ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರಾದ ಡಾ. ಎ. ಎಸ್. ಭಂಡಾರ್ಕರ್ ಅವರ ಪುತ್ರಿ ಮಹಾಮಾಯಾ ಭಂಡಾರ್ಕರ್ ಅವರು ತಮ್ಮ ತಾಯಿ ದಿವಂಗತ ಸುಲೋಚನಾಬಾಯಿ ಭಂಡಾರ್ಕರ್ ಅವರ ಜನ್ಮದಿನದ ಸ್ಮರಣಾರ್ಥ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಿಶೇಷ ಭೋಜನ ಕೂಟವನ್ನು ಆಯೋಜಿಸಿದರು.

ಸುಲೋಚನಾಬಾಯಿ ಭಂಡಾರ್ಕರ್ ಅವರ ಸ್ಮರಣೆ ಹಾಗೂ ಗೌರವಾರ್ಥವಾಗಿ ಆಯೋಜಿಸಲಾದ ಈ ಭೋಜನ ಕೂಟವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಈ ಆತ್ಮೀಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು.
ಮಹಾಮಾಯಾ ಭಂಡಾರ್ಕರ್ ಅವರ ಉದಾರ ಮನೋಭಾವ ಹಾಗೂ ಸಂಸ್ಥೆಯ ಮೇಲಿನ ನಿರಂತರ ಕಾಳಜಿ ಮತ್ತು ಬೆಂಬಲಕ್ಕೆ ಭಂಡಾರ್ಕಾರ್ಸ್ ಕಾಲೇಜು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.











