ಕುಂದಾಪುರ: ಹಸೆಮಣೆ ಏರಿದ ಕಿರಿಕ್ ಪಾರ್ಟಿ ನಿರ್ದೇಶಕ ರಿಶಬ್ ಶೆಟ್ಟಿ

Call us

Call us

Call us

ನಟ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ ಭಾಗಿ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಕ, ಕುಂದಾಪುರ ಕೆರಾಡಿಯ ರಿಶಬ್ ಶೆಟ್ಟಿ ಅವರ ವಿವಾಹವು ಮಂದರ್ತಿ ಮೂಲದ ಪ್ರಗತಿ ಶೆಟ್ಟಿ ಅವರೊಂದಿಗೆ ಕೋಟೇಶ್ವರ ಸಹನಾ ಕನ್ವೇನ್ಯನ್ ಹಾಲ್‌ನಲ್ಲಿ ನಡೆಯಿತು.

ಹಿಂದೂ ಸಂಪ್ರದಾಯದಂತೆ ಈರ್ವರ ಕುಟುಂಬಿಕರು ಸ್ನೇಹಿತರು ಹಾಗೂ ಕನ್ನಡ ಚತ್ರರಂಗದ ಹಲವು ನಟರುಗಳ ಸಮ್ಮುಖದಲ್ಲಿ ರಿಶಬ್ ಶೆಟ್ಟಿ ಪ್ರಗತಿ ಶೆಟ್ಟಿ ಅವರನ್ನು ವರಿಸಿದರು. ನಟ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿ, ಯಜ್ಞ ಶೆಟ್ಟಿ, ಮೇಗನಾ ಗಾಂವ್ಕರ್, ರಶ್ಮಿಕಾ ಮನಾರ್, ಸಂಯುಕ್ತಾ ಹೆಗ್ಡೆ ಸೇರಿದಂತೆ ಹಲವು ನಟರು ವಿವಾಹಕ್ಕೆ ಸಾಕ್ಷಿಯಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಂದರ್ತಿ ಮೂಲದ ಪ್ರಗತಿ ಶೆಟ್ಟಿ ಶಿವಮೊಗ್ಗದ್ದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಬೆಂಗಳೂರಿನ ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರೊಂದಿಗೆ ಉಳಿದವರು ಕಂಡಂತೆ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಶಬ್ ಶೆಟ್ಟಿ ಅವರು ಆ ಬಳಿ ರಿಕ್ಕಿ ಎಂಬ ಸಿನೆಮಾ ನಿರ್ದೇಶಿಸಿದ್ದರು. ಕಿರಿಕ್ ಪಾರ್ಟಿ ಸಿನೆಮಾ ಕನ್ನಡದ ಬಾಕ್ಸ್ ಆಫೀಸ್‌ನಲ್ಲಿ ಬಾರಿ ಸುದ್ದಿಮಾಡಿತ್ತು.


Click here

Click here

Click here

Click Here

Call us

Call us

Leave a Reply