ತ್ರಿಮಧುರ – ಗಾನ – ನೃತ್ಯ – ಅಭಿನಯದ ಸಮ್ಮಿಲನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಿಮಧುರ – ಗಾನ – ನೃತ್ಯ – ಅಭಿನಯದ ಸಮ್ಮಿಲನ – ಸಾಧನ ಕಲಾ ಸಂಗಮ ರಿ, ಕುಂದಾಪುರ ಪ್ರಸ್ತುತಪಡಿಸಿದ ಈ ಕಾರ್ಯಕ್ರಮವು ರೋ| ಲಕ್ಷ್ಮಿ ನರಸಿಂಹ ಕಲಾಮಂದಿರ, ಬೋರ್ಡ ಹ್ಯಸ್ಕೂಲ್, ಕುಂದಾಪುರದಲ್ಲಿ ನಡೆಯಿತು.

Call us

Click Here

ಈ ಕಾರ್ಯಕ್ರಮವನ್ನು ೨೦೧೫- ೨೦೧೬ರ ಸಾಲಿನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಹಿನ್ನೆಲೆ ಗಾಯಕಿ ಕೆ. ಎಸ್. ಸುರೇಖಾ ಅವರು ಉದ್ಘಾಟಿಸಿ ಮಾತನಾಡಿ ಲಲಿತ ಕಲೆಗಳ ಮೂಲಕ ಯುವ ಪ್ರತಿಭೆಗಳಿಗೆ ಬೆಳಗಲು ಅವಕಾಶ ಮಾಡಿಕೊಡುತ್ತಿರುವ ಸಾಧನ ಕಲಾ ಸಂಗಮವನ್ನು ಅಭಿನಂದಿಸಿದರು. ನಿರಂತರ ಪ್ರಯತ್ನದಿಂದಷ್ಟೆ ಕಲೆಯಲ್ಲಿ ದೊಡ್ಡ ಸಾಧನೆ ಮಾಡಬಹುದು, ಅಂತಃವರಿಗೆ ಮಾರ್ಗದರ್ಶಕರಾಗಲು ಅನುದಿನವು ನಾವಿದ್ದವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿದ್ವಾನ್ ಕೆ. ವಿ. ರಮಣ, ಕುಂದಗನ್ನಡದ ನಟರಾದ ಓಂ ಗುರು, ವಿಜಯ ಹಾಗು ಕ್ಷೇತ್ರ ಸಂಪ್ನಮೂಲ ವ್ಯಕ್ತಿಗಳಾದ ಸದಾನಂದ ಬೈಂದೂರು ಉಪಸ್ಥಿತರಿದ್ದರು. ಸಂಸ್ಥೆಯ ರೂವಾರಿ ನಾರಾಯಣ ಐತಾಳ್ ಸ್ವಾಗತಿಸಿದರು, ಸುಧೀಂದ್ರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಧನದ ವಿದ್ಯಾರ್ಥಿಗಳಿಂದ ಭರತನಾಟ್ಯ, ಸುಮಧುರ ಸಂಗೀತ ಲಹರಿ ಹಾಗು ಮಕ್ಕಳ ನಗೆ ನಾಟಕ “ಅಂಧೇರ್ ನಗರ್ – ಚೌಪಟ್ ರಾಜ” ಮೂಡಿ ಬಂತು.

Leave a Reply