ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಇತ್ತಿಚಿಗೆ ” ಹಿರಿಯ ನಾಗರಿಕರ” ದಿನವನ್ನು ಹಿರಿಯರ ಸೇವೆ ಮತ್ತು ಅನುಭವಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಚರಿಸಲಾಯಿತು.





ಸಂಸ್ಥೆಯಲ್ಲಿ ಅಧ್ಯಾಪನದಲ್ಲಿ ನಿರತರಾಗಿರುವ ಹಿರಿಯ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಹೆಗ್ಡೆ, ಬೇಳೂರು ಮತ್ತು ಹಿರಿಯ ಉಪನ್ಯಾಸಕರಾದ. ಜಿ. ಕೆ. ರಮೇಶ್ ರಾವ್ ಇವರಿಗೆ ಹಾಗೂ ವಾಹನ ಚಾಲಕರಾಗಿ ದುಡಿಯುತ್ತಿರುವ ಶೇಖರ್ ಪೂಜಾರಿ, ರಘುರಾಮ್ ಶೆಟ್ಟಿ, ಶಹಜಾನ್, ಪ್ರಭಾಕರ್ ಶೆಟ್ಟಿ ಮತ್ತು ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಂಜ ಅವರಿಗೆ ಗೌರವ ಸಲ್ಲಿಸಲಾಯಿತು..
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತ ನಿರ್ದೇಶಕರಾದ ರೆನಿಟಾ ಲೋಬೊ ಮಾತನಾಡಿ “ಹಿರಿಯರ ಅನುಭವ,ಶ್ರಮ ಹಾಗೂ ಅವರ ನಿಷ್ಠೆ ನಮಗೆಲ್ಲಾ ಪ್ರೇರಣೆ ಎನ್ನುತ್ತಾ ಅವರು ಸಂಸ್ಥೆಯ ಬೆಳವಣಿಗೆಗೆ ನೀಡಿದ ಸಹಕಾರವನ್ನು ನೆನಪಿಸಿಕೊಂಡರು.
ಆಡಳಿತ ನಿರ್ದೇಶಕರಾದ ಶಮಿತಾ ರಾವ್ ಇವರು ಮಾತನಾಡಿ ಹಿರಿಯರು ಕಾರ್ಯ ವೈಖರಿಯನ್ನು ಸ್ಮರಿಸುತ್ತಾ ಕಾರ್ಯಕ್ರಮದಲ್ಲಿ ಹಿರಿಯರಿಗೆ ನೀಡಲಾದ ಸ್ಮರಣಿಕೆಯಲ್ಲಿ ಬರೆದ ಸಂದೇಶವನ್ನು ಭಾವನಾತ್ಮಕವಾಗಿ ಓದಿ ಎಲ್ಲರ ಹೃದಯ ಆದ್ರವಾಗುವಂತಹ ಸನ್ನಿವೇಶವನ್ನು ಸೃಷ್ಟಿಸಿದರು.
ವೇದಿಕೆಯಲ್ಲಿರುವ ಹಿರಿಯರ ಕುರಿತಾಗಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಭಾವಪೂರ್ಣವಾಗಿ ಹಂಚಿಕೊಂಡರು. ಗೌರವ ವಂದನೆ ಸ್ವೀಕರಿಸಿದ ಶಿಕ್ಷಕರು ಮತ್ತು ಚಾಲಕರು ಸಂಸ್ಥೆಯ ಬಗ್ಗೆ ಕೃತಜ್ಞಾಪೂರ್ವಕವಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.















