Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಗನ್ನಡ ಅಕಾಡೆಮಿ ಸ್ಥಾಪನೆಗೆ ಹತ್ಕೊತ್ತಾಯ
    ಉಡುಪಿ ಜಿಲ್ಲೆ

    ಕುಂದಗನ್ನಡ ಅಕಾಡೆಮಿ ಸ್ಥಾಪನೆಗೆ ಹತ್ಕೊತ್ತಾಯ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ.
    ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಮಂಜುನಾಥ ಭಂಡಾರಿ ಅವರು ದಿನಾಂಕ 14-02-2023ರಂದು ಕುಂದಾಪುರ ಕನ್ನಡ / ಕುಂದಗನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಹಕ್ಕೊತ್ತಾಯನವನ್ನು ಮಂಡಿಸಿದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸುನಿಲ್ ಕುಮಾರ್ ಅವರು ನೀಡಿರುವ ಉತ್ತರ ವಿಷಾದನೀಯ ಭಾಷಾವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಸಂಶೋಧಕರಾದ ಡಾ. ಗಾಯತ್ರೀ ನಾವಡ ಹಾಗೂ ಪ್ರೋ. ಎ.ವಿ. ನಾವಡ ಅವರು ಕುಂದಗನ್ನಡ ಅಕಾಡೆಮಿ ಸ್ಥಾಪನೆಯಾಗುವುದು ಭಾಷಾ ಬೆಳವಣಿಗೆ ದೃಷ್ಠಿಯಿಂದ ಸೂಕ್ತವಾದುದು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಅದರ ಪೂರ್ಣಪಾಠ ಹೀಗಿದೆ.

    Click Here

    Call us

    Click Here

    ಕನ್ನಡ ನಾಡು ಕೇವಲ ಒಂದು ಕನ್ನಡ ಭಾಷಾ ನೆಲವಲ್ಲ. ಇದು ಬಹುರೂಪಿ ಕನ್ನಡಗಳ ನೆಲೆ. ಕವಿರಾಜಮಾರ್ಗಕಾರ ಹೇಳಿದಂತೆ ಕನ್ನಡಂಗಳ್ ತಾಣ. ಇದು ಕನ್ನಡ ಸಂಸ್ಕೃತಿಯ ಅಸ್ಮಿತೆ ಮತ್ತು ಸಮೃದ್ಧತೆ. ಭಾಷಾ ಬಹುರೂಪತೆಯೇ ಕನ್ನಡದ ಅಂತಃ ಚೈತನ್ಯ, ಸಮೃದ್ಧತೆ. ಭಾಷಾ ಬಹುತ್ವವೇ ಕನ್ನಡಕ್ಕೆ ಸೋಗಸನ್ನು ಸಮಗ್ರತೆಯನ್ನು ತದ್ದಿತ್ತುದು. ಪ್ರಾದೇಶಿಕ ಹಾಗೂ ಸಮುದಾಯದ ನೆಲೆಯಲ್ಲಿ ಕಾಣಿಸುವ ಭಾಷಾಪ್ರಭೇದ ಮತ್ತು ವೈವಿದ್ಯ ಒಂದು ಭಾಷೆಯ ಜೀವಂತಿಕೆಯ ಮತ್ತು ಬೆಳವಣಿಗೆಯ ಲಕ್ಷಣ. ಈ ಬಹುರೂಪಿ ಸಾಂಸ್ಕೃತಿಕ ಚಹರೆಗಳಿಂದ ಸಂಪನ್ನಗೊಂಡ ಒಳಮಾತುಗಳು (ಉಪಭಾಷೆ ಅಲ್ಲ) ಕನ್ನಡದ ಅಭಿವ್ಯಕ್ತಿ ಶಕ್ತಿಯನ್ನು ವಿಶಿಷ್ಟವಾಗಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಆ ಮೂಲಕ ಕನ್ನಡಕ್ಕೆ ಸಾಮರ್ಥ್ಯವನ್ನು, ಸಮಗ್ರತೆಯನ್ನು ಕಟ್ಟಿಕೊಡುತ್ತದೆ. ಇದು ನಮ್ಮ ಕನ್ನಡ ಬೆಳೆಯಬೇಕಾದ ಪರಿ.

    ಕನ್ನಡದ ಸಮಗ್ರತೆಯನ್ನು ಕಟ್ಟುವುದೆಂದರೆ ಬಹುರೂಪಿ ಕನ್ನಡಗಳ ಅನನ್ಯತೆಯನ್ನು ಉಳಿಸುವುದು ಮತ್ತು ಬೆಳೆಸುವುದು. ಇವತ್ತು ಕನ್ನಡದ ಮುಂದಿರುವ ಸಾವಾಲೆಂದರೆ ಸಾವಿನಂಚಿಗೆ ಸರಿಯುತ್ತಿರುವ ಭಾಷೆಗಳನ್ನು ಅಭಿವೃದ್ಧಿಪಡಿಸುವುದು. ಆ ಮೂಲಕವೇ ಕನ್ನಡಕ್ಕೆ ನಿಜವಾದ ಚೈತನ್ಯವನ್ನು ಸಮಗ್ರತೆಯನ್ನು ತುಂಬುವುದು. ಹಾಗಾಗಿಯೇ ಕುಂದಾಪುರ ಕನ್ನಡಕ್ಕೆ ಅಕಾಡೆಮಿ ಸ್ಥಾಪನೆಯೆಂದರೆ ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಸಮಗ್ರತೆ ವಿಸ್ತಾರವನ್ನು ತರುವುದು. ಇನ್ನೊಂದು ಮಗ್ಗುಲಲ್ಲೂ ಕನ್ನಡದ ಸಮಗ್ರತೆಯನ್ನು ಮುಂದಿಟ್ಟು ಆಡುವುದಾದರೆ ಅರೆಭಾಷೆ ಅಥವಾ ಗೌಡಕನ್ನಡ ಅಕಾಡೆಮಿ ಸ್ಥಾಪನೆಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೊಸ ವಿಸ್ತಾರ ಒದಗಿದೆ. ಪ್ರಸ್ತುತ ಕರ್ನಾಟಕ ಸರಕಾರ ಪ್ರಾದೇಶಿಕ ಭಾಷೆಯಾದ ತುಳುವನ್ನು ಎರಡನೇ ರಾಜ್ಯಭಾಷೆಯಾಗಿ ಪೋಷಿಸುವ ಸನ್ನಾಹದಲ್ಲಿ ಇರುವುದು ಕನ್ನಡದ ಸಮಗ್ರತೆಗೆ ಧಕ್ಕೆ ಎಂದು ಭಾವಿಸುವುದೆ? ಈ ಭಾಷಾಲೋಕದ ವಿಸ್ತಾರದ ಅರಿವುದು ನಮಗಿರಬೇಕು.

    ಕುಂದನಾಡಿನ ಜನ ಪ್ರತಿಭಟನೆಗೆ, ಹೋರಾಟಕ್ಕೆ ಇಳಿವ ಮುನ್ನ ಸರಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು. ಕುಂದಾಪುರ ಭಾಷಾ ಅಕಾಡೆಮಿಯ ಸ್ಥಾಪನೆಗೆ ಮುಂದಾಗಬೇಕು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

    20/05/2026

    ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ

    20/05/2026

    ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    20/05/2026
    Leave A Reply Cancel Reply

    2 × 5 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.