ಕುಂದಾಪುರ: ಭಾರತೀಯ ಜೇಸಿಸ್ 100ನೇ ವರ್ಷದ ಸಂಭ್ರಮಾಚರಣೆ ಯಲ್ಲಿ ಪ್ರಸಕ್ತ ವರ್ಷದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಸ್ವತ್ಛತಾ ಆಂದೋಲನ ಸಮಾಧಾನ್ ಯೋಜನೆಗೆ ಕುಂದಾಪುರ ಜೇಸಿಐ ವತಿಯಿಂದ ಮೂರು ಶೌಚಾಲಯಗಳನ್ನು ಹೆಬ್ರಿ ಹಾಗೂ ಕೋಣಿಯಲ್ಲಿ ಕೊಡುಗೆಯಾಗಿ ನೀಡಿದ್ದಾರೆ.
ಫಲಾನುಭವಿಗಳಿಗೆ ರಾಷ್ಟ್ರೀಯ ಉಪಾಧ್ಯಕ್ಷ ಎಸ್. ಅರುಣ್ ಅವರು ಹಸ್ತಾಂತರಿಸಿದರು. ವಲಯ 15ರ ಅದ್ಯಕ್ಷ ಪಿ.ಎಸ್. ಕೃಷ್ಣಮೋಹನ್ ಮಾತನಾಡಿ ವಲಯ 15 ರಲ್ಲಿ 100 ಶೌಚಾಲಯಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಶೀಘ್ರದಲ್ಲಿಯೇ ಮುಟ್ಟಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒನ್ ಲೋಮ್-ಒನ್ ಸ್ಕೂಲ್ ಇದರ ನಿರ್ದೇಶಕ ಶ್ರೀಧರ್ ಪಿ.ಎಸ್., ವಲಯ ಉಪಾಧ್ಯಕ್ಷ ಸುಹಾನ್, ವಲಯ ನಿರ್ದೇ ಶಕರಾದ ಸಂತೋಷ್ ಜಿ., ನಾಗೇಂದ್ರ ಪೈ, ಸುಚಿತ್ ಪಿ.ಕೆ., ಮಂಗೇಶ್ ಶ್ಯಾನುಭಾಗ್, ರತ್ನಾಕರ, ಪೂರ್ವ ವಲಯ ಅಧಿಕಾರಿ ಗೋಪಾಲ ಪೂಜಾರಿ, ಕಾರ್ಯಕ್ರಮದ ಸಂಯೋಜಕ ರವೀಶ್ ಕೊರವಡಿ, ಜೇಸಿರೆಟ್ ಅಧ್ಯಕ್ಷೆ ರೂಪಾ ಸಿ. ಇಂಬಾಳಿ, ಕಾರ್ಯದರ್ಶಿ ಅವಿನಾಶ್ ರೈ ಉಪಸ್ಥಿತರಿದ್ದರು.