Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ …
    ವಿಶೇಷ ವರದಿ

    ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ …

    Updated:27/09/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಗ೦ಗೊಳ್ಳಿ: ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ… ಹಾಗ೦ತ ಗ೦ಗೊಳ್ಳಿಯ ಬೀಚಿಗೆ ಹೋದ ಜನರು ಮೂಗು ಮುಚ್ಚಿಕೊ೦ಡು ಮಾತನಾಡುತ್ತಿದ್ದರೆ ಇಡೀ ಊರಿಗೆ ಊರೇ ತಲೆತಗ್ಗಿಸುವ೦ತಾಗುತ್ತದೆ. ಅದು ಮಾತನಾಡುತ್ತಿರುವವರ ತಪ್ಪಲ್ಲ. ಅಲ್ಲಿಯ ಪರಿಸ್ಥಿತಿಯೇ ಹಾಗಿರುವುದು ನಿಜ. ಗ೦ಗೊಳ್ಳಿಯ ಸಮುದ್ರ ತೀರದಾದ್ಯ೦ತ ಅಲ್ಲಲ್ಲಿ ತ್ಯಾಜ್ಯದ ರಾಶಿಗಳೇ ಕ೦ಡುಬರುತ್ತಿದ್ದು ಇಡೀ ಪರಿಸರ ದುರ್ನಾತ ಹೊಡೆಯುತ್ತಿದೆ. ಗ೦ಗೊಳ್ಳಿಯ ಚರ್ಚ್ ರಸ್ತೆಯಿ೦ದ  ಬೀಚಿನ ಪ್ರಮುಖ ಭಾಗವನ್ನು ಸ೦ಪರ್ಕಿಸುವ ರಸ್ತೆಯ ಕೊನೆಯಲ್ಲ೦ತೂ ತ್ಯಾಜ್ಯದ ಒ೦ದು ದೊಡ್ಡ ವಲಯವೇ ನಿರ್ಮಾಣವಾದ೦ತಿದ್ದು ಸಮುದ್ರ ತೀರಕ್ಕೆ ಆಗಮಿಸುವವರನ್ನು ಅತ್ಯ೦ತ ಕೆಟ್ಟ ರೀತಿಯಲ್ಲಿ ಸ್ವಾಗತ ಕೋರುತ್ತಿದೆ. ಅಪರೂಪಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ಈ ತ್ಯಾಜ್ಯವನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿರುವುದು ಯಾವ ಊರಿಗೂ ಶೋಭೆ ತರುವ೦ತದ್ದಲ್ಲ.

    Click Here

    Call us

    Click Here

    ಇಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮಳೆಯ ನೀರಿನೊ೦ದಿಗೆ ಸೇರಿಕೊ೦ಡು ಕೊಳೆತು ನಾರುತ್ತಾ ಊರಿನಲ್ಲಿ ಸಾ೦ಕ್ರಾಮಿಕ ರೋಗದ ಭೀತಿಯನ್ನು ಹುಟ್ಟುಹಾಕಿದೆ. ದೊಡ್ಡ ಮಳೆಗೆ ಈ ತ್ಯಾಜ್ಯ ರಸ್ತೆಯ ಮೇಲೆ ಹರಿದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.ಪಕ್ಕದಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲೆಯ ಆಟದ ಬಯಲುಗಳಿದ್ದು ಈ ತೆರನಾದ ವಾತವರಣ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಈ ಹಿ೦ದೆ ಗ೦ಗೊಳ್ಳಿಯ ಪರಿಸರದಲ್ಲಿ ತ್ಯಾಜ್ಯದ ಸಮಸ್ಯೆ ಮಿತಿಮೀರಿದಾಗ ಅದನ್ನು ಪರಿಹರಿಸಲೋಸುಗ ಕೆಲವೊ೦ದು ಏರಿಯಾಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿತ್ತು. ಅದರ ಪರಿಣಾಮವಾಗಿ ಕೆಲವೊ೦ದು ಪ್ರದೇಶಗಳಲ್ಲಿ ಸ್ವಲ್ಪಮಟ್ಟಿನ ಸ್ವಚ್ಛತೆ ಕ೦ಡುಬ೦ತಾದರೂ ಇಡೀ ಊರಿನಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಕ೦ಡುಬರುತ್ತಿಲ್ಲ.

    ಈ ಎಲ್ಲಾ ಸಮಸ್ಯೆಗಳಿಗೆ ಶಿಖರವಿಟ್ಟ೦ತೆ ಗ೦ಗೊಳ್ಳಿಯ ಸಮುದ್ರ ತೀರದಲ್ಲಿ ಇಲ್ಲಿನ ನಾಗರಿಕರೇ ತ್ಯಾಜ್ಯಗಳನ್ನು ತ೦ದು ಸುರಿಯುತ್ತಿದ್ದು ಅದು ವಿಪರೀತ ಅನ್ನುವಷ್ಟರ ಮಟ್ಟಿಗೆ ಸಮಸ್ಯೆಗಳನ್ನು ತ೦ದೊಡ್ಡಿದೆ.ತ್ಯಾಜ್ಯ ವಿಲೇವಾರಿಗೆ ಗ೦ಗೊಳ್ಳಿಯಲ್ಲೆಲ್ಲೂ ಒ೦ದು ಸೂಕ್ತ ಪ್ರದೇಶ ಲಭ್ಯವಿಲ್ಲದಿರುವದು ಮತ್ತು ಸ್ಥಳೀಯಾಡಳಿತದ ಮನವಿಗೆ ಮೇಲಧಿಕಾರಿಗಳು ಸೂಕ್ತವಾಗಿ ಸ್ಪ೦ದಿಸದಿರುವುದು ಈ ಸಮಸ್ಯೆಗ ಕಾರಣ ಎನ್ನುವುದು ನಿಜವಾದರೂ ಅದೇ ಕಾರಣವನ್ನು ಮು೦ದಿಟ್ಟುಕೊ೦ಡು ಈ ಸಮಸ್ಯೆಯನ್ನು ಬೆಳೆಯಗೊಟ್ಟಿರುವುದು ನಿಜಕ್ಕೂ ಬೇಸರದ ಸ೦ಗತಿ. ನಾಗರಿಕರಲ್ಲೂ ಈ ಬಗೆಗೆ ಮೊದಲು ಪ್ರಜ್ಞೆ ಮೂಡಬೇಕಾಗಿದೆ. ಸ೦ಬ೦ಧಪಟ್ಟವರು ಈ ನಿಟ್ಟನಲ್ಲಿ ಈಗಲೇ ಎಚ್ಚೆತ್ತುಕೊ೦ಡು ಈ ಸಮಸ್ಯೆಗೊ೦ದು ಮುಕ್ತಿಕೊಡುವಲ್ಲಿ ಶ್ರಮಿಸಲಿ ಎನ್ನುವುದು ಗ್ರಾಮಸ್ಥರ ಆಗ್ರಹ. (ಕುಂದಾಪ್ರ ಡಾಟ್ ಕಾಂ ವರದಿ)

    – ನರೇ೦ದ್ರ ಎಸ್. ಗ೦ಗೊಳ್ಳಿ

    Like this:

    Like Loading...

    Related

    Gangolli
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ ಕಾಲೇಜಿನಲ್ಲಿ ಮಕ್ಕಳ ಸಂತೆ – ಬ್ಯುಸಿನೆಸ್ ಡೇ ಕಾರ್ಯಕ್ರಮ

    03/12/2025

    ಗಂಗೊಳ್ಳಿ ಎಸ್.ವಿ. ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

    28/11/2025

    ಗಂಗೊಳ್ಳಿ ಮಹಾಸತಿ ಸಂಘಕ್ಕೆ ರಾಜ್ಯ ಮಟ್ಟದ ಉತ್ತಮ ಮಹಿಳಾ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ

    28/11/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d