Author: ನ್ಯೂಸ್ ಬ್ಯೂರೋ

ಕುಂದಾಪುರ: ಅವರಿಬ್ಬರೂ ಜೀವದ ಗೆಳೆಯರು. ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹೆಮ್ಮಾಡಿಯಲ್ಲಿಯೂ ಮನೆಮಾತಾದವರು. ತಮ್ಮದೇ ಉದ್ಯೋಗ-ವ್ಯವಹಾರವನ್ನು ಮಾಡಿಕೊಂಡು ಚನ್ನಾಗಿಯೇ ಇದ್ದರು. ಆದರೆ ವಿಧಿಗೆ ಇವರು ಬದುಕುವುದು ಬೇಕಿರಲಿಲ್ಲ. ಬದುಕಿನ ನೂರಾರು ಕನಸು ಹೊತ್ತ ಈ ಸ್ನೇಹಿತರು ಸಾವುನಲ್ಲೂ ಜೊತೆಯಾದರು. ನೆಚ್ಚಿನ ಬೈಕಿನಲ್ಲಿ ಹೊರಟಿದ್ದ ಅವರು ಜೀವಂತವಾಗಿ ಮರಳಲೇ ಇಲ್ಲ. ಸಂಜೆ ಬೈಕ್ ಹಾಗೂ 407 ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಸಹಸವಾರಾಗಿದ್ದ ಸುರೇಂದ್ರ ಗಾಣಿಗ ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದಸಂಪತ್ ಪೂಜಾರಿ ಗಂಭೀರ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ವಂದಿಸದೇ ತಡರಾತ್ರಿ ಮೃತಪಟ್ಟಿದ್ದಾರೆ. ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಹೊಸ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರಿಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಮೇಲ್ಸೆತುವೆ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ…

Read More

ಬೈಂದೂರು: ಆ ಶಾಲೆಯ ಕಟ್ಟಡದ ಒಂದು ಬದಿ ಸಂಪೂರ್ಣ ಬಿದ್ದು ಹೋಗಿದೆ. ವಿದ್ಯುತ್ ಸಂಪರ್ಕದ ತಂತಿಗಳು ಕಿತ್ತು ಹೋಗಿದೆ. ಆದರೂ ಸಹ ಇಲ್ಲಿನ ಶಿಕ್ಷಕರು ಮತ್ತೊಂದು ಕಟ್ಟಡದ ಇರುವ ಎರಡು ಕೊಠಡಿಗಳಲ್ಲಿಯೇ ಮಕ್ಕಳನ್ನು ತುಂಬಿಸಿಕೊಂಡು ನಿಶ್ಚಿಂತೆಯಿಂದ ಪಾಠ ಮಾಡುತ್ತಿದ್ದಾರೆ. ದುರಸ್ತಿಗಳೊಸಬೇಕಾದ ಇಲಾಖೆ ಸುಮ್ಮನೆ ಕುಳಿತಿದೆ. ಬೈಂದೂರು ವಲಯ ಉಪ್ಪುಂದ ಗ್ರಾಮದ ಅಮ್ಮನವರ ತೊಪ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಪ್ರಸಕ್ತ ಸಾಲಿನಲ್ಲಿ 42 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 3ನೇ ತರಗತಿಯವರೆಗಿನ ಮಕ್ಕಳಿಗೆ ನಲಿಕಲಿ ಯೋಜನೆಯಡಿಯಲ್ಲಿ ಒಂದೇ ತರಗತಿಯಲ್ಲಿ ಪಾಠ ಮಾಡಬೇಕಾದುದರಿಂದ ಹೊಸ ಕಟ್ಟಡದ ಒಂದು ಕೊಠಡಿಯನ್ನು ಬಳಸಿಕೊಂಡಿದ್ದಾರೆ. ಆದರೆ ಸಮುದ್ರ ತೀರಕ್ಕೆ ಹತ್ತಿರವೇ ಇರುವ ಶಾಲೆಯ ಹಳೆಯ ಕಟ್ಟಡದ ಒಂದು ಒದಿ ಬಿದ್ದು ಹೋಗಿರುವುದರಿಂದ ಮತ್ತು ಮಳೆ-ಗಾಳಿಯ ರಭಸಕ್ಕೆ ಅದೇ ಕಟ್ಟಡದ ಇನ್ನೊಂದು ಬದಿಯಲ್ಲಿ ಮಕ್ಕಳನ್ನು ಕುರಿಸಿಕೊಂಡು ಪಾಠ ಮಾಡುವುದು ಕಷ್ಟವಾದ್ದರಿಂದ 4 ಮತ್ತು 5ನೇ ತರಗತಿಯ ಮಕ್ಕಳನ್ನು ಒಟ್ಟಾಗಿಸಿ ಹೊಸ…

Read More

ನಾಡ: ಸಂವಿಧಾನದತ್ತ ಹಕ್ಕುಗಳನ್ನು ಪಡೆದು ಸರ್ವಾಂರ್ಗೀಣ ಅಭಿವೃದ್ಧಿಯತ್ತ ಸಾಗಲು ದಲಿತರಿಗೆ ದಲಿತರೇ ಇಂದು ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದಲಿತರಲ್ಲಿನ ಒಗ್ಗಟ್ಟನ್ನು ಮುರಿದು ದಲಿತ ಚಳವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ಗಲಾಟೆ-ಗದ್ದಲ, ಕೇಸು, ಕೋರ್ಟು-ಕಚೇರಿ ಎಂದಷ್ಟೇ ತಪ್ಪುತಿಳಿಯುವಂತಾಗಿದೆ. ದಲಿತ ಸಂಘಟನೆ ಎಂದರೆ ದಲಿತರ ಸ್ವಾಭಿಮಾನ ಜಾಗೃತಿಯೇ ವಿನಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಗೊಂದಲವನ್ನು ಸೃಷ್ಟಿಸುವುದಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಹೇಳಿದರು.

Read More

ಜೀ ಟಿವಿ ಹಿಂದಿ ವಾಹಿನಿಯು ನಡೆಸುತ್ತಿದ್ದ  ಸರಿಗಮಪ ಲಿಟಲ್ ಚಾಂಪ್ಸ್-5 ರಿಯಾಲಿಟಿ ಶೋಗೆ ತೆರೆಬಿದ್ದಿದ್ದು ಈ ಬಾರಿಯ ಲಿಟಲ್ ಚಾಂಪ್ಸ್ ಪಟ್ಟವನ್ನು ಕರ್ನಾಟಕದ ಏಕೈಕ ಸ್ವರ್ಧಿಯಾಗಿದ್ದ ಉಡುಪಿಯ ಪ್ರತಿಭೆ ಗಗನ್ ಗಾಂವ್ಕರ್ ಅಲಂಕರಿಸಿದ್ದಾರೆ.

Read More

ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಹೆಸರು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜಿನ್ ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದ್ದು ಕುಂದಾಪುರಕ್ಕೆ ಮತ್ತೊಂದು ಗರಿ ಬಂದಂತಾಗಿದೆ.  ತನ್ನ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕವೇ ಪ್ರಸಿದ್ಧಿ ಹೊಂದಿದ್ದ ಸತೀಶ್ ಆಚಾರ್ಯ ಅವರ ಹೆಸರು ಫೋರ್ಬ್ಸ್ ನಲ್ಲಿ ಕಾಣಿಸಿಕೊಂಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಏನು ಹೇಳಿದೆ ಫೋರ್ಬ್ಸ್ ಮ್ಯಾಗಜಿನ್? ಫೋರ್ಬ್ಸ್ ಮ್ಯಾಗಜಿನ್ ನ ವೇಗದಲ್ಲಿ ಬದಲಾಗುತ್ತಿರುವ ಭಾರತವನ್ನು ಜಗತ್ತಿಗೆ ಅಸಾಧಾರಣವಾಗಿ ವರ್ಣಿಸುತ್ತಿರುವ, ಭಾರತೀಯ ಮೂಲದ ವಿಶ್ವವಿಖ್ಯಾತ ಚಿಂತಕರೆಂದು ಹೇಳಲಾಗಿರುವ 24 ಮಂದಿ ಖ್ಯಾತನಾಮರ ಪಟ್ಟಿಯಲ್ಲಿರುವ ಭಾರತದ ಸತೀಶ್ ಆಚಾರ್ಯ ಅವರ ಹೆಸರೂ ಇದೆ. ಮಂಗಳೂರು ಮೂಲದ ಚತುರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಭಾರತದ ರಾಜಕಾರಣ ಮತ್ತು ಭಾರತೀಯ ಕ್ರೀಡಾ ಲೋಕವನ್ನು ತಮ್ಮ ಅದ್ಭುತವಾದ ಕಾರ್ಟೂನ್ ಗೆರೆಗಳ ಮೂಲಕ ಸಮಗ್ರವಾಗಿ ಹಿಡಿದಿಡುತ್ತಾರೆ ಎಂದು ಹೇಳಿದೆ.

Read More