ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಎಂಜಿಎಂ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಭಿಲಾಷ ಎ. 95.12% ಅಂಕಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಭಿಲಾಷ್ ಬೈಂದೂರು ತಗ್ಗರ್ಸೆ ನಿವಾಸಿ ಮಹಾಬಲೇಶ್ವರ ಹಾಗೂ ದಿ. ಜಯುಶ್ರೀ ಅವರ ಪುತ್ರ. ಉಡುಪಿಯ ಎಐಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ್ ಅವರ ಅಳಿಯ. ಅಭಿಲಾಷ್ ಅವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಕುಟುಂಬಿಕರು ಅಭಿನಂದಿಸಿದ್ದಾರೆ.