Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗುಂಡುಹಾಕಿ ಶಿಕಾರಿಗೆ ಹೊರಟವ ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ. ಕೊಲೆ ಶಂಕೆ
    Recent post

    ಗುಂಡುಹಾಕಿ ಶಿಕಾರಿಗೆ ಹೊರಟವ ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ. ಕೊಲೆ ಶಂಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ಶಿಕಾರಿಗೆಂದು ಒಟ್ಟಿಗೆ ತೆರಳಿದ್ದ ಸ್ನೇಹಿತನನ್ನು ಗುಂಡಿಟ್ಟು ಕೊಂದು ಘಟನೆ ಹೇರೂರು ಗ್ರಾಮದ ಮೇಕೋಡು ಜಕ್ಷನ್ ಬಳಿ ನಡೆದಿದ್ದು, ಘಟನೆಯಲ್ಲಿ ಕಂಬದಕೋಣೆ ಗ್ರಾಮದ ಆಚಾರಬೆಟ್ಟು ನಿವಾಸಿ ಪ್ರಶಾಂತ ಶೆಟ್ಟಿ(24) ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿರುವ ಮೇಕೊಡಿನ ಅಂಕಿತ ಶೆಟ್ಟಿ(24) ಹಾಗೂ ಇನ್ನಿರ್ವರನ್ನು ಬಂಧಿಸಲಾಗಿದೆ.

    Click Here

    Call us

    Click Here

    ಘಟನೆಯ ವಿವರ:
    ಸ್ನೇಹಿತರಾದ ಪ್ರಶಾಂತ ಶೆಟ್ಟಿ, ಅಂಕಿತ್ ಶೆಟ್ಟಿ, ಮನೀಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಎಂಬುವವರು ಒಟ್ಟಾಗಿ ಮಧ್ಯಾಹ್ನ ಅಂಕಿತ್ ಶೆಟ್ಟಿಯ ಮನೆಯಲ್ಲಿ ಗಡಿಪೂಜೆ ಊಟವನ್ನು ಮುಗಿಸಿ, ಸಂಜೆಯ ವರೆಗೆ ಮನೆಯ ಸಮೀಪದಲ್ಲಿಯೇ ಕ್ರಿಕೆಟ್ ಆಡಿಕೊಂಡು ಬಳಿಕ ನಾವುಂದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಶಿಕಾರಿಗೆಂದು ತೆರಳುವುದಾಗಿ ನಿರ್ಧರಿಸಿ ಮರಳಿ ಮೇಕೋಡಿನ ಅಂಕಿತನ ಮನೆಗೆ ತೆರಳಿದ್ದಾರೆ. ಮನಿಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಅಂಕಿರ ಶೆಟ್ಟಿಯ ಇನ್ನೊಂದು ಮನೆಯಲ್ಲಿ ಹೋಗಿ ಮಲಗಿಕೊಂಡರೇ, ಪ್ರಶಾಂತ ಶೆಟ್ಟಿ ಅಂಕಿತ ಶೆಟ್ಟಿಯ ಮನೆಗೆ ತೆರಳಿದ್ದಾನೆ. ಅಲ್ಲಿ ಅಂಕಿತ್ ಬಂದೂಕು ಹಿಡಿಕೊಂಡಿರುವಾಗ ಟ್ರಗರ್ ಮೇಲೆ ಕೈಯಿಟ್ಟಿದ್ದರಿಂದ ಗುಂಡು ಹಾರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಕುಡಿದ ಮತ್ತಿನಲ್ಲಿ ನಡೆದ ಘಟನೆಯಿಂದ ಎಚ್ಚತ್ತ ಅಂಕಿತ ಶೆಟ್ಟಿಯ ತಂದೆ ಕೂಡಲೇ ಪ್ರಶಾಂತನನ್ನು ಕಾರಿನಲ್ಲಿಯೇ ಕುಂದಾಪುರದ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮಧ್ಯೆಯೇ ಪ್ರಶಾಂತ ಕೊನೆಯುಸಿರೆಳೆದ್ದಾರೆ. ಪ್ರಶಾಂತನ ಎದೆಯ ಎಡ ಭಾಗದಲ್ಲಿ ಗುಂಡು ಹೊಕ್ಕಿರುವುದರಿಂದ ಗಂಭಿರ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ಎದೆಗೆ ಹೊಕ್ಕ ಗುಂಡನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ.

    ವಾರದ ಹಿಂದಷ್ಟೇ ಊರಿಗೆ ಬಂದಿದ್ದ ಪ್ರಶಾಂತ:
    ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ಪ್ರಶಾಂತ ಶೆಟ್ಟಿ ವಾರದ ಹಿಂದಷ್ಟೇ ಊರಿಗೆ ಆಗಮಿಸಿದ್ದು, ಸ್ನೇಹಿತನಾದ ಅಂಕಿತನ ಮನೆಯಲ್ಲಿ ಗಡಿಪೂಜೆ ಇದ್ದುದರಿಂದ ಆತನ ಮನೆಗೆ ತೆರಳಿದ್ದ. ಮನೆಯಲ್ಲಿ ಒಟ್ಟಿಗೆ ಊಟ ಮಾಡಿದ್ದ ಸ್ನೇಹಿತರು ಹನ್ನೊಂದರ ವರಗೆ ಕುಡಿದು ಮರಳಿ ಅಂಕಿತ ಮನೆಗೆ ತೆರಳಿದ್ದೇ ಪ್ರಶಾಂತನಿಗೆ ಉರುಳಾಗಿತ್ತು. ಶಿಕಾರಿಗೆ ಹೋಗಲು ನಿರ್ಧರಿಸಿದ್ದ ಇಬ್ಬರು ಪ್ರಶಾಂತನ ಮನೆಗೆ ಕರೆಮಾಡಿ ಬೆಳಿಗ್ಗೆಯ ಜಾವ ಬರುತ್ತಾನೆಂದು ಸ್ವತಃ ಅಂಕಿತನೇ ತಿಳಸಿದ್ದ. ಆದರೆ ಅವರ ನಡುವೆ ಏನಾಯಿತೋ. ಪ್ರಶಾಂತ ಮಾತ್ರ ಹೆಣವಾಗಿದ್ದ.

    ಪೊಲೀಸರು ಅಂಕಿತನನ್ನು ವಿಚಾರಣೆಗೆ ಒಳಪಡಿಸಿದಾಗ ವ್ಯತಿರಿಕ್ತ ಹೇಳಿಕೆ ನೀಡಿದ್ದ. ಮೊದಲು ಯಾರೂ ಮೂವರ ಅಪರಿಚಿರತ ಮ್ಯಾಕೋಡು ಜಂಕ್ಷನ್ ಬಳಿ ಬಂದು ಪ್ರಶಾಂತನಿಗೆ ಗುಂಡಿಕ್ಕಿ ಕೊಂದು ಹೋದರು ಎಂದು ಹೇಳಿದ್ದರೆ, ಬಳಿಕ ಅಚಾನಾಕಾಗಿ ಗುಂಡು ಪೈರ್ ಆಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾನೆ.

    Click here

    Click here

    Click here

    Call us

    Call us

    ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಸುದರ್ಶನ ಮುದ್ರಾಡಿ, ದಿವಾಕರ್, ಠಾಣಾಧಿಕಾರಿ ಸಂತೋಷ ಆಂನದ ಕಾಯ್ಕಿಣಿ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಕೆ ಪ್ರಗತಿಯಲ್ಲಿದೆ.

    Like this:

    Like Loading...

    Related

    Murder
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಕುಂದಾಪುರ: ಕಾರಿನಲ್ಲಿ ಇರಿಸಿದ್ದ ಹಣವನ್ನು ಹಾಡಹಗಲೇ ಲಪಟಾಯಿಸಿದ ಖದೀಮರು

    06/11/2025

    ರಿಕ್ಷಾಕ್ಕೆ ಪಿಕಪ್ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕನ ಸಾವು

    18/10/2025

    ಕೊಡೇರಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು, ಓರ್ವ ಪ್ರಾಣಾಪಾಯದಿಂದ ಪಾರು

    14/10/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d