Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮರವಂತೆಯಲ್ಲಿ ಕಡಲ್ಕೋರೆತ: ಆತಂಕದಲ್ಲಿ ಸಮುದ್ರ ತೀರದ ನಿವಾಸಿಗಳು
    ಊರ್ಮನೆ ಸಮಾಚಾರ

    ಮರವಂತೆಯಲ್ಲಿ ಕಡಲ್ಕೋರೆತ: ಆತಂಕದಲ್ಲಿ ಸಮುದ್ರ ತೀರದ ನಿವಾಸಿಗಳು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಮರವಂತೆಯಲ್ಲಿ ಮಂಗಳವಾರ ಆರಂಭವಾದ ಕಡಲ್ಕೊರೆತ ಬುಧವಾರ ಇನ್ನಷ್ಟು ತೀವ್ರ ಗತಿ ಪಡೆದುಕೊಂಡಿದೆ. ಇಲ್ಲಿನ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ 500 ಮೀಟರ್ ಉದ್ದದ ತೀರಕ್ಕೆ ಅಪ್ಪಳಿಸುತ್ತಿರುವ ಅಲೆಗಳು ಈಗಾಗಲೇ ಎರಡು ಮೀಟರು ಅಗಲದ ಭೂಪ್ರದೇಶವನ್ನು ಕೊರೆದು ಸಮುದ್ರಕ್ಕೆ ಸೇರಿಸಿವೆ.

    Click Here

    Call us

    Click Here

    ಪಕ್ಕುಮನೆ ದಿನಕರ ಖಾರ್ವಿಗೆ ಸೇರಿದ ಮೀನುಗಾರಿಕಾ ಶೆಡ್ ಉರುಳಿದ್ದು, ಅದರ ಸಮೀಪದಲ್ಲಿರುವ ಪಕ್ಕುಮನೆ ಚಂದ್ರ ಖಾರ್ವಿ ಅವರ ಶೆಡ್‌ಅನ್ನು ಉಳಿಸಿಕೊಳ್ಳಲು ಅವರು ಮರಳಿನ ಚೀಲಗಳನ್ನು ಪೇರಿಸುವ ಕೆಲಸ ಮಾಡುತ್ತಿದ್ದಾರೆ. ಕೊರೆತ ನಡೆಯುತ್ತಿರುವ ಸ್ಥಳದಿಂದ 10 ರಿಂದ 15 ಮೀಟರ್ ಅಂತರದಲ್ಲಿ ಮೂರು ತಿಂಗಳ ಹಿಂದೆ ರಾಜ್ಯ ನೀರಾವರಿ ನಿಗಮದ ಲೆಕ್ಕ ಶೀರ್ಷಿಕೆಯ ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ, ಅದರಾಚೆಗೆ ಸುಮಾರು 25 ಮೀನುಗಾರರ ಮನೆಗಳಿವೆ. ಕೊರೆತ ಉಲ್ಬಣಿಸಿದರೆ ಇವುಗಳಿಗೆ ಅಪಾಯ ಇದೆ ಎಂದು ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಆತಂಕ ವ್ಯಕ್ತ ಪಡಿಸಿದ್ದಾರೆ.

    ► ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುನ್ನೆಚ್ಚರಿಕೆ ವಹಿಸಲು ಸೂಚನೆ – https://kundapraa.com/?p=48143 .

    ಮರುಕಳಿಸುತ್ತಿರುವ ಕೊರೆತ: ಹೊರಬಂದರು ಕಾಮಗಾರಿಯ ಬಳಿಕ ಮರವಂತೆಯ ಈ ಪ್ರದೇಶದಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ವೇಳೆ ಬೇಸಿಗೆಯಲ್ಲೂ ಕೊರೆತ ಸಂಭವಿಸುತ್ತಿದೆ. ಅಷ್ಟಷ್ಟಾಗಿ ನಡೆದ ಕೊರೆತದಿಂದ ಇಲ್ಲಿನ ಹತ್ತಾರು ಮೀಟರ್ ಅಗಲದ ಪ್ರದೇಶವನ್ನು ಸಮುದ್ರ ಕಬಳಿಸಿದೆ. ಇದನ್ನು ತಡೆಯಲು ಸಮೀಪದ ಮಾರಸ್ವಾಮಿಯಲ್ಲಿ ಹೆದ್ದಾರಿ ರಕ್ಷಣೆಗೆ ನಿರ್ಮಿಸಿರುವ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಮಾದರಿಯ ಅಲೆತಡೆಗಳನ್ನು ನಿರ್ಮಿಸಬೇಕು ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮೇಲಿಂದಮೇಲೆ ಮನವಿ ಸಲ್ಲಿಸಲಾಗಿದೆ. ಈಗಲೂ ಇಲ್ಲಿನ ಸ್ಥಿತಿಯ ವೀಡಿಯೊಗಳನ್ನು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಎಂಜಿನಿಯರ್‌ಗಳಿಗೆ ಕಳುಹಿಸುತ್ತಲೇ ಇದ್ದೇವೆ. ಯಾವುದೂ ಫಲ ನೀಡಿಲ್ಲ ಎಂದು ಕೆ. ಎಂ. ಸುದರ್ಶನ ಖಾರ್ವಿ ಅಳಲು ತೋಡಿಕೊಳ್ಳುತ್ತಾರೆ. ದಾಸಿ ಲಕ್ಷ್ಮಣ ಖಾರ್ವಿ, ಬೇಡು ಶೀನ ಖಾರ್ವಿ, ಎಂ. ಎಸ್. ಕೆ. ಮರ್ಲ ಖಾರ್ವಿ, ಬೀದಿ ಮಂಜಖಾರ್ವಿ, ಗೋವೆಕನ್ನಮನೆ ಶಂಕರ ಖಾರ್ವಿ, ಕೆ. ಎಂ. ಸುದರ್ಶನ ಖಾರ್ವಿ, ಕೆ. ಎಂ. ಶ್ರೀನಿವಾಸ ಖಾರ್ವಿ, ಕೆ. ಎಂ. ರಾಜು ಖಾರ್ವಿ, ಬಡ್ಕನ ನಾರಾಯಣ ಖಾರ್ವಿ, ಬಡ್ಕನ ಅಶೋಕ ಖಾರ್ವಿ ಅವರಿಗೆ ಸೇರಿದ್ದ ೩೩ ತೆಂಗಿನ ಮರಗಳು ಉರುಳಿಹೋಗಿವೆ. ಇನ್ನಷ್ಟು ಉರುಳುವ ಹಂತದಲ್ಲಿವೆ ಎನ್ನುತ್ತಾರೆ ಭೂಪ್ರದೇಶ, ಮರ ಕಳೆದುಕೊಂಡ ನಿವಾಸಿಗಳು.

    ಒಮ್ಮೆ ಆರಂಭವಾದ ಸಮುದ್ರದ ಅಬ್ಬರ ಎರಡು, ಮೂರು ದಿನ ಮುಂದುವರಿಯುತ್ತದೆ. ಅದರ ನಡುವೆ 14ರಂದು ಅರಬಿ ಸಮುದ್ರದಲ್ಲಿ ’ತೌಕ್ತೇ’ ಚಂಡಮಾರುತ ರೂಪುಗೊಂಡು, 20ರ ವರೆಗೆ ಪ್ರಭಾವ ಬೀರಲಿದೆ ಎಂದು ಮುನ್ನಚ್ಚರಿಕೆ ನೀಡಲಾಗಿದೆ. ಅದೇನಾದರೂ ಇಲ್ಲಿ ಪ್ರಬಲವಾದರೆ ದೊಡ್ಡ ಅನಾಹುತ ಕಾದಿದೆ. – ಮೀನುಗಾರ ಮುಖಂಡ. ಪಕ್ಕುಮನೆ ಚಂದ್ರ ಖಾರ್ವಿ

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಿ.23ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ

    19/12/2025

    ಕೋಟ ಅಮೃತೇಶ್ವರೀ ಜಾತ್ರಾ ಆಮಂತ್ರಣ ಬಿಡುಗಡೆ

    19/12/2025

    ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

    19/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಡಿ.23ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ
    • ಕೋಟ ಅಮೃತೇಶ್ವರೀ ಜಾತ್ರಾ ಆಮಂತ್ರಣ ಬಿಡುಗಡೆ
    • ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
    • ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿಯು ಕಾಲೇಜು
    • ಸಿಎಲ್‌ಎಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣ  

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.