Author: ನ್ಯೂಸ್ ಬ್ಯೂರೋ

ಮೂಡುಬಿದಿರೆ: ನುಡಿಸಿರಿಯ ಆಶಯಗಳನ್ನು ಬಲಪಂಥೀಯ ಅಥವಾ ಎಡಪಂಥೀಯ ಎಂಬ ಧೊರಣೆಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರ ವಿಚಾರಗಳಿಗೂ ಇಲ್ಲಿ ವೇದಿಕೆ ಮಾಡಿಕೊಡಲಾಗಿದೆ. ನುಡಿಸಿರಿಯ ಅಧ್ಯಕ್ಷತೆ ವಹಿಸಿದವರು ಒಂದಿಲ್ಲೊಂದು ಪಂಥದಲ್ಲಿ ಗುರುತಿಸಿಕೊಂಡಿದ್ದರು. ಅವರ ಆಯ್ಕೆ ವಿಚಾರದಲ್ಲಿ ನಾವೆಂದೂ ಭೇದ ಮಾಡಿಲ್ಲ. ಯಾರ ವಿಚಾರಧಾರೆಗೂ ತಡೆಯೊಡ್ಡಿಲ್ಲ. ಇದು ನಮ್ಮೇಲ್ಲರ ಸಮ್ಮೇಳನವಾಗಬೇಕೆಂಬುದೇ ನಮ್ಮ ಆಶಯ ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ಹೇಳಿದರು. ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾನು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆಂಬ ಕಾರಣಕ್ಕೆ ನುಡಿಸಿರಿಯನ್ನು ವಿರೋಧಿಸುವುದು ಸರಿಯಲ್ಲ. ತನಗೆ ಧರ್ಮದ ಮೇಲಿರುವ ಅಪಾರ ಗೌರವ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರು ಕೇಳಿಕೊಂಡಿದ್ದರಿಂದ ಆ ಸ್ಥಾನವನ್ನು ಸ್ವೀಕರಿಸಿದ್ದೇನೆ ಆದರೆ ತಾನೆಂದೂ ಕೋಮುವಾದ ಮಾಡಿಲ್ಲ. ಸಮಾಜ ಒಡೆಯುವ ಕೆಲಸ ಮಾಡಿದ ಬಗ್ಗೆ ನಿದರ್ಶನಗಳಿಲ್ಲ. ಮುಸಲ್ಮಾನರು ಹಾಗೂ ಕ್ರೈಸ್ತರೊಂದಿಗೆ ಅನ್ಯೂನ್ಯವಾದ ಬದುಕು ಕಟ್ಟಿಕೊಂಡದ್ದೇನೆ. ಸಾವಿರಾರು ಮುಸಲ್ಮಾನ, ಕ್ರೈಸ್ತ ಮಕ್ಕಳು ತನ್ನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರ ಮೇಲೆಂದೂ ಒತ್ತಡ ಹೇರಿದ…

Read More

ಮೂಡುಬಿದಿರೆ: ಎಲ್ಲಾವನ್ನೂ ಕಬಳಿಸಬೇಕೆಂಬ ದಾಹ ನಮ್ಮ ನಾಳಿನ ಭವಿಷ್ಯವನ್ನು ಅಸ್ಥಿರಗೊಳಿಸುತ್ತಿದೆ. ದಿನದಿಂದ ದಿನಕ್ಕೆ ನಿಸರ್ಗದಿಂದ ದೂರವಾಗಿ, ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ನಿಸರ್ಗ ಹಾಗೂ ಕರುಳಬಳ್ಳಿಯ ಸಂಬಂಧ ತುಂಡಾಗಿದೆ ಎಂದು ಹಿರಿಯ ಲೇಖಕ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಪರಿಸರ ಕಾಳಜಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಏಕಕಾಲಕ್ಕೆ ವೈವಿಧ್ಯಮಯ ಪ್ರಳಯ ಭೂಮಿಯನ್ನು ಭಾದಿಸುತ್ತಿದೆ. ಮನುಷ್ಯನೇ ಇಂದು ಪ್ರಳಯವಾಗಿರುವುದು ಇದಕ್ಕೆಲ್ಲ ಕಾರಣ. ಜನಸಂಖ್ಯೆ ಮಾತ್ರವೇ ಹೆಚ್ಚಾಗದೇ ಪ್ರತಿಯೋಬ್ಬರೂ ಭೂಮಿಯನ್ನು ಹೀರುವ ಪ್ರಮಾಣವೂ ಹೆಚ್ಚುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ರಾಜಕೀಯ ಮುತ್ಸದ್ಧಿಗಳನ್ನು, ವಿಜ್ಞಾನಿಗಳನ್ನು ಗೊಂಬೆಯಂತೆ ಆಡಿಸುತ್ತಿದ್ದು ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸ್ಥಳೀಯ ಸಂಪನ್ಮೂಲಗಳ ವ್ಯವಸ್ಥಿತ ಬಳಕೆಯಿಂದ ಮಾತ್ರ ಇಂತಹ ವ್ಯವಸ್ಥೆಯನ್ನು ಬಗ್ಗುಬಡಿಯಲು ಸಾಧ್ಯ ಎಂದರು. ನಮ್ಮ ಪರಿಸರ ಹೋರಾಟದ ಹಾದಿಯನ್ನು ಬದಲಿಸಿಕೊಳ್ಳಬೇಕಾದ ತುರ್ತು ಇಂದಿದೆ. ನದಿ ತಿರುವು ಬೇಡ. ಬದಲಿಗೆ ಮಳೆ ನೀರಿನ ಸಂಗ್ರಹಣೆ, ಮರುಬಳಕೆಯ ತಂತ್ರಜ್ಞಾನ…

Read More

ಮೂಡುಬಿದಿರೆ: ಶಿಕ್ಷಣ ಮಾನವೀಯ ಮೌಲ್ಯ ಹಾಗೂ ಬಹುತ್ವನ್ನು ಕಲಿಸುವ ಸಾಧನ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮವಾದ ಶಿಕ್ಷಣ ದೊರೆತರೆ ಅಸಹಿಷ್ಟುತೆಯನ್ನು ತೊಡೆದು ಹಾಕಿ ಮೌಲ್ಯಗಳ ನೆಲೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಡಾ. ನಿರಂಜನಾರಾಧ್ಯ ವಿ. ಪಿ. ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಶಿಕ್ಷಣದಲ್ಲಿ ಸಾಂವಿಧಾನಿಕ ಮೌಲ್ಯಗಳು ಎಂಬ ವಿಷಯದಲ್ಲಿ ಮಾತನಾಡಿದರು. ಸಮಾಜಕ್ಕೆ ಒಳಿತಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ಇಂದು ಅನಾರೋಗ್ಯಕರ ಸ್ವರ್ಧೆಯನ್ನು ಹುಟ್ಟುಹಾಕಿದೆ. ನಿಜವಾದ ಶಿಕ್ಷಣ ಮನುಷ್ಯನ ಜ್ಞಾನದ ತಳಹದಿಯ ಮೇಲೆ ನಿಂತಿದೆ. ಜ್ಞಾನದ ತಳಹದಿ ಪ್ರೀತಿಯ ಮೇಲೆ ನಿಂತಿದೆ. ಯಾವ ಶಿಕ್ಷಣದಿಂದ ಇವನ್ನೆಲ್ಲಾ ಕಟ್ಟಿಕೊಡಲು ಸಾಧ್ಯವಿಲ್ಲವೋ ಅದು ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದ ಅವರು ಸಂವಿಧಾನ ಮಾನವೀಯತೆ ಮೂಲಗ್ರಂಥ. ಶಿಕ್ಷಣದಲ್ಲಿ ಹೊಸತನದ ಹುಡುಕಾಟ ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಸಮ ಸಮಾಜವನ್ನು ಕಟ್ಟಿಕೊಳ್ಳಬೇಕಾದ ಮೌಲ್ಯಗಳು ಶಿಕ್ಷಣದ ಹುಡುಕಾಟಕ್ಕೆ ದಾರಿದೀಪವಾಗಬೇಕು ಎಂದರು.

Read More

ಮೂಡುಬಿದಿರೆ: ಕನ್ನಡ ಮಾಧ್ಯಮ ಶಾಲೆಗಳ ಸೋಲು  ಶ್ರೀಸಾಮಾನ್ಯನ, ಸಂಸ್ಕೃತಿಯ ಸೋಲು ಎಂದೇ ಭಾವಿಸಬೇಕಾಗುತ್ತದೆ. ನಮ್ಮನ್ನಾಳುವವರು, ಇಲಾಖೆ, ಶಿಕ್ಷಕರು ಮತ್ತು ಪಾಲಕರು ಸಹಭಾಗಿತ್ವದೊಂದಿಗೆ ಈ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ತಂದರೆ ಕನ್ನಡ ಮಾಧ್ಯಮ ಶಿಕ್ಷಣದಲ್ಲಿಯೂ ಹೊಸತನ ಕಾಣಲು ಸಾಧ್ಯವಿದೆ ಎಂದು ಶಿಕ್ಷಣ ತಜ್ಞ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಹೊಸತನದ ಹುಡುಕಾಟದಲ್ಲಿ ಕನ್ನಡ ಮಾಧ್ಯಮ ಎಂಬ ವಿಷಯದಲ್ಲಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ದೂರದಲ್ಲಿ ನಿಂತು ಹಳಿಯುವ ಬದಲಿಗೆ ನಮ್ಮೂರಿನ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕಟ್ಟಿ ಬೆಳೆಸುವುದು ಹೇಗೆ ಎಂಬ ಕುರಿತು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವುದು, ಶಿಕ್ಷಕರು, ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿಯವುದು ಅತಿ ಮುಖ್ಯ ಎಂದರು.

Read More

ಅಪಾರ ಉಜಿರೆ. ಒಂದು ದಿನ ಮನೆಗೆ ನೆಂಟರಿಷ್ಟರು ಬಂದರೆ ಆವರು ಮರಳಿ ಹೋಗುವುದನ್ನೇ ಕಾಯುತ್ತಿರುತ್ತೇವೆ. ಸಾಲದ್ದಕ್ಕೆ ಮಕ್ಕಳ ಮೂಲಕ ‘ಅಂಕಲ್, ಆಂಟಿ ನೀವು ಯಾವಾಗ ಹೋಗ್ತೀರಾ’ ಎಂದು ಕೇಳಿಸುವ ಪರಿಪಾಠದ ನಡುವೆ ಯಾರೊಬ್ಬರಿಗೂ ತೊಂದರೆಯಾಗದಂತೆ ದಿನಂಪ್ರತಿ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಜನರಿಗೆ ಬಗೆ ಬಗೆಯ ಭಕ್ಷ, ಭೋಜನಗಳ ಉಪಚಾರ ಅಚ್ಚುಕಟ್ಟಾಗಿ ಸದ್ದಿಲ್ಲದೇ ಸಾಗುತ್ತಿದೆ. ಇದು ಸಾಧ್ಯವಾಗುವುದು ಆಳ್ವಾಸ್ ನುಡಿಸಿರಿಯಲ್ಲಿ. ಏಕಕಾಲದಲ್ಲಿ ನುಡಿಸಿರಿಯ ವಿವಿಧ ವೇದಿಕೆಗಳಲ್ಲಿ ನಡೆಯುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳು ಬುದ್ಧಿಯ ಹಸಿವನ್ನು ತಣಿಸಿದರೇ, ಆಳ್ವಾಸ್‌ನ ಭೋಜನಾಲಯದಲ್ಲಿ ತಯಾರಾಗುವ ಖಾದ್ಯಗಳು ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸಾಹಿತ್ಯಪ್ರೀಯರ ಹೊಟ್ಟೆಯನ್ನು ತಂಪಾಗಿರಿಸುತ್ತಿವೆ. ಅಡುಗೆ ಮನೆಯಲ್ಲಿ ಅನ್ನ, ಸಾಂಬಾರ್, ಮೊಸರು, ಪಲ್ಯ ಮೊದಲಾದವುಗಳು ಒಂದೆಡೆ ತಯಾರಾದರೆ ಇನ್ನೊಂದೆಡೆ ಸಿಹಿತಿಂಡಿಗಳು ಪ್ರತ್ಯೇಕವಾಗಿ ತಯಾರಾಗುತ್ತವೆ. ಒಟ್ಟು ೨೪ ಕೌಂಟರ್‌ಗಳಲ್ಲಿ ಬೆಳಗ್ಗೆ 7ಗಂಟೆಯಿಂದ ರಾತ್ರಿ 10:30೦ರ ವರೆಗೆ ನಡೆಯುವ ಈ ಸಂತರ್ಪಣಾ ಕಾರ್ಯಕ್ರಮಕ್ಕೆ ಆಹಾರ ಸರಬರಾಜಾಗುವುದು ಕ್ಯಾಂಪಸ್‌ನ ಆವರಣದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ. ನಾಲ್ಕೂ ದಿನಗಳ ಆಹಾರ ತಯಾರಿಕೆಯ…

Read More

ಅಪರ ಉಜಿರೆ.  ಪ್ರತಿ ವರ್ಷವೂ ನುಡಿಸಿರಿಯು ಒಂದಲ್ಲಾ ಒಂದು ಕಾರಣಕ್ಕೆ ತನ್ನ ವಿಶೇಷತೆಯನ್ನು ಮೆರೆಯುತ್ತಾ ಬಂದಿದೆ. ಎಲ್ಲಾ ನುಡಿಸಿರಿಗಳಲ್ಲೂ ನಾಡಿನ ವಿವಿಧ ಭಾಗಗಳಿಂದ ಚಿತ್ರ ಕಲಾವಿದರನ್ನು ಕರೆಸಿ ಅವರಿಂದ ವಿವಿಧ ಕಲಾಕೃತಿಗಳನ್ನು ಹೊರತರುವ ಕಾರ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಬಾರಿ ೧೨ನೇ ಆಳ್ವಾಸ್ ನುಡಿಸಿರಿಯಲ್ಲಿ ಕೊಂಚ ವಿಶೇಷವೆಂಬಂತೆ ರಾಜ್ಯಮಟ್ಟದ ಆಳ್ವಾಸ್ ಕಲಾಮೇಳವನ್ನು ಆಯೋಜಿಸಿರುವ ಡಾ. ಆಳ್ವರು ನಾಡಿನ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಏರ್ಪಡಿಸಿರುವುದಲ್ಲದೇ ಕಲಾವಿದರಿಗೂ ಅನುಕೂಲವಾಗುವಂತೆ ಮಾರಾಟಕ್ಕೂ ಅವಕಾಶ ನಿಡದ್ದಾರೆ. ಆಳ್ವಾಸ್ ಪದವಿ ಕಾಲೇಜಿನ ಆವರಣದಲ್ಲಿ ರಾರಾಜಿಸುತ್ತಿರುವ ಕಲಾಮೇಳದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು, ಕರಾವಳಿ ಕಲಾವಿದರ ಚಾವಡಿ, ಚಿತ್ರಕಲಾ ಮಂದಿರ ಉಡುಪಿ ಮತ್ತು ವಿಜಯಾ ದೃಶ್ಯಕಲಾ ಮಹಾವಿದ್ಯಾಲಯ ಮೊದಲಾದ ಸಂಸ್ಥೆಗಳನ್ನು ಒಳಗೊಂಡಂತೆ ೬೪ ಕಲಾವಿದರು ಪಾಲ್ಗೊಂಡಿದ್ದಾರೆ. ಯಾವುದೇ ಮಧ್ಯವರ್ತಿಗಳ ತೊಂದರೆಯಿಲ್ಲದೆ ನೇರವಾಗಿ ಗ್ರಾಹಕ ಮತ್ತು ಕಲಾವಿದರ ನಡುವೆ ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ನ್ಯಾಯಯುವ ಮೌಲ್ಯ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ…

Read More

ಮೂಡುಬಿದಿರೆ: ಮಾಧ್ಯಮ ಕ್ಷೇತ್ರಕ್ಷೆ ಪ್ರವೇಶಿಸುವ ಸಾಧನಗಳಿಂದಾಗಿ ಹೊಸತನವನ್ನು ನಿರೀಕ್ಷಿಸಲಾಗದು. ಹೊಸತನದ ಹೊಳಪು ಮೊದಲು ಮನಸ್ಸುಗಳಲ್ಲಿ ಮೂಡಬೇಕಿದೆಯೇ ಹೊರತು ಹೊಸ ಸಾಧನಗಳಿಂದಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ದೃಶ್ಯ ಮಾಧ್ಯಮಗಳು ಟ್ಯಾಬ್ಲಾಯ್ಡ್ ಪರಂಪರೆಯನ್ನೇ ಪ್ಯಾಕ್ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಯ್ದ ವಿಚಾರವನ್ನು ಮಾತ್ರವೇ ಮತ್ತೆ ಮತ್ತೆ ಭಿತ್ತರಿಸುವ ಸಾಧನಗಳಾಗಿ ರೂಪುಗೊಂಡಿವೆ. ಜನರಿಗೆ ಬಯಸುವುದನ್ನೇ ನೀಡುತ್ತಿದ್ದೇವೆ ಮಾಧ್ಯಮಗಳು ಜನರಿಗೆ ಅಗತ್ಯವಾದುದನ್ನು ನೀಡುವ ಬದ್ಧತೆಗೆ ಒಳಗಾಗಬೇಕಿದೆ ಎಂದ ಅವರು ಏಕಮುಖ ಸಂವಹನವನ್ನು ಬಹುಮುಖಿಯಾಗಿಸಿರುವ ಅಂತರ್ಜಾಲ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಸ್ವರೂಪ ಪಡೆಯದೇ ಉಳಿದಿದೆ ಎಂದರು.

Read More

ಮೂಡುಬಿದಿರೆ: ನಮ್ಮ ನಡುವಿನ ಅವಕಾಶವಾದಿ ಪ್ರೌವೃತ್ತಿಯಿಂದ ಜಾತೀಯತೆ ಮತ್ತು ಜಾತ್ಯಾತೀತತೆಗಳ ನಡುವಿನ ಗೊಂದಲ ಹೆಚ್ಚಿತ್ತಿದೆ. ಒಂದು ಧರ್ಮ ಸಂಘಟನೆಯನ್ನು ಮಾತ್ರ ದೂಷಿಸುವುದು ಜಾತ್ಯಾತೀತತೆ ಎಂದೆನಿಸಿಕೊಳ್ಳುವುದಿಲ್ಲ. ಎಲ್ಲಾ ಬಗೆಯ ಸೃಜನ ಪಕ್ಷಪಾತದಿಂದ ಮಾತ್ರ ಜಾತ್ಯಾತೀತರಾಗಲು ಸಾಧ್ಯ ಎಂದು ಪ್ರೊ. ರವೀಂದ್ರ ರೇಷ್ಮೆ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ಹೊಸತನವನ್ನು ಆವಹಿಸಿಕೊಳ್ಳುತ್ತಿರುವ ಮಾಧ್ಯಮದಲ್ಲಿ ಮುಖಪುಟಕ್ಕೂ ಜಾಹೀರಾತಿಗೂ ವ್ಯತ್ಯಾಸ ತಿಳಿಯದಷ್ಟು ಬದಲಾವಣೆಗಳಾಗಿದೆ. ಸಂಪಾದಕರ ಹೆಸರನ್ನು ಹುಡುಕುವ ಮಟ್ಟಿಗೆ ಪತ್ರಿಕೆಗಳು ಬದಲಾಗುತ್ತಿವೆ. ಇದಕ್ಕೆ ಖಾಸಗಿ ಕಂಪೆನಿಗಳ ಬಂಡವಾಳಶಾಹಿ ನೀತಿ ಮಾತ್ರವೇ ಕಾರಣವಾಗಿರದೇ ಪತ್ರಕರ್ತನಲ್ಲಿ ಕ್ಷೀಣಿಸುತ್ತಿರುವ ನಾಯಕತ್ವ ಗುಣವೂ ಕಾರಣವಾಗಿದೆ. ಇಂತಹ ನಾಯಕತ್ವವನ್ನು ಧಮನಿಸುವ ಪ್ರವೃತ್ತಿಯ ವಿರುದ್ದ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.

Read More

ಮೂಡುಬಿದಿರೆ: ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವಾಗ ರಾಕ್ಷಸ ಪ್ರವೃತ್ತಿಗಳು ಜಾಗೃತಗೊಳ್ಳುತ್ತದೆ. ಭಾರತದಲ್ಲಿ ಕಳೆದ ಎಂಟು ತಿಂಗಳಿನಲ್ಲಿ 600ಕ್ಕೂ ಹೆಚ್ಚು ಕೋಮುಗಲಭೆಗಳು ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸನಾತನ ಮೌಲಗಳನ್ನು ಸಮಾಜದಲ್ಲಿ ಬಲವಂತವಾಗಿ ತುಂಬುವ ಕೆಲಸವಾಗುತ್ತಿದೆ. ಸಾಮರಸ್ಯಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವುದು. ಸಮಾಜ ರೋಗಕ್ಕೆ ತುತ್ತಾದಾಗ ಚಿಕಿತ್ಸೆ ನೀಡುವ ಜವಾಬ್ದಾರಿ ನಮ್ಮದೂ ಆಗಿದೆ. ನಮಗೆ ಸಂವಿಧಾನಕ್ಕಿಂತ ಮಿಗಿಲಾದ ಗ್ರಂಥವಿಲ್ಲ. ಇದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಸಾಮರಸ್ಯ ಹೊಸತನದ ಹುಡುಕಾಟ ಎಂಬ ವಿಚಾರವಾಗಿ ವಿಶೇಷೋಪನ್ಯಾಸ ನೀಡಿದರು. ಸಾಮರಸ್ಯಕ್ಕೆ ದೊಡ್ಡ ಪೆಟ್ಟು ಜಾತಿ ವ್ಯವಸ್ಥೆ. ಜಾತಿಯಿಂದಾಗಿ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾನೆ. ದೇಶ ಅಸಹಿಷ್ಣುತೆಯಿಂದ ಮುಕ್ತವಾಗಬೇಕೆಂದಿದ್ದರೇ ಮೊದಲು ಜಾತಿವ್ಯವಸ್ಥೆ ಕೊನೆಗೊಳ್ಳಬೇಕು. ವಾಸ್ತು ಹಾಗೂ ಜೋತಿಷಿಗಳ ರೂಪದಲ್ಲಿ ಮತ್ತೆ ಸಮಾಜದಲ್ಲಿ ತಲೆಯೆತ್ತುತ್ತಿರುವ ವೈದಿಕ ಧರ್ಮ ಸಮಾಜವನ್ನು ನಿಯಂತ್ರಿಸಿ, ದಿನಚರಿಯಲ್ಲಿ ಏರುಪೇರು ಮಾಡುವ ಕೆಲಸ ಮಾಡುತ್ತಿದೆ. ಇಂತಹ ಶಕ್ತಿಗಳು ಭಯೋತ್ಪಾದನೆಗಿಂತ…

Read More

ಮೂಡುಬಿದಿರೆ: ಅಸಹಿಷ್ಣುತೆಯೇ ತುಂಬಿರುವ ಸಮಾಜದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲ ನಮ್ಮನ್ನು ಕಾಡುತ್ತಿದೆ. ದಲಿತ ಮಕ್ಕಳನ್ನು ಸುಡುವ, ದಲಿತ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡುವ, ಅಲ್ಪಸಂಖ್ಯಾತ ಸಮುದಾಯದವರನ್ನು ಹುಡುಕಿಒ ಕೊಲ್ಲುವ ಈ ಸಮಾಜದ ಕುಕೃತ್ಯಗಳನ್ನು  ತನ್ನ ಕವಿತೆ ಮೂಲಕವಾದರೂ ಇವೆಲ್ಲವನ್ನೂ ಖಂಡಿಸುತ್ತೇನೆ ಎಂದು ಟಿ. ಯಲ್ಲಪ್ಪ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಕವಿಸಮಯ ಕವಿನಮನದಲ್ಲಿ’ ತಮ್ಮ ಕವಿತೆ ವಾಚನಕ್ಕೂ ಮೊದಲು ಮಾತನಾಡಿದರು. ಅನುಭವ ಸವಿಯಲ್ಲ. ಅದರ ನೆನಪೇ ಸವಿ. ಆದರೆ ನನ್ನ ವಿಚಾರದಲ್ಲಿ ನೆನಪುಗಳು ನೋವಿನಿಂದ ಕೂಡಿದೆ. ಈ ನೋವನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವ ಕೆಲಸ ಮಾಡಿದ್ದೇವೆ ಎಂದ ಅವರು ಕಲ್ಲು ಬೀಸಿದ ಜನರನ್ನು ಕರುಣೆಯ ಕಂಗಳಿಂದ ನೋಡುವ ಜನ ನಮ್ಮವರು ಕವಿತೆ ಮೂಖಾಂತರ ಮನುಷತ್ವನ್ನು ಹುಡುಕುವ ಕೆಲಸ ಮಾಡಿದ್ದೇವೆ ಎಂದರು.

Read More