Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಿಮ್ಮ ಪ್ರಯಾಣ ಸುಖಕರವಾಗಿರಲಿ
    ಪ್ರವಾಸ

    ನಿಮ್ಮ ಪ್ರಯಾಣ ಸುಖಕರವಾಗಿರಲಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Travellingಪ್ರಯಾಣ ಮಾಡುವುದು ಎಲ್ಲರಿಗೂ ಪ್ರಿಯವಾದ ಸಂಗತಿ. ವಾರವಿಡೀ ಕೆಲಸದ ಒತ್ತಡದಿಂದ ದೂರವಿರಬೇಕು, ಕೆಲಸಗಳಿಂದ ವಿರಾಮ ಪಡೆಯಬೇಕು, ಬದಲಾವಣೆ ಬೇಕೆನಿಸಿದಾಗ ಎಲ್ಲಾದರೂ ಪ್ರಯಾಣ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಬೇಕು ಎನಿಸುತ್ತದೆ.

    Click Here

    Call us

    Click Here

    ಪ್ರಯಾಣ ಹೋಗುವುದೆಂದರೆ ಸೂಕ್ತ ತಯಾರಿ, ಹಣ, ಸಮಯದ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ವಿಪರೀತ ಹಣ ಖರ್ಚಾಗಬಹುದು. ಪ್ರಯಾಣ ಗೊಂದಲಕ್ಕೀಡಾಗಬಹುದು. ಹಿತಮಿತ ಬಜೆಟ್‌ನಲ್ಲಿ ಒಳ್ಳೆಯ ಸ್ಥಳದಲ್ಲಿ ಸುತ್ತಾಡಿಕೊಂಡು ಬಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣವನ್ನು ಹೇಗೆ ಯೋಜನೆ ಮಾಡಬಹುದು ಎಂಬುದಕ್ಕೆ ಇಲ್ಲಿವೆ ಟಿಪ್ಸ್.

    ಆನ್‌ಲೈನ್ ಬುಕ್ಕಿಂಗ್: ಎಲ್ಲಿಗೆ ಪ್ರವಾಸ ಹೋಗುವುದು, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್ ಬುಕ್ ಮಾಡುವ ಬದಲು ಇಂಟರ್ನೆಟ್‌ನಲ್ಲಿ ಆನ್‌ಲೈನ್ ಬುಕ್ ಮಾಡಿದರೆ ಟಿಕೆಟ್ ಬೆಲೆ ಅಗ್ಗವಾಗುತ್ತದೆ. ಪ್ರವಾಸ ಹೋಗುವುದಕ್ಕೆ 20-30 ದಿನ ಮೊದಲೇ ಬುಕ್ ಮಾಡಿದರೆ ಉತ್ತಮ.

    ವಸತಿ : ಪ್ರವಾಸ ಹೋದಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯ ನೆಲೆ ಸಿಗಬೇಕಾದುದು ಅಗತ್ಯ. ಸರಿಯಾದ ಹೊಟೇಲ್‌ನ್ನು ಪರಿಶೀಲಿಸಿ ಡಿಸ್ಕೌಂಟ್ ಲೆಕ್ಕಾಚಾರ ಹಾಕಿ ಹೊಟೇಲನ್ನು ಬುಕ್ ಮಾಡಿಕೊಳ್ಳುವುದು ಒಳ್ಳೆಯದು.

    ಆಫ್ ಸೀಸನ್ ಉತ್ತಮ: ರಜಾ ದಿನಗಳಲ್ಲಿ, ಹಬ್ಬಹರಿದಿನಗಳ ಸಮಯದಲ್ಲಿ ಪ್ರವಾಸಕ್ಕೆ ಹೋಗುವುದಕ್ಕಿಂತ ಹಣ ಉಳಿತಾಯಕ್ಕೆ ಇತರ ದಿನಗಳಲ್ಲಿ ಹೋಗುವುದು ಒಳಿತು. ಇದರಿಂದ ಬಸ್ಸು, ರೈಲು, ವಿಮಾನ ಟಿಕೆಟ್ ದರದಲ್ಲಿ ಕಡಿತವಾಗುವುದಲ್ಲದೆ ನಾವು ಹೋಗುವ ಸ್ಥಳವೂ ಜನಜಂಗುಳಿಯಿಂದ ತುಂಬಿರುವುದಿಲ್ಲ. ನಮಗೆ ಬೇಕಾದಂತೆ ಹೋಗಿ ಆರಾಮವಾಗಿ ನೋಡಿಕೊಂಡು ಬರಬಹುದು. ಖರ್ಚು ಕಡಿಮೆಯಾಗುತ್ತದೆ.

    Click here

    Click here

    Click here

    Call us

    Call us

    ಆಹಾರ: ಪ್ರವಾಸ ಹೋದಾಗ ಆಹಾರದ ಕಡೆ ಗಮನ ಹರಿಸುವುದು ಅಗತ್ಯ. ಪ್ರಮುಖ ಪ್ರವಾಸಿ ಸ್ಥಳದ ಸುತ್ತಮುತ್ತ ಇರುವ ಹೊಟೇಲ್‌ಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತದೆ. ಸಾಧ್ಯವಾದಷ್ಟು ಕೆಲವು ಆಹಾರ ತಿನಿಸುಗಳನ್ನು ಮನೆಯಿಂದ ಕಟ್ಟಿಕೊಂಡು ಹೋಗುವುದು ಒಳಿತು.

    ಸ್ಥಳ ವೀಕ್ಷಣೆ: ಇರುವ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಪ್ರವಾಸಕ್ಕೆ ತೆರಳಿದ ಜಾಗವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಸಂಗ್ರಹಿಸುವುದು ಮುಖ್ಯ. ಕೆಲವು ಸ್ಥಳಕ್ಕೆ ಉಚಿತ ಪಾಸ್‌ಗಳಿವೆಯೇ ಎಂದು ತಿಳಿದುಕೊಳ್ಳಬೇಕು.

    ಸಾರಿಗೆ: ಪ್ರವಾಸ ಹೋದಲ್ಲಿ ಅಲ್ಲಿನ ಸುತ್ತಮುತ್ತಲ ಸ್ಥಳ ವೀಕ್ಷಿಸಲು ಟ್ಯಾಕ್ಸಿ, ಆಟೋ ಹಿಡಿಯುವ ಬದಲು ಸ್ಥಳೀಯ ಬಸ್ಸು, ರೈಲನ್ನು ಹತ್ತಬಹುದು. ಇದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಸುರಕ್ಷತೆಯೂ ಹೆಚ್ಚು.

    ಶಾಪಿಂಗ್: ಪ್ರವಾಸಿ ಸ್ಥಳಗಳ ಸುತ್ತಮುತ್ತ ಆದಷ್ಟು ಕಡಿಮೆ ಶಾಪಿಂಗ್ ಮಾಡುವುದು ಉತ್ತಮ. ಇಂತಹ ಸ್ಥಳಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟಾಗಿರುತ್ತದೆ.

    ಮೊಬೈಲ್ ಬಳಕೆ: ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದರೆ ಮೊಬೈಲ್‌ನ ಕರೆನ್ಸಿ ಚಾರ್ಜ್ ದುಪ್ಪಟ್ಟಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಸಿಮ್ ಬಳಸಬಹುದು. ಬೇರೆ ದೇಶಕ್ಕೆ ಹೋಗುವುದಿದ್ದರೆ ಅಂತಾರಾಷ್ಟ್ರೀಯ ಸಿಮ್ ಬಳಸಬಹುದು.

    ಮಕ್ಕಳ ಸುರಕ್ಷೆ: ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದಿದ್ದರೆ ಅವರ ಆಹಾರ, ಆಟಿಕೆ, ಬಟ್ಟೆಬರೆಗಳನ್ನು ಮನೆಯಿಂದ ಹೋಗುವಾಗ ತೆಗೆದುಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಹೋದಲ್ಲಿ ತೆಗೆದುಕೊಂಡರೆ ದುಬಾರಿಯೆನಿಸುತ್ತದೆ.

    ಕಡಿಮೆ ಲಗೇಜು: ಪ್ರಯಾಣಕ್ಕೆ ತೆರಳುವ ಸಂದರ್ಭದಲ್ಲಿ ಆದಷ್ಟು ಕಡಿಮೆ ಬಟ್ಟೆಬರೆಗಳನ್ನು, ವಸ್ತುಗಳನ್ನು ತೆಗೆದುಕೊಂಡು ಹೋದರೆ ನಮಗೆ ಆರಾಮವೆನಿಸುತ್ತದೆ. ಆದರೆ ಅಗತ್ಯ ವಸ್ತುಗಳನ್ನು ಮರೆಯಬಾರದು. ಸೋಪು, ಔಷಧಿ, ಕೆಲವು ಆಹಾರ ಪದಾರ್ಥಗಳು, ಪೆನ್ನು, ಪುಸ್ತಕ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು, ಗುರುತಿನ ಚೀಟಿ, ಅಗತ್ಯ ದೂರವಾಣಿ ಸಂಖ್ಯೆಗಳು ಇವೆಲ್ಲ ನಮ್ಮ ಜೊತೆಗಿದ್ದರೆ ಪ್ರಯಾಣ ಸುಖವಾಗಿರುತ್ತದೆ.

    * ಸುಮನಾ ಉಪಾಧ್ಯಾಯ

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸಾಲಿಗ್ರಾಮ: ಕಾಂಡ್ಲಾ ವನದ ನಡುವೆ ಕಯಾಕಿಂಗ್ ಸಾಹಸ ಯಾನ

    13/12/2021

    ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’

    18/04/2015
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.