Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಧನಾ ಕಲಾ ಸಂಗಮದಲ್ಲಿ ನೃತ್ಯಾಂಜಲಿ
    ಪ್ರಚಲಿತ

    ಸಾಧನಾ ಕಲಾ ಸಂಗಮದಲ್ಲಿ ನೃತ್ಯಾಂಜಲಿ

    Updated:26/02/2020No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಲೇಖನ
    ಸ್ವಸ್ಥ ಜಗತ್ತನ್ನು ನಿರ್ಮಿಸುವಲ್ಲಿ ಭಾರತ ನೀಡಿದ ಅತ್ಯುತ್ತಮ ಕೊಡುಗೆ ಯೋಗ. ಇತ್ತೀಚಿನ ವರ್ಷಗಳಲ್ಲಿ ಇದು ಎಷ್ಟೊಂದು ಪ್ರಚಾರ ಪಡೆದಿದೆಯೆಂದರೆ ವಿದೇಶಿ ಪ್ರವಾಸಿಗರ ತಂಡ ಈ ವಿಜ್ಞಾನವನ್ನು ಅಭ್ಯಸಿಸಲಿಕ್ಕಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತಹ ಒಂದು ಗುಂಪು- ಶಿವರಾಮ ಅನ್ನುವ ಫ್ರಾನ್ಸ್‌ನಲ್ಲಿ ಜನಿಸಿ ಕೆನಡಾದಲ್ಲಿ ಬೆಳೆದ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ನೇತೃತ್ವದಲ್ಲಿ ಈಗ ಕುಂದಾಪುರದಲ್ಲಿ ಇದೆ. ಸುಮಾರು 24 ಮಂದಿ ಇರುವ (ಫ್ರಾನ್ಸ್, ಕೆನಡಾ, ಅಮೇರಿಕಾ, ಜಪಾನ್, ಟ್ಯುನೇಷಿಯಾ, ಬೆಲ್ಜಿಯಂ……) ಈ ಯೋಗ ರಿಟ್ರೀಟ್ ತಂಡಕ್ಕೆ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಅತೀವ ಆಸಕ್ತಿ.

    Click Here

    Call us

    Click Here

    ಭಾರತೀಯ ಪರಂಪರೆಯನ್ನು ಉದ್ದೀಪನಗೊಳಿಸಲು ಸ್ಥಾಪಿಸಲ್ಪಟ್ಟ ಕುಂದಾಪುರದ ಸಾಧನಾ ಕಲಾ ಸಂಗಮ ನಾರಾಯಣ ಐತಾಳರ ನೇತೃತ್ವದಲ್ಲಿ, ಶಾಸ್ತ್ರೀಯ ಕಲೆಗಳನ್ನು ಮುಂದುವರೆಸುವ ಪ್ರಯತ್ನದಲ್ಲಿ ಒಳ್ಳೆಯ ಹೆಸರು ಮಾಡಿದೆ. ಶಾಸ್ತ್ರೀಯ ಗಾಯನ, ವಾದನ, ನರ್ತನಗಳಲ್ಲಿ ಪ್ರತಿಭೆಯನ್ನು ಹೊಂದಿರುವ ಶಿಕ್ಷಕರು/ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ಇವರ ಆಶ್ರಯದಲ್ಲಿ ಇತ್ತೀಚೆಗೆ ಮೇಲೆ ತಿಳಿಸಿದ ಯೋಗ ರಿಟ್ರೀಟ್ ತಂಡಕ್ಕೆ ಒಂದು ಭರತನಾಟ್ಯ ಕಾರ‍್ಯಕ್ರಮ ಸಂಸ್ಥೆಯ ನೃತ್ಯಗುರುಗಳಾದ ವಿದುಷಿ ಶಾಂಭವಿ ಆಚಾರ್ಯರಿಂದ ಆಯೋಜಿಸಲ್ಪಟ್ಟಿತು. ಇವರು ಉಡುಪಿ ಹೆಸರಾಂತ ನೃತ್ಯಗುರು ನಾಟ್ಯಮಯೂರಿ ಲಕ್ಷ್ಮೀ ಗುರುರಾಜ್ ಇವರ ಶೀಷ್ಯೆ.

    ಪುಪ್ಪಾಂಜಲಿ ನೃತ್ಯದಿಂದ ಪ್ರಾರಂಭ- ಜೋಗ್ ರಾಗದ ಆದಿತಾಳದಲ್ಲಿ ನೃತ್ತಾಂಗ ದೇವರಿಗೆ, ಸಭೆಯ ದಿಕ್ಪಾಲಕರಿಗೆ, ಗುರುಗಳಿಗೆ, ಸಭೆಗೆ ಹಾಗೂ ರಂಗಸ್ಥಳಕ್ಕೆ ವಂದಿಸಿ ಆಶೀರ್ವಾದ ಪಡೆಯುವ ಮೂಲಕ ಶುರುವಾಯಿತು. ಇದು ನೃತ್ಯ ಕಾರ‍್ಯಕ್ರಮಕ್ಕೆ ಬೇಕಾದ ಉಠಾವ್ ನೀಡುವಲ್ಲಿ ಸಫಲವಾಯಿತು.

    ಎರಡನೆಯ ನೃತ್ಯ ಗಣೇಶಸ್ತುತಿ ಮುತ್ತು ಸ್ವಾಮಿ ದೀಕ್ಷಿತರ ಕೃತಿಯನ್ನು ರಾಗ ಚಕ್ರವಾಕ/ಆದಿತಾಳದಲ್ಲಿ ವಿದುಷಿ ಅತ್ಯುತ್ತಮವಾಗಿ ಪ್ರಸ್ತುತಿ ಪಡಿಸಿದರು. ವಿಘ್ನನಾಶಕನ ಹಾವಭಾವಗಳನ್ನು ಯಥಾವತ್ತಾಗಿ ಅಭಿನಯಿಸಿದ ನರ್ತಕಿ ವಿದೇಶಿ ಅತಿಥಿಗಳ ಮನಸೂರೆಗೊಂಡರು.

    ನಂತರ ದೇವಿಸ್ತುತಿ – ಸೃಷ್ಠಿ ಸ್ಥಿತಿ ಲಯಗಳ ಹಿಂದಿನ ಶಕ್ತಿ – ರಾಗಮಾಲಿಕಾ/ತಾಳಮಾಲಿಕಾದಲ್ಲಿ ನರ್ತಿಸಲ್ಪಟ್ಟಿತು. ದೇವಿಯ ಶಾಂತ, ಸಮ, ರೌದ್ರ ರೂಪಗಳೆಲ್ಲವೂ ಪ್ರದರ್ಶಿಸಲ್ಪಟ್ಟು ನೃತ್ಯಗುರುವಿನ ಪ್ರತಿಭೆಗೆ ಸಾಕ್ಷಿಯಾಯಿತು.

    Click here

    Click here

    Click here

    Call us

    Call us

    ಮುಂದಿನ ನೃತ್ಯ ದಾಸರ ಪದ; ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮೋಕ್ಷ ಸಾಧನೆಗೆ ಭಕ್ತಿಮಾರ್ಗ ಶ್ರೇಷ್ಠವಾದದ್ದು. ದಾಸಶ್ರೇಷ್ಠ ಪುರಂದರ ದಾಸರ ಕೃತಿಯೊಂದು ರಾಗಮಾಲಿಕಾ/ಆದಿತಾಳದಲ್ಲಿ ಪ್ರದರ್ಶನಗೊಂಡಿತು. ಪುರಂದರ ವಿಠಲ ಅಂದರೆ ವಿಷ್ಣುವನ್ನು ಸ್ತುತಿಸುವ ಈ ಪದ್ಯ ಭಕ್ತಿಭಾವದಿಂದ ವ್ಯಕ್ತಗೊಂಡಿತು.

    ಅಷ್ಟಪದಿಗಳೆಂದರೆ ಎಂಟು ಪಾದಗಳುಳ್ಳ ಹಾಡುಗಳು. ಅವುಗಳ ಪೈಕಿ ಜಯದೇವನ ಗೀತಗೋವಿಂದಕ್ಕೆ ಅಗ್ರಸ್ಥಾನ. ಭರತನಾಟ್ಯ ಕಚೇರಿ ಅಷ್ಟಪದಿಯ ವಿನಃ ಅಪೂರ್ಣ ಎಂಬಷ್ಟರ ಮಟ್ಟಿಗೆ ನಿರ್ಣಯವು ಬೆಳೆದಿದೆ. ರಾಧಾಮಾಧವರ ಸರಸ ಸಲ್ಲಾಪಗಳು, ಶೃಂಗಾರ ಭಾವಗಳಲ್ಲಿ ನಿರೂಪಿಸುವ ಸುಂದರವಾದ ಸಂಸ್ಕೃತ ಕಾವ್ಯ. ನೃತ್ಯದ ಸಂಚಾರಿಭಾವ, ಕಲಾವಿದೆಯ ಅಭಿನಯ ಪಾಂಡಿತ್ಯ- ಎಲ್ಲವೂ ರಾಗ ದರ್ಬಾರಿ/ಆದಿತಾಳದಲ್ಲಿ ಸೊಗಸಾಗಿ ಮೂಡಿಬಂತು. ಸಭೆಯನ್ನು ಒಂದು ದೈವಿಕ ಅನುಭೂತಿಗೆ ಕರೆದೊಯ್ಯಿತು ಅಂದರೂ ಅತಿಶಯೋಕ್ತಿಯಲ್ಲ.

    ಡಾ| ಎಚ್. ರಾಘವೇಂದ್ರ ಹೆಬ್ಬಾರ್

    ಕೊನೆಯದಾಗಿ ತಿಲ್ಲಾನ ಪರಿಚಯಿಸಲ್ಪಟ್ಟಿತು. ತಿಲ್ಲಾನವೆಂದರೆ ನಾದಲಯಗಳಿಂದ ಕೂಡಿದ ಸಂಗೀತಕ್ಕೆ ಸುಂದರ ಶಿಲ್ಪಭಂಗಿಗಳನ್ನು ಮತ್ತು ಶೊಲ್ಕಟ್ಟುಗಳನ್ನು ಅಳವಡಿಸಿ, ಶೀಘ್ರಗತಿಯಲ್ಲಿ ರೂಪಿಸುವ ರಚನೆ. ಇದು ಕಲಾವಿದೆ ತನ್ನ ವಿದ್ಯಾ ಸಂಪೂರ್ಣತೆ, ಪರಿಪೂರ್ಣತೆಯನ್ನು ಸೂಚಿಸುವ ಸಲುವಾಗಿ ಆಯ್ದುಕೊಂಡ ಅಂತಿಮವಾಗಿ ಶಾಂತರಸಕ್ಕೆ ತುಡಿಯುವ ನೃತ್ತಬಂಧ. ಇದನ್ನು ರಾಗ ಹಿಂದೋಳ/ಆದಿತಾಳದಲ್ಲಿ ಮಂಗಲಪ್ರದವಾಗಿ ವಿದುಷಿ ಶಾಂಭವಿ ಆಚಾರ್ಯ ನಿರೂಪಿಸಿದರು.

    ಒಂದೂವರೆ ಗಂಟೆಗಳ ಕಾಲ ಎಲ್ಲರನ್ನೂ – ಮುಖ್ಯವಾಗಿ ವಿದೇಶಿ ಅತಿಥಿಗಳನ್ನು ಮಂತ್ರಮುಗ್ಧಗೊಳಿಸಿದ ಈ ಏಕವ್ಯಕ್ತಿ

    ಭರತನಾಟ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಕೇಳಿದಾಗ ಅವರ ಯೋಗಗುರು ಶಿವರಾಮ ಕಲಾವಿದೆಗೆ ಸಾಷ್ಟಾಂಗ ವಂದಿಸಿದ್ದು ಅವರು ಭಾರತೀಯ ಕಲೆಗೆ ಎಷ್ಟೊಂದು ಗೌರವ ನೀಡುತ್ತಾರೆ ಎಂಬುದನ್ನು ತೋರಿಸಿತು.

    ಸಾಧನಾ ಕಲಾ ಸಂಗಮದ ಈ ಸ್ತುತ್ಯರ್ಹ ಪ್ರಯತ್ನ ಯಥೋಚಿತವಾಗಿ ಸಂಪೂರ್ಣ ಫಲಪ್ರದವೆನಿಸಿತು.

    ಡಾ| ಎಚ್. ರಾಘವೇಂದ್ರ ಹೆಬ್ಬಾರ್, ಕುಂದಾಪುರ

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.