ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಬಹತೇಕ ಹಾಲಿ ಶಾಸಕರು ಹಾಗೂ ಗೊಂದಲವಿಲ್ಲದ 72 ಕ್ಷೇತ್ರಗಳ ಅಭ್ಯರ್ಥೀಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ದೊರೆತಿದ್ದು, ಬೈಂದೂರು ಕ್ಷೇತ್ರದಲ್ಲಿ ಯಾರು ಸ್ವರ್ಧಿಸಲಿದ್ದಾರೆ ಎಂಬುದು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿಲ್ಲ. ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಳೆದ ಭಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ನೊಂದು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವರ್ಧಿಸಿ ವಿಜಯಿಯಾಗಿದ್ದರು. ಆ ಬಳಿಕವೂ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದ ಅವರು ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರನ್ನು ಸೇರ್ಪಡೆಗೂ ಮೊದಲೇ ಬಿಜೆಪಿಯ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದರು. ಈ ನಡುವೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸ್ವಾಭಾವಿಕ ಬದುಕಿನಿಂದ ಅಸ್ವಾಭಾವಿಕ ಬದುಕಿನತ್ತ ಸಮಾಜ ನಡೆಯಿತ್ತಿದೆ. ಪ್ರಕೃತಿ ಜೊತೆಯಲ್ಲೇ ಬದುಕಬೇಕೇ ವಿನಹಾ ಪ್ರಕೃತಿ ವಿರುದ್ಧ ಬದುಕಲಾಗದು. ಸಮಾಜ ಕೃಷಿ ಸಂಸ್ಕೃತಿಯಿಂದ ವಿಮುಕ್ತವಾ ಗುತ್ತಿದ್ದು, ಪ್ಲಾಟ್ ಸಂಸ್ಕೃತಿಗೆ ಬಂದು ಮುಟ್ಟಿದ್ದೇವೆ. ಪೋಷಕರು ಅಂಕ ಪಡೆಯಲಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದು, ಪರಂಪರೆ ನಮ್ಮ ಅಮೂಲ್ಯ ಗ್ರಂಥಗಳ ಪರಿಚಯಿಸದಿದ್ದರೆ ಪೋಷಕರೂ ಪರಕೀಯರಾಗುವ ಅಪಾಯವಿದೆ. ಹೀಗೆ ಎಚ್ಚರಿಕೆ ನೀಡಿದವರು ಮಂಗಳೂರು ಕೇಮಾರು ಮಠ ಶ್ರೀ ಈಶ ಮಿಠಲದಾಸ ಸ್ವಾಮೀಜಿ. ಬೈಂದೂರು ತಾಲೂಕ್, ಮಾರಣಕಟ್ಟೆ ತೆಂಕೂರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ದೇವಸ್ಥಾನಗಳು ಪ್ರಕೃತಿ ದತ್ತವಾಗಿದ್ದು, ಆಧುನಿಕತೆ ಭರಾಟೆಯಲ್ಲಿ ಶಿಲಾಮಯ, ಸ್ವರ್ಣಮಯ ದೇವಾಲಯಗಳಾಗಿ ಬದಲಾಯಿಸುತ್ತಿರುವುದರಿಂದ ದೇವಸ್ಥಾನದಲ್ಲಿ ಶಕ್ತಿ ನಷ್ಟವಾಗುತ್ತಿದೆ. ನಮ್ಮ ಮಕ್ಕಳನ್ನು ಅಂಕ ಪಡೆಯುವ ಯಂತ್ರಗಳಾಗಿ ರೂಪಿಸುತ್ತಿದ್ದು, ಉಣ್ಣುವ ಅನ್ನ ಎಲ್ಲಿಂದ ಬರುತ್ತದೆ ಎನ್ನುವ ಕನಿಷ್ಠ ಜ್ಞಾನ ಕೂಡಾ ಇಲ್ಲದಿರುವುದರಿಂದ ಮಕ್ಕಳಿಗೆ ಕೃಷಿ ಪಾಠ ಕಲಿಸದಿದ್ದರೆ, ಮುಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಭಿಮಾನಿಯೋರ್ವ ಅಭಿಮಾನದಿಂದ ನೀಡಿದ ಬೆಲೆ ಬಾಳುವ ಚಿನ್ನದ ಶೂ ಅನ್ನು ಖ್ಯಾತ ಪುಟ್ಬಾಲ್ ಆಟಗಾರ ರೋನಾಲ್ಡ್ ಅವರು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಎಚ್. ಐ.ವಿ ಪೀಡಿತರ ಕಲ್ಯಾಣಕ್ಕೆ ಬಳಸಿದರು. ಅವರ ಶ್ಲಾಘನೀಯ ಸೇವಾ ಮನೋಭಾವವನ್ನು ಜಗತ್ತು ಕೊಂಡಾಡಿತು. ಇದೇ ರೀತಿಯಲ್ಲಿ ಸೇವೆ ಮಾಡಲು ನೂರಾರು ಅವಕಾಶಗಳು ನಮಗೂ ಸಿಗಬಹುದು. ಅದು ಚಿಕ್ಕದಿರಲಿ ದೊಡ್ಡದಿರಲಿ ನಮ್ಮಲ್ಲಿರುವ ತ್ಯಾಗ ಮನೋಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವುದು ಆದುದರಿಂದ ಪ್ರತಿಯೊಬ್ಬರು ಸೇವಾ ಭಾವವನ್ನು ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳೋಣ ಎಂದು ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಜಿ.ಎನ್ ಪ್ರಕಾಶ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸ್ಥಳೀಯ ಆಶೀರ್ವಾದ ಹಾಲ್ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್ ವಹಿಸಿದ್ದರು. ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್ ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಪುಟ್ಟ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ತೊಳೆದು, ಪುಷ್ಪಗಳನ್ನು ಅರ್ಪಿಸಿ ಆರತಿ ಬೆಳಗುತ್ತಾ ತಾಯಿಯನ್ನು ಪೂಜಿಸಿ ವಂದಿಸುವ ಆ ಸುಂದರ ಅಪರೂಪದ ದೃಶ್ಯ ಕಂಡು ಬಂದಿದ್ದು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಮಂಗಳವಾರ ಜರಗಿದ ವಿನೂತನವಾದ ಮಾತೃ ವಂದನ ಕಾರ್ಯಕ್ರಮ ಶಾರದಾ ಮಂಟಪದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಜನರು ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದ ಅಪರೂಪದ ಆ ಸುಂದರ ಅದ್ಭುತ ಕ್ಷಣಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಓಡಿ ಆಡಿ ನಲಿದಾಡುತ್ತಿದ್ದ ಆ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ನೀರಿನಿಂದ ತೊಳೆದು ತಾಯಿಯ ಪಾದಗಳಲ್ಲಿ ಪುಷ್ಪಾರ್ಚನೆ ಮಾಡಿ ತಂದೆ ತಾಯಿಗೆ ಆರತಿ ಬೆಳಗಿ ಪೂಜಿಸಿ ನಮಿಸುತ್ತಿರುವ ಆ ಕ್ಷಣ ಎಲ್ಲರನ್ನು ರೋಮಾಂಚನಗೊಳಿಸಿತು. ಶಿಶು ಮಂದಿರದ ಪುಟಾಣಿಗಳು, ಬಾಲ ಗೋಕುಲದ ಮಕ್ಕಳು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಮಕ್ಕಳಿಗೆ ಬಾಲ್ಯದಲ್ಲಿ ಹೆತ್ತವರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2017-18 ನೇ ಸಾಲಿನ ಬಿ.ಎಡ್/ಎಂ.ಎಡ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅಂತರ್ ಬಿ.ಎಡ್/ ಎಂ.ಎಡ್ ಕಾಲೇಜ್ನ ಆಟೋಟ ಸ್ಪರ್ಧೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು ಅದರಲ್ಲಿ ನಮ್ಮ ಸಂಸ್ಥೆಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. 100 ಮೀ ದ್ವಿತೀಯ, 200 ಮೀ ಪ್ರಥಮ, ಗುಂಡು ಎಸೆತ ದ್ವಿತೀಯ, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. 100 ಮೀ ದ್ವಿತೀಯ, 400 ಮೀ ದ್ವಿತೀಯ ಮತ್ತು ತೃತೀಯ, 800 ಮೀ ಪ್ರಥಮ, ತೃತೀಯ 400 ರಿಲೇ ಪ್ರಥಮ, ಗುಂಡು ಎಸೆತ ಪ್ರಥಮ ಶಟಲ್ ಬ್ಯಾಡ್ಮಿಟನ್ ದ್ವಿತೀಯ ಸ್ಥಾನವನ್ನು ಮಹಿಳಾ ವಿಭಾಗ ಪಡೆದಿರುತ್ತಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮಹಿಳೆ ವಿಭಾಗದಲ್ಲಿ ಸಮಗ್ರ ಪ್ರಸಸ್ತಿ. ಪ್ರಥಮ ಸ್ಥಾನ, ಮಹಿಳಾ ಚಾಂಪಿಯನ್ ಶಿಪ್ನಲ್ಲಿ 3ನೇ ಸ್ಥಾನ ಹಾಗೂ ಕಾಲೇಜ್ನ ಸಮಗ್ರ ಪ್ರಶಸ್ತಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿರುತ್ತಾರೆ. ಪ್ರಶಸ್ತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಕೋಡಿ ಕುಂದಾಪುರ ಇದರ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೈಂದೂರು ಭಾಗಕ್ಕೆ ಕೇಂದ್ರ ಮೀಸಲು ಪೋಲಿಸ್ ಪಡೆ ಆಗಮಿಸಿದೆ.ಕುಂದಾಪುರ ತಾಲೂಕಿಗೆ 40 ಜನರ ಸಿ.ಆರ್.ಪಿ.ತಂಡ ಆಗಮಿಸಿದೆ.ತಾಲೂಕಿನ ಸುತ್ತಮುತ್ತ ಭಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಉದ್ದೇಶದಿಂದ ಬೈಂದೂರು ಹಾಗೂ ಶಿರೂರಿನ ವಿವಿಧ ಭಾಗಗಳಲ್ಲಿ ಸ್ಥಳೀಯ ಪೋಲಿಸರೊಂದಿಗೆ ಸಿ.ಆರ್.ಪಿ ತಂಡದವರು ಪಥಸಂಚಲನ ನಡೆಸಿದರು.ಈ ಕುರಿತು ಪ್ರತಿಕ್ರಯಿಸಿದ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಮೊದಲ ಹಂತದಲ್ಲಿ 40 ಜನರ ತಂಡ ಪಥ ಸಂಚಲನ ನಡೆಸುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗಿದೆ.ಉಳಿದ ಪೋಲಿಸ್ ತಂಡಗಳಿಂದ ಪ್ಯಾರಾಮಿಲಿಟರಿ ತಂಡಗಳು ನಿಯೋಜನೆಗೊಂಡ ಬಳಿಕ ಕ್ಷೇತ್ರದ ವಿವಿಧ ಭಾಗಗಳಿಗೂ ಪಥಸಂಚಲನ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು:ಬ್ಲಾಕ್ ಕಾಂಗ್ರೇಸ್ ಬೈಂದೂರು ಇದರ ನೂತನ ಕಛೇರಿಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಉಪ್ಪುಂದ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ , ತಾ.ಪಂ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿರೂರು ಗಡಿಭಾಗದಲ್ಲಿ ವಾಹನ ತಪಾಸಣಾ ಚೆಕ್ಪೋಸ್ಟ ಪ್ರಾರಂಭಗೊಂಡಿದೆ. ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿದ ಚುನಾವಣಾಧಿಕಾರಿಗಳು ಈಗಾಗಲೇ ಶಿರೂರು,ಸಿದ್ದಾಪುರ ಹಾಗೂ ಕೊಲ್ಲೂರಿನಲ್ಲಿ ಪ್ರತ್ಯೇಕ ಚೆಕ್ಪೋಸ್ಟ್ ಪ್ರಾರಂಭಿಸಲಾಗಿದೆ.ವಿವಿಧ ಇಲಾಖೆಯ ಅಧಿಕಾರಿಗಳನ್ನು ಸರತಿ ಪ್ರಕಾರ ದಿನದ 24 ಗಂಟೆಯು ತಪಾಸಣೆ ಮಾಡಲಾಗುತ್ತಿದೆ. ವಿಶೇಷ ನಿಗಾ ವಹಿಸಲು ಪ್ರತ್ಯೇಕವಾದ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ..ಪ್ರತಿ ಚೆಕ್ಪೋಸ್ಟ್ಗಳಲ್ಲಿ ಕೇಂದ್ರ ಮೀಸಲು ಪಡೆಯ ಪೋಲಿಸರನ್ನು ನಿಯೋಜಿಸಲಾಗುವುದು ಎಂದರು. ತಪಾಸಣಾ ಚೆಕ್ಪೋಸ್ಟ್ಗಳಿಂದ ನಿತ್ಯ ಪ್ರಯಾಣಿಸುವ ಸ್ಥಳೀಯ ಪ್ರಯಾಣಿಕರಿಗೆ ಮಾತ್ರ ಚುನಾವಣಾ ಬಿಸಿ ತಾಗಿದಂತಾಗಿದೆ.
ಉಪ್ಪುಂದ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಳವು ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಗೌಡ ಸಾರಸ್ವತ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ಅಧಿಕ ಪ್ರಮಾಣದ ಬೆಳ್ಳಿ, ಚಿನ್ನ ಕಳ್ಳತನವಾದ ಘಟನೆ ನಡೆದಿದೆ. ಗರ್ಭಗುಡಿಯ ಹೊರಗಿನ ಹಾಗೂ ಗರ್ಭಗುಡಿಯ ಬಾಗಿಲನ್ನು ಆಯುಧಗಳಿಂದ ಮೀಟಿ ತೆಗೆದು ಅಲ್ಲಿರುವ ಬೆಳ್ಳಿ ಕವಚ ಹೊಂದಿರುವ ದೇವರ ಮೂರ್ತಿ, ಎರಡು ಪ್ರಭಾವಳಿ, ಬೆಳ್ಳಿಯ ಪರಿಕರಗಳು, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಬೆಳಿಗ್ಗೆ ಪೂಜೆಗೆಂದು ಬಂದ ಅರ್ಚಕರು, ಪ್ರಧಾನ ದ್ವಾರದ ಬಾಗಿಲುಗಳಿಗೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಸಂಬಂಧಿಸಿದವರಿಗೆ ವಿಷಯ ತಿಳಿಸಿದ್ದು, ನಂತರ ಇನ್ನೊಂದು ದ್ವಾರದ ಮೂಲಕ ಒಳಗೆ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿರುವ ಮೂರೂ ಮೂರ್ತಿಗಳು ಕಾಣೆಯಗಿದ್ದವು. ನಂತರ ಪರಿಶೀಲಿಸಿದಾಗ ಕಳುವಾದ ಸಾಮಗ್ರಿಗಳ ವಿಚಾರ ಗೊತ್ತಾಗಿದೆ. ನಂತರ ಸುಮಾರು 10 ಗಂಟೆಗೆ ದೇವಳದ ಹಿಂದಿರುವ ಮರ್ಲಮ್ಮಬೆಟ್ಟು (ದೈವದಮನೆ) ಎಂಬಲ್ಲಿ ದೇವರ ಪೀಠ, ಬೆಳ್ಳಿ ಕವಚ ರಹಿತ ದೇವರ ಚಂದನ ಮೂರ್ತಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಬೆಳ್ಳಿಯ ಪ್ರಭಾವಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಹೆಚ್ಚು ಸಹಕಾರಿಯಾಗಿದೆ. ದೇಶಿಯ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡುವ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಸಂಘಟನೆಗಳು ಮುಂದಾಗಬೇಕು. ದೇಶಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿ ಹೇಳಿದರು. ಗಂಗೊಳ್ಳಿಯ ಕರಾವಳಿ ವಾರಿಯರ್ಸ್ ಆಶ್ರಯದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಗಂಗೊಳ್ಳಿ ಕೆಎಫ್ಡಿಸಿ ವಠಾರದಲ್ಲಿ ಆಯೋಜಿಸಲಾಗಿದ್ದ ಬೈಂದೂರು-ಬ್ರಹ್ಮಾವರ ವಲಯ ಮಟ್ಟದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಹರೀಶಕುಮಾರ್, ಸಂತೋಷ ಶೆಟ್ಟಿ ಹೇರಿಕುದ್ರು, ಸತೀಶ ದೇವಾಡಿಗ ಹೆಮ್ಮಾಡಿ, ಸಂಘದ ಅಧ್ಯಕ್ಷ ಗಣೇಶ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಿತೇಶ ಖಾರ್ವಿ ಹಾಗೂ ಮೂವರು ವಿದ್ಯಾರ್ಥಿಗಳಿಗೆ…
