ಹೊಸದಿಲ್ಲಿ: ಮುಂಬಯಿ ದಾಳಿ ಸಂಚುಕೋರ ಝಕಿರ್ ರೆಹಮಾನ್ ಲಖ್ವಿ ಬಿಡುಗಡೆಯನ್ನು ಖಂಡಿಸಿರುವ ಭಾರತ, ಈತನ ಬಿಡುಗಡೆ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ.
ಲಖ್ವಿ ವಿರುದ್ಧ ನಾವು ಸಾಕಷ್ಟು ಪುರಾವೆಗಳನ್ನು ಪಾಕ್ಗೆ ನೀಡಿದ್ದೇವೆ. ಆದರೆ ಅವುಗಳನ್ನು ಕೋರ್ಟ್ ಮುಂದೆ ಆ ದೇಶ ಇಟ್ಟಿಲ್ಲ. ಹೀಗಾಗಿಯೇ ಆ ಉಗ್ರನ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತು. ಲಖ್ವಿಯನ್ನು ಶಿಕ್ಷಿಸಲು ನಾವು ನೀಡಿದ್ದ ಸಾಕ್ಷ್ಯಗಳನ್ನು ಪಾಕಿಸ್ತಾನವು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಆಗ್ರಹಿಸಿದ್ದಾರೆ.