ್ತದೆ.

    Click here

    Click here

    Click here

    Call us

    Call us

    ಬೆಳಗ್ಗಿನ ಉಪಾಹಾರದಲ್ಲಿ ಇಡ್ಲಿ, ಸಾಂಬರ್, ಶೀರ, ಅವಲಕ್ಕಿ, ಚನ್ನೈ ಹಲ್ವ, ಜೈನ್ ಕೇಕ್, ಕಾಶಿ ಹಲ್ವ, ಉಪ್ಪಿಟ್ಟು, ಟೊಮೇಟೋ ಬಾತ್, ಶ್ಯಾವಿಗೆ ಬಾತ್, ಕಾಫಿ, ಟೀ ಮಧ್ಯಾಹ್ನದ ಭೋಜನಕ್ಕೆ ಉಪ್ಪಿನಕಾಯಿ, ಕಡ್ಲೆ, ಬಟಾಣಿ ಗಸಿ, ಚಪಾತಿ, ಅನ್ನ, ಸಾಂಬರ್, ವಿವಿಧ ಕಾಳಿನ ಪಲ್ಯಗಳು, ತೋವೆ, ಮೊಸರು, ಅಪ್ಟೆ ಪಾಯಸ, ಶ್ಯಾವಿಗೆ ಪಾಯಸ, ಕಡ್ಲೆ ಬೇಳೆ ಪಾಯಸ, ವೆಜ್ ಕೂರ್ಮಾ, ರವೆ ಲಾಡು, ಬೋಂದಿ ಲಾಡು, ಹೋಳಿಗೆ ರಸಾಯನ, ಮತ್ತು ರಾತ್ರಿಯ ಊಟಕ್ಕೆ ಉಪ್ಪಿನ ಕಾಯಿ, ಪಲ್ಯ, ಗಸಿ, ಪಾಯಸ, ಚಪಾತಿ, ಮೊಸರು ಹೀಗೆ ಬಗೆ ಬಗೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ತಯಾರಾದ ಆಹಾರವು ವಿವಿಧೆಡೆಯಿಂದ ಆಗಮಿಸಿರುವ ಸುಮಾರು ಒಂದೂವರೆ ಸಾವಿರ ಸ್ವಯಂಸೇವಕರ ಮೂಲಕ ವಿತರಣೆಯಾಗುತ್ತಿದೆ.

    DSC_1145 DSC_1146 (1) DSC_1142 DSC_1141 DSC_1144

    Alvas nudisiri
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಖೋ-ಖೋ ಟೂರ್ನಮೆಂಟ್: ಆಳ್ವಾಸ್ ಅವಳಿ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ಸ್

    13/12/2025

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025

    ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    06/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.