ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರಾವಣ ಮಾಸ ಎಂಬುವುದು ಶ್ರದ್ಧಾ ಭಕ್ತಿ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಸಾಲಿಗ್ರಾಮ ದೇಗುಲ ಜಾತ್ರಾ ಸಡಗಡವಾಗಿ ರೂಪುಗೊಂಡಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ಹೇಳಿದರು.
ಅವರು ಶನಿವಾರ ಒಂದು ತಿಂಗಳುಗಳ ಕಾಲ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಾನಿಧ್ಯದಲ್ಲಿ ಪ್ರತಿ ಶನಿವಾರ ಶ್ರಾವಣ ಮಾಸ ಸಾಂಸ್ಕೃತಿಕ ಸಡಗರಕ್ಕೆ ಚಾಲನೆ ನೀಡಿ ಪುಣ್ಯ ಕ್ಷೇತ್ರಗಳಲ್ಲಿ ಸಾಲಿಗ್ರಾಮ ದೇಗುಲ ತನ್ನದೆ ಆದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ದೇಗುಲವನ್ನು ಸಂದರ್ಶಿಸುತ್ತಾರೆ ಇದಕ್ಕೆ ಶ್ರಾವಣ ಮಾಸ ತನ್ನದೆ ಆದ ವೈಶಿಷ್ಟತೆಯನ್ನು ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರಶುರಾಮ ಭಟ್ ,ಸದಸ್ಯರಾದ ಚಂದ್ರಶೇಖರ ನಾವಡ, ತಾರನಾಥ ಹೊಳ್ಳ, ಮೆನೇಜರ್ ಗಣೇಶ ಭಟ್ಟ ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶ್ರೀದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಯಕ್ಷಗಾನ ತಾಳಮದ್ದಲೆ ಮೀನಾಕ್ಷಿ ಕಲ್ಯಾಣ ಜರಗಿತು.ದೇಗುಲದಲ್ಲಿ ಸಾವಿರಾರು ಭಕ್ತರು ಶ್ರೀ ಗುರುನರಸಿಂಹ ದೇವರ ದರ್ಶನ ವಿವಿಧ ಪೂಜಾ ಕಾರ್ಯದಲ್ಲಿ ಭಾಗಿಯಾದರು.











