Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಎಸ್‌ಐಆರ್‌ ಪ್ರಕಟ – ಜಿಲ್ಲೆಯ 97,706 ಮಂದಿಗೆ ನೋಟೀಸು ಜಾರಿ: ಜಿಲ್ಲಾಧಿಕಾರಿ
    ಉಡುಪಿ ಜಿಲ್ಲೆ

    ಎಸ್‌ಐಆರ್‌ ಪ್ರಕಟ – ಜಿಲ್ಲೆಯ 97,706 ಮಂದಿಗೆ ನೋಟೀಸು ಜಾರಿ: ಜಿಲ್ಲಾಧಿಕಾರಿ

    Updated:25/08/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ:
    ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆದ ವಿಶ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರ ಮೊದಲಿದ್ದ (16.06.26ಕ್ಕೆ ಮೊದಲು) ಒಟ್ಟು 10,63,876 ಮತದಾರರ ಪೈಕಿ 10,00,545 ಮಂದಿ ಸ್ಥಾನ ಉಳಿಸಿಕೊ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

    Click Here

    Call us

    Click Here

    ಅವರು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ವಿವಿಧ ಕಾರಣಗಳಿಗಾಗಿ ಗೈರು, ಸ್ಥಳಾಂತರ, ಮೃತರು, ನಕಲಿ, ಇತರ (ಎಎಸ್‌ಡಿಡಿಒ) – ಪಟ್ಟಿಯಲ್ಲಿದ್ದ ಒಟ್ಟು  63,331 ಮಂದಿ ಹೆಸರು ಇದರಲ್ಲಿ ಸೇರ್ಪಡೆಗೊಂಡಿಲ್ಲ ಎಂದು ಅವರು ವಿವರಿಸಿದರು.

    ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಪೈಕಿ ಒಟ್ಟು 97,706 ಮಂದಿಗೆ ನೋಟೀಸುಗಳನ್ನು ನೀಡಲಾಗುತ್ತಿದೆ. ಇವರಲ್ಲಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕೇಜ್ ಆಗದಿರುವ – ನೋ ಮ್ಯಾಪಿಂಗ್- 31,903 ಮಂದಿ ಹಾಗೂ ‘ಲಾಜಿಕಲ್‌ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಅಡಿಯಲ್ಲಿ ಗುರುತಿಸಲಾದ 65,803 ಮಂದಿ ಸೇರಿದ್ದಾರೆ ಎಂದು ಅವರು ವಿವರಿಸಿದರು.

    ಚುನಾವಣಾ ಆಯೋಗದಿಂದ ನೋಟೀಸು ಜಾರಿಗೊಳ್ಳಲಿರುವ ಈ ಎಲ್ಲಾ 97,706 ಮಂದಿ ಇಂದಿನಿಂದ ಆ.31ರವರೆಗೆ ಆಯಾ ಬೂತ್‌ಗಳ ಬಿಎಲ್‌ಒಗಳು ಮನೆಗೆ ಬಂದು ನೋಟೀಸು ನೀಡಲಿದ್ದಾರೆ. ಅವರು ಆಯೋಗ ನಿಗದಿಪಡಿಸಿದ ಒಟ್ಟು 11 ದಾಖಲೆಗಳಲ್ಲಿ ಯಾವುದಾದರೂ ಮೂರು ದಾಖಲೆಗಳನ್ನು ವಿಚಾರಣೆ ನಡೆಸುವ ಇಆರ್‌ಒ, ಎಇಆರ್‌ಒಗಳ ಎದುರು ನಿಗದಿ ಪಡಿಸಿದ ದಿನದಂದು ಹಾಜರಾಗಿ ಪ್ರಸ್ತುತ ಪಡಿಸಬೇಕಾಗುತ್ತದೆ ಎಂದು ಸ್ವರೂಪ ಟಿ.ಕೆ. ತಿಳಿಸಿದರು.

    ಬಿಎಲ್‌ಒಗಳು ನೀಡುವ ನೋಟೀಸಿನಲ್ಲಿಯೇ ನೀಡಬೇಕಾದ ದಾಖಲೆಗಳ ಕುರಿತು ಮಾಹಿತಿ ಇರುತ್ತದೆ. ಉಡುಪಿ ಜಿಲ್ಲೆಯ ಮಟ್ಟಿಗೆ ತಾರ್ಕಿಕ ವ್ಯತ್ಯಾಸದಲ್ಲಿ ಶೇ.90ರಷ್ಟು ಮಂದಿಯ ಹೆಸರು, ಸ್ಪೆಲ್ಲಿಂಗ್‌, ಪ್ರಾಯದಲ್ಲಿ ವ್ಯತ್ಯಾಸ ಕಂಡುಬಂದಿರುವುದೇ ನೋಟೀಸು ನೀಡಲು ಕಾರಣವಾಗಿದೆ ಎಂದರು.

    Click here

    Click here

    Click here

    Call us

    Call us

    ಮನೆ ಮನೆಗೆ ಗಣತಿ ನಮೂನೆಯನ್ನು ತಲುಪಿಸಿದ ಬಳಿಕ ಅವರಿಂದ ಪಡೆದ ಫಾರ್ಮ್‌ಗಳನ್ನು ಡಿಜಿಟಲೈಸ್ ಮಾಡಿ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಇಂದಿನಿಂದ ಸೆಪ್ಟೆಂಬ‌ರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಮತ್ತು ವಿಲೇವಾರಿ ಅಕ್ಟೋಬ‌ರ್ 22ರವರೆಗೆ ನಡೆಯಲಿದೆ. ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

    ಜಿಲ್ಲೆಯಲ್ಲಿ ಒಟ್ಟು 63,331ಮಂದಿ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ಬೈಂದೂರಿನಲ್ಲಿ 14,280, ಕುಂದಾಪುರದಲ್ಲಿ 11,634, ಉಡುಪಿಯಲ್ಲಿ 17,726, ಕಾಪುವಿನಲ್ಲಿ 10,034 ಹಾಗೂ ಕಾರ್ಕಳದಲ್ಲಿ 9,657 ಮಂದಿಯನ್ನು ಗುರುತಿಸಲಾಗಿದೆ. 63,331 ಮಂದಿಯಲ್ಲಿ 4,145 ಮಂದಿ ಗೈರಾಗಿದ್ದರೆ, 29,36ಮಂದಿ ಸ್ಥಳಾಂತರಗೊಂಡಿದ್ದಾರೆ. 21,262 ಮಂದಿ ಮೃತರಾಗಿದ್ದರೆ, 8374 ಮಂದಿ ದ್ವಿಪ್ರತಿ ಹೊಂದಿದ್ದರು. ಉಳಿದ 189 ಮಂದಿ ಇತರ ವಿಭಾಗದಲ್ಲಿದ್ದಾರೆ. ಇವರು ಎಸ್‌ಐಆರ್‌ನ್ನು ನಿರಾಕರಿಸಿ ತಮ್ಮ ಮಾಹಿತಿಯನ್ನು ನೀಡದವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    5914 ಯುವ ಮತದಾರರು:
    ಇಂದಿನ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 5914 ಮಂದಿ ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. 2026ರ ಅಕ್ಟೋಬರ್ 1ನ್ನು ಆರ್ಹತಾ ದಿನವಾಗಿ ಪರಿಗಣಿಸಿ ಈ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವವರನ್ನು ಫಾರ್ಮ್-6ರ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ ಬೈಂದೂರಿನಿಂದ 1112, ಕುಂದಾಪುರದಿಂದ 991, ಉಡುಪಿಯಿಂದ 1103, ಕಾಪುವಿನಿಂದ 1272 ಹಾಗೂ ಕಾರ್ಕಳದಿಂದ 1436 ಮಂದಿ ಸೇರ್ಪಡೆಗೊಂಡಿದ್ದಾರೆ.

    132 ಹೆಚ್ಚುವರಿ ಮತಗಟ್ಟೆ ಸೇರ್ಪಡೆ:
    ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 1200ಕ್ಕಿಂತ ಅಧಿಕ ಮತದಾರರಿರುವ ಮತದಾನ ಕೇಂದ್ರಗಳ ಪುನರ್‌ವಿಂಗಡಣೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 132 ಹೊಸ ಮತದಾನ ಕೇಂದ್ರಗಳನ್ನು ಸೃಷ್ಟಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹಿಂದಿದ್ದ 1112 ಮತಗಟ್ಟೆಗಳ ಸಂಖ್ಯೆ ಈಗ 1244ಕ್ಕೇರಿದೆ. ಬೈಂದೂರಿನಲ್ಲಿ 48, ಕುಂದಾಪುರ 16- ಉಡುಪಿ 21, ಕಾಪು 22, ಕಾರ್ಕಳದಲ್ಲಿ 25 ಹೆಚ್ಚುವರಿ ಮತಗಟ್ಟೆಗಳು ಸೇರ್ಪಡೆಗೊಳ್ಳಲಿದೆ ಎಂದು ಡಿಸಿ ತಿಳಿಸಿದರು.

    ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರ ಹಾಗೂ ಮತದಾನ ಕೇಂದ್ರದ ವಿವರಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಕರಡು ಮತದಾರರ ಪಟ್ಟಿಯು ಸಂಬಂಧಪಟ್ಟ ಬಿಎಲ್‌ಒ, ಇಆರ್‌ಒ ಕಚೇರಿ, ತಾಲೂಕು ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಗಳ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

    ಪತ್ರಿಕಾಗೋಷ್ಠಿಯಲ್ಲಿ ಎಡಿಸಿ ಅಬೀದ್ ಗದ್ಯಾಳ್‌ ಉಪಸ್ಥಿತರಿದ್ದರು.

    ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಆಯೋಗದಿಂದ ನೋಟೀಸು ಪಡೆದಿರುವವರ ವಿಧಾನಸಭಾವಾರು ವಿವರ ಹೀಗಿದೆ.

    ಕ್ಷೇತ್ರ ನೋ ಮ್ಯಾಪಿಂಗ್ ತಾರ್ಕಿಕ ವ್ಯತ್ಯಾಸ ಒಟ್ಟು

    ಬೈಂದೂರು 3891 11275 15166
    ಕುಂದಾಪುರ 4233 06945 11178
    ಉಡುಪಿ 13255 23499 36754
    ಕಾಪು 5971 14850 20821
    ಕಾರ್ಕಳ 4553 09234 13787
    ಜಿಲ್ಲೆಯಲ್ಲಿ 31903 65803 97706

    ವಿಚಾರಣೆಗೆ ಹೆಚ್ಚುವರಿ ಎಇಆರ್‌ಗಳ ನೇಮಕ
    ಎನ್ಯುಮರೇಷನ್ ಹಂತದಲ್ಲಿ ಮತದಾರರ ವಿವರಗಳು ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕೇಜ್ ಆಗಿರುವ ಪ್ರಕರಣಗಳು ಹಾಗೂ ಲಿಂಕೇಜ್ ಆದ ಬಳಿಕ ಪರಿಶೀಲನೆ ಸಂದರ್ಭದಲ್ಲಿ ಕಂಡಬರುವ ತಾರ್ಕಿಕ ವ್ಯತ್ಯಾಸಗಳ ಪ್ರಕರಣಗಳನ್ನು ಗುರುತಿಸಿ ಸಂಬಂಧಪಟ್ಟ ಇಆರ್‌ಒಗಳು ನಿಯಮಾನುಸಾರ ನೋಟೀಸು ಜಾರಿಗೊಳಿಸುವರು. ಕೆಲವು ಸಂದರ್ಭಗಳಲ್ಲಿ ಇಆರ್‌ಒಗಳು ಸುವೋಮೋಟೊ ಆಗಿಯೂ ನೋಟೀಸು ಜಾರಿಗೊಳಿಸಲು ಅವಕಾಶಗಳಿವೆ. ಆಗ ಮತದಾರರಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಹಾಗೂ ಅತ್ಯ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ತಿಳಿಸಿದರು.

    ಇದಕ್ಕಾಗಿ ಪರಿಶೀಲನೆ ಮತ್ತು ವಿಚಾರಣೆ ವೇಳೆ ಮತದಾರರಿಗೆ ಅನುಕೂಲವಾಗಲು ಹೆಚ್ಚುವರಿಯಾಗಿ 120 ಮಂದಿ ಎಇಆರ್‌ಒ ಹಾಗೂ ಹೆಚ್ಚುವರಿ ಎಇಆರ್‌ಒಗಳನ್ನು ನೇಮಿಸಲಾಗಿದೆ. ಅವರು ಆಯಾ ಗ್ರಾಪಂ, ನಗರಪ್ರದೇಶ ವಾರ್ಡ್‌ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸುವರು ಎಂದೂ ಅವರು ಹೇಳಿದರು.

    ಈ ವಿಷಯದಲ್ಲಿ ಮತದಾರರಿಗೆ ಬಿಎಲ್‌ಒಗಳು ಅಗತ್ಯ ಸಹಕಾರ, ಮಾರ್ಗದರ್ಶನ ನೀಡುವರು. ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಒಗಳು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳು ನಿಯೋಜಿಸುವ ಬಿಎಲ್‌ಒಗಳು ಸಹ ಅವರಿಗೆ ಬೇಕಾದ ಮಾರ್ಗದಶನ ನೀಡಬಹುದು.

    “ವಿಚಾರಣೆ ವೇಳೆ ಆಯಾ ಮತದಾರ ಖುದ್ದಾಗಿ ಇಆರ್‌ಒ ಮುಂದೆ ಹಾಜರಾಗಿ ದಾಖಲೆ ಮಂಡಿಸಬೇಕು. ಅವರ ಬದಲಿಯಾಗಿ ಬೇರೆಯವರಿಗೆ ವಿಷಯ ಮಂಡಿಸಲು ಅವಕಾಶವಿಲ್ಲ. ಜೊತೆಗೆ ಯಾರನ್ನಾದರೂ ಕರೆತರಲು ಅವಕಾಶವಿದೆ” – ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ತಂದೆ-ತಾಯಿಯನ್ನು ಕೊಲೆಗೈದ ಪುತ್ರ

    24/08/2026

    ಉಡುಪಿ: ಕಲಾವಿದರಿಂದ ಅರ್ಜಿ ಆಹ್ವಾನ

    22/08/2026

    ಎಂ.ಜಿ.ಎಂ ಸಂಧ್ಯಾ ಕಾಲೇಜು: ವಾಣಿಜ್ಯ ಮತ್ತು ನಿರ್ವಹಣಾ ಕ್ಲಬ್ ಉದ್ಘಾಟನೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

    22/08/2026
    Leave A Reply Cancel Reply

    eighteen − twelve =

    Call us

    Click Here

    Call us

    Call us

    Call us
    Highest Viewed Recently
    • ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ನೂತನ ಎನ್‌ಸಿಸಿ ಕೆಡೆಟ್‌ಗಳ ಪರಿಚಯ ಕಾರ್ಯಕ್ರಮ
    • ಯೋಗಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಪಕ್ಷಪಾತವಿಲ್ಲ, ಕಾಳಜಿಯಷ್ಟೇ ಇದೆ: ಶ್ರೀ ರಾಘವೇಶ್ವರ
    • ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಿ: ಡಾ. ಶುಭಕರಾಚಾರಿ 
    • ಜೆಸಿ​ ರಾಜು ಮೊಗವೀರ ಅವರಿಗೆ ಪ್ರತಿಷ್ಠಿತ ‘ಸಾಧನಾಶ್ರೀʼ ಪ್ರಶಸ್ತಿ ಪ್ರದಾನ
    • ಎಸ್‌ಐಆರ್‌ ಪ್ರಕಟ – ಜಿಲ್ಲೆಯ 97,706 ಮಂದಿಗೆ ನೋಟೀಸು ಜಾರಿ: ಜಿಲ್ಲಾಧಿಕಾರಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.