Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಂಡ್ಸೆ ನಾಡಗಡಿಯಲ್ಲಿರುವ ಶ್ರೀ ಭದ್ರಮಹಾಂಕಾಳಿ ದೈವಸ್ಥಾನಕ್ಕೆ ವಂಡ್ಸೆ ಆರ್. ಕೆ. ಗ್ರಾಫಿಕ್ಸ್ ಮಾಲಕ ರಕ್ಷಿತ್ ಕುಮಾರ ವಂಡ್ಸೆ ತನ್ನ ಹುಟ್ಟುಹಬ್ಬದ ಸವಿನೆನಪಿಗಾಗಿ ೧೫,೫೦೦ ರೂ. ಮೌಲ್ಯದ ಸೆಲ್ಕೋ ಸೋಲಾರ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು. ಕೆಲವು ತಿಂಗಳುಗಳ ಹಿಂದೆ ಉಪ್ಪೂರಿನ ಸ್ವಂದನ ಸೇವಾ ಸಂಸ್ಥೆಯ ವಿಶೇಷ ಮಕ್ಕಳಿಗೆ ಮತ್ತು ಕುಂದಾಪುರ ಚೈತನ್ಯ ಸೇವಾ ಸಂಸ್ಥೆಯ ಮಕ್ಕಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡಗಳನ್ನು ವಿತರಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಬೈಂದೂರು ಶಾಖೆಯನ್ನು ಬಿಜೂರಿನ ಬಾಬು ಪೂಜಾರಿ-ಮಂಜಮ್ಮ ಪೂಜಾರಿ ದಂಪತಿಗಳು ಉದ್ಘಾಟಿಸಿದರು. ಖ್ಯಾತ ಜ್ಯೋತಿಷಿ ರಘುನಾಥ್ ಜೊಯಿಸ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಗೌರಿ ದೇವಾಡಿಗ, ತಾ.ಪಂ ಸದಸ್ಯ ಮಹೇಂದ್ರ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕುಮಾರ್ ಶೆಟ್ಟಿ ನೆಲ್ಯಾಡಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಅತಿಥಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರಾದ ಜಯರಾಮ ಶೆಟ್ಟಿ, ರಾಘವೇಂದ್ರ ಪೂಜಾರಿ, ನರಸಿಂಹ ನಾಯಕ್, ಪಾರ್ವತಿ ಪೂಜಾರಿ, ಮಾಲತಿ ಗೋವಿಂದ ಪೂಜಾರಿ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪೂಜಾರಿ, ಶಾಖಾ ಪ್ರಬಂಧಕ ವಿಲಿಯಂ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ► ಉಡುಪಿ ಜಿಲ್ಲೆಯಲ್ಲಿ ಸೋಮವಾರ 16 ಕೊರೋನಾ ಪಾಸಿಟಿವ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೇ.25ರಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 16 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. 16 ಪ್ರಕರಣಗಳ ಪೈಕಿ 14 ಹೊರರಾಜ್ಯದ ಸಂಪರ್ಕ ಹಾಗೂ ಇಬ್ಬರಿಗೆ ಹೊರ ದೇಶದ ಸಂಪರ್ಕದಿಂದ ಬಂದಿದೆ.  ಈ ಪೈಕಿ 6 ಗಂಡಸರು, 2 ಹೆಂಗಸರು, 8 ಮಕ್ಕಳು ಸೇರಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 92 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಮೂವರು ಬಿಡುಗಡೆಯಗಿದ್ದು, 88 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಉಡುಪಿ ಜಿಲ್ಲೆಯಲ್ಲಿ ಶತಕ ದಾಟಿದ ಕೊರೋನಾ: ಒಂದೇ ದಿನ 32 ಪ್ರಕರಣ ದಾಖಲು – https://kundapraa.com/?p=37897 . ► ಮುಂಜಾಗೃತಾ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣೆ ಸ್ಯಾನಿಟೈಸ್ – https://kundapraa.com/?p=37856 . ► ಉಡುಪಿ ಜಿಲ್ಲೆಯಲ್ಲಿ ಭಾನುವಾರ 23 ಕೊರೋನಾ ಪಾಸಿಟಿವ್ – https://kundapraa.com/?p=37842 . ► ಕುಂದಾಪುರ ವಿಧಾನಸಭೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವೊಂದು ಸಡಿಲಿಕೆ ಮಾಡಲಾಗಿದ್ದು, ರಾಜ್ಯ ಸರಕಾರ ಆದೇಶಿಸಿದ ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ಕುಂದಾಪುರ ಹಾಗೂ ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಹಲವು ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಸಾಗಾಟದ ವಾಹನ ಮಾತ್ರ ಸಂಚಾರ ಮಾಡುವುದು ಕಂಡುಬಂತು. ಪೇಪರ್, ಹಾಲು, ಮಾಂಸದ ಅಂಗಡಿಗಳು ತೆರೆದಿದ್ದರೂ ಖರೀದಿಗಾಗಿ ಬರುವ ಜನಸಂಖ್ಯೆ ವಿರಳವಾಗಿತ್ತು. ಮುಸ್ಲಿಂ ಸಮುದಾಯವು ಈದ್-ಉಲ್-ಫಿತರ್ ಹಬ್ಬವನ್ನು ತಮ್ಮ ಮನೆಗಳಲ್ಲೇ ಆಚರಣೆ ಮಾಡಿದರು. ಅನುಮತಿ ನೀಡಲಾಗಿದ್ದ ವಿವಾಹ ಕಾರ್ಯಕ್ರಮಗಳು ನಡೆದವು. ಕುಂದಾಪುರ ಶಾಸ್ತ್ರೀ ವೃತ್ತ ಹಾಗೂ ಕೆಲವ ಆಯಕಟ್ಟಿನ ಸ್ಥಳಗಳಲ್ಲಿ ನಿಯಮಿತವಾದ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ. ಭಾನುವಾರ ಮಧ್ಯಾಹ್ನ ಎಂದಿನಂತೆ ಬಹುತೇಕ ಅಂಗಡಿಗಳು ಬಂದ್ ಮಾಡುವುದರಿಂದ ಸಂಪೂರ್ಣ ಲಾಕ್‌ಡೌನ್‌ನನ್ನು ಜನರು ಸಹಜವಾಗಿಯೇ ಸ್ವೀಕರಿಸಿದ್ದಾರೆ. ಪ್ರಸ್ತುತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು ಕೆಲವೊಂದು ಸಡಿಲಿಕೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಮುಂಜಾಗೃತಾ ಕ್ರಮವಾಗಿ ಭಾನುವಾರ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್., ಠಾಣೆಗೆ ಆಗಮಿಸುವ ಸಾರ್ವಜನಿಕರ ಮತ್ತು ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆಗಾಗಿ ದಾನಿಗಳ ಸಹಾಯದಿಂದ ಇಂದು ಠಾಣೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ಠಾಣೆಗೆ ಬರುವ ಜನರಿಗೆ ಕೈತೊಳೆಯಲು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕೋವಿಡ್-೧೯ ವೈರಾಣು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು. ರಕ್ತದಾನಿ ದಿವಾಕರ ಎನ್.ಖಾರ್ವಿ ಮತ್ತು ಮತ್ಸ್ಯೋದ್ಯಮಿ ಕೆ.ಅಬ್ದುಲ್ ರೆಹಮಾನ್ ನಾಗೂರು ಠಾಣೆ ಸ್ವಾನಿಟೈನ್‌ಗೆ ತಗಲುವ ವೆಚ್ಚವನ್ನು ಭರಿಸಿದ್ದರು. ಇದನ್ನೂ ಓದಿ: ► ಉಡುಪಿ ಜಿಲ್ಲೆಯಲ್ಲಿ ಭಾನುವಾರ 23 ಕೊರೋನಾ ಪಾಸಿಟಿವ್ – https://kundapraa.com/?p=37842 . ► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 . ► ಕುಂದಾಪುರದಲ್ಲಿ120…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೇ.24ರಂದು ಒಟ್ಟು 13 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಾರ್ಕಳ ಗ್ರಾಮಾಂತರ ಹಾಗೂ ಅಜೆಕಾರು ಪೊಲೀಸ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳು, ಓರ್ವ ಗರ್ಭಿಣಿ ಮಹಿಳೆ ಸೇರಿದಂತೆ, ಮಹಾರಾಷ್ಟ್ರದಿಂದ ಪ್ರಯಾಣದ ಹಿನ್ನೆಲೆಯುಳ್ಳವರಿಗೆ ಪಾಸಿಟವ್ ಇರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 76 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಮೂವರು ಬಿಡುಗಡೆಯಗಿದ್ದು, 72 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 . ► ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತ್ರಾಸಿ ಬೀಚ್ ಸಮೀಪ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರಿಗೆ ತೆರಳುತ್ತಿದ್ದ ಬೈಕಿಗೆ ಟ್ಯಾಂಕರ್ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬೈಂದೂರು ಹೇನ್‌ಬೇರು ನಿವಾಸಿಗಳಾದ ಶಂಕರ ದೇವಾಡಿಗ ಹಾಗೂ ಪ್ರವೀಣ ದೇವಾಡಿಗ ಮೃತ ದುರ್ದೈವಿಗಳು. ಟ್ಯಾಂಕರೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದು, ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದು ಓರ್ವ ಬೈಕ್ ಸವಾರ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅಸುನೀಗಿದ್ದರೆ, ಮತ್ತೋರ್ವ ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು, ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಗಂಗೊಳ್ಳಿಯ ಆಪತ್ಭಾಂಧವ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ ಅಂಬ್ಯುಲೆನ್ಸ್ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ./ ಇದನ್ನೂ ಓದಿ: ► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .…

Read More

ಮೌಲಾನ ವಾಹಿದುದ್ದೀನ್ ಖಾನ್ | ಕುಂದಾಪ್ರ ಡಾಟ್ ಕಾಂ ಲೇಖನ. ಸೃಷ್ಟಿಕರ್ತನ ಸಂಪ್ರೀತಿಯನ್ನು ಆಕಾಂಕ್ಷಿಸಿ ಉದರ ಬರಿದಾಗಿಸಿದ ಮೂವತ್ತು ದಿನಗಳ ವ್ರತಾನುಷ್ಠಾನದ ಕೊನೆಯಲ್ಲೊಂದು ಸಂತೋಷದ ದಿನ ಈದುಲ್‌ ಫಿತರ್. ರಮಝಾನ್‌ನ ಅನಂತರ ರವ್ವಾಲ್‌ ತಿಂಗಳ ಶುಭ ಸೂಚನೆಯನ್ನು ಬಾಲಚಂದ್ರ ನೀಡುವನು. ‌ ಮುಸ್ಸಂಜೆಯ ಈ ಶುಭಸೂಚನೆಯನ್ನು ಮನ್ನಿಸಿ ಮಸೀದಿಗಳ ಮಿನಾರಗಳಿಂದ “ಅಲ್ಲಾಹು ಅಕ್ಬರ್‌’ (ದೇವನೇ ಶ್ರೇಷ್ಠ) ಎಂಬ ಉದ್ಘೋಷದ ಮೂಲಕ ಈದುಲ್‌ ಫಿತರ್‌ನ್ನು ಸ್ವಾಗತಿಸಲಾಗುವುದು. ಪ್ರತಿವರ್ಷ ಮುಸ್ಲಿಮರು ಎರಡು ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ. ರಂಜಾನ್ ತಕ್ಷಣದ ನಂತರದ ಈದ್-ಉಲ್- ಫಿತರ್ ಹಾಗೂ ಹಜ್ ತಿಂಗಳಲ್ಲಿ ಈದ್-ಉಲ್ ಜುದಾ. ಈದ್-ಉಲ್ ಫಿತರ್ ಎಂದರೆ ಉಪವಾಸ ಅಂತ್ಯಗೊಳಿಸುವುದು ಎಂದು ಇತರ ಹಬ್ಬಗಳಂತೆ ಈದ್ ಉಲ್ ಫಿತರ್ ನಂಬಿಕೆಯ ಒಂದು ಪ್ರಮುಖವಾದ ಚಿಹ್ನೆ. ಸಾಮಾಜಿಕ ಪದ್ಧತಿಯ ರೂಪದಲ್ಲಿ ಇಸ್ಲಾಮಿಕ್ ನಂಬಿಕೆಯನ್ನು ನೆನಪು ಮಾಡುತ್ತಾರೆ. ಮಾನವನ ಬದುಕನ್ನು ಎರಡು ಭಾಗಗಳಾಗಿ ಮುಸ್ಲಿಮರು ನಂಬುತ್ತಾರೆ. ಸಾವಿನ ಮುನ್ನದ ಕಾಲ ಹಾಗೂ ಸಾವಿನ ನಂತರದ ಕಾಲ. ದೈವಶಕ್ತಿಯ ಆಜ್ಞೆಗಳನ್ನು ಸಾವಿನ…

Read More

ಹೇ ಮನುಜ ನೀನೆಷ್ಟು ಕ್ರೂರಿ?! ಅತಿಯಾದರೆ ಅಮೃತವೂ ವಿಷವಾಗುತ್ತದಂತೆ. ಮಾಡಬಾರದನ್ನೆಲ್ಲಾ ಮಾಡಿ ತೀರಿದೆ. ಕಂಡ ಕಂಡದನ್ನೆಲ್ಲಾ ಕಿತ್ತು ತೆಗೆದುಕೊಂಡೆ. ಆ ನಿನ್ನ ಆಸೆಗೆ ಕೊನೆ ಎನ್ನುವುದೇ ಇಲ್ಲವಾಗಿ ಹೊಗಿತ್ತು. ಒಂದು ಮಾತು ಕೇಳದೆ ನಮ್ಮ ಕುಲಕ್ಕೆ ಕೊಡಲಿ ಹಾಕಿದೆ. ಕಡಿದ ಮರದಿಂದ ಮನೆಯನ್ನು ಶೃಂಗಾರ ಮಾಡಿಕೊಂಡೆ ಆದರೆ ಈಗ ನಿನಗೆ ಆ ಮನೆಯಲ್ಲಿ ಉಳಿಯಲು ಆದಿತೇ, ಇಲ್ಲ. ಕ್ವಾರನ್ಟೈನ್ ಎನ್ನೋ ಜೈಲು ಇಲ್ಲ ಯಾಮಾರಿದ್ರೆ ನೇರ ಮೇಲಕ್ಕೆ. ಹಿರಿಯರು ಸುಮ್ಮನೆ ಹೇಳಿಲ್ಲ ತಾನೊಂದು ಬಗೆದರೆ ದೈವವೊಂದು ಬಗೆಯಿತಂತೆ ಅಂತ. ನಾವು ಯಾವುದೇ ಕಾರಣಕ್ಕೂ ನಿಮ್ಮ ವಿನಾಶವನ್ನೂ ಬಯಸುವುದಿಲ್ಲ ನೀವಾಗಿಯೇ ನಿಮ್ಮ ಚಿತೆಗೆ ಬೆಂಕಿ ಇಟ್ಟುಕೊತ್ತಿದ್ದೀರಿ. ಕಂಡ ಕಂಡ ಜೀವಿಗಳನೆಲ್ಲ ಕೊಂದು ತಿಂದು ಕಾಣದ ಜೀವಿಯ ಬರಮಾಡಿಕೊಂಡೆಯೆಲ್ಲ ಮನುಜ. ಎಷ್ಟೊಂದು ವಿಪರ್ಯಾಸ ನೋಡಿ ಒಂದು ಕ್ರಿಮಿ ನಿಮ್ಮನ್ನೆಲ್ಲಾ ಎಷ್ಟೊಂದು ಆಟ ಆಡಿಸ್ತಾ ಇದೆ. ಇದು ನೊಂದ ನನ್ನ ಕಣ್ಣೀರಿನ ಪ್ರತಿ ಫಲವೂ ಇರಬಹುದು. ಕೈಯಲ್ಲಾಗದ ನಿಶಕ್ತರೂ, ಬಡವರು ಮಾತ್ರ ಸಾಯುತ್ತಾರೆ ನನಗೇನೂ ಆಗದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8010 ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಂಡುಬರುವ ಕೋವಿಡ್ -19 ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಗೊಂಡಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಗೆ ಇದುವರೆಗೆ , ಮಹಾರಾಷ್ಟçದಿಂದ 7226, ತಮಿಳುನಾಡು ನಿಂದ 74, ತೆಲಂಗಾಣದಿAದ 425, ಆಂಧ್ರಪ್ರದೇಶದಿAದ 43, ಗೋವಾದಿಂದ 53, ಗುಜರಾತ್ ನಿಂದ 42, ಮಧ್ಯಪ್ರದೇಶದಿಂದ 1, ದೆಹಲಿಯಿಂದ 26, ಹರಿಯಾಣದಿಂದ 1, ಚಂಡೀಗಢದಿAದ 1, ಒರಿಸ್ಸಾದಿಂದ 1, ಪಶ್ಚಿಮ ಬಂಗಾಳ 6, ರಾಜಾಸ್ಥಾನ 6, ಪಂಜಾಬ್ 12 , ಕೇರಳ 93 ಸೇರಿದಂತೆ ಒಟ್ಟು 8010 ಮಂದಿ ಅಗಮಿಸಿದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದು, ಜಿಲ್ಲೆಯ ಬಹುತೇಕ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ ಎಂದು ಡಿಸಿ…

Read More