Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರೇಖಾ ಬನ್ನಾಡಿ ಅವರ ‘ಕಾರಂತರ ದುಡಿಮೆಯ ಪ್ರಪಂಚ’ – ವಿಮರ್ಶಾ ಸಂಕಲನ ಬಿಡುಗಡೆ
    ಕುಂದಾಪ್ರದ್ ಸುದ್ಧಿ

    ರೇಖಾ ಬನ್ನಾಡಿ ಅವರ ‘ಕಾರಂತರ ದುಡಿಮೆಯ ಪ್ರಪಂಚ’ – ವಿಮರ್ಶಾ ಸಂಕಲನ ಬಿಡುಗಡೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಡಾ.ಶಿವರಾಮ ಕಾರಂತರು ಕಾಯಕವನ್ನೇ ಕೈಲಾಸವೆಂದು ನಂಬಿದವರು. ಅದರಲ್ಲೇ ತಮ್ಮ ಜೀವಿತಾವಧಿಯ ಸಾರ್ಥಕ್ಯವನ್ನು ಕಂಡವರು ಎಂದು ಖ್ಯಾತ ಚಿಂತಕ ಜಿ.ರಾಜಶೇಖರ ಅಭಿಪ್ರಾಯಪಟ್ಟರು.

    Click Here

    Call us

    Click Here

    ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಅವರ “ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಎಂಬ ಶೀರ್ಷಿಕೆಯೇ ವಿಸ್ಮಯವೆನಿಸುವಷ್ಟು ಜೀವನಾನುಭೂತಿಯನ್ನು ಸಮ್ಮಿಳಿಸುತ್ತದೆ. ಬರಹಗಳಲ್ಲಿ ಕಾಳಜಿ, ಸಂವೇದನೆ ಮತ್ತು ಸೂಕ್ಷ್ಮತೆಗಳಿವೆ. ಲೇಖಕರು ಸಮಕಾಲೀನ ವಿದ್ಯಾಮಾನಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಕ್ರಾಂತಿ ಎನ್ನಬಹುದು. ಪ್ರತಿ ಬರಹಗಳಲ್ಲಿನ ವಸ್ತುವಿಷಯಗಳು ಒಂದಕ್ಕಿಂತ ಇನ್ನೊಂದು ವಿಶಿಷ್ಟವೆನಿಸುತ್ತಾ ಹೋಗುತ್ತದೆ. ಇದೊಂದು ವಿಮರ್ಶಾ ಕೃತಿಯಲ್ಲ. ಇದೊಂದು ಸಮಕಾಲೀನ ಸಾಹಿತ್ಯದ ದಿಕ್ಸೂಚಿಯಾಗಿದೆ. ಇಲ್ಲಿ ಬರುವಂತಹ ಸಂದರ್ಭೋಚಿತ ಸಂಗತಿಗಳು ಮತ್ತು ಅದರ ನಿರ್ಧಾರ ಮತ್ತು ನಿಯಮಗಳು ಅಂತಿಮವಲ್ಲ ಎಂದು ಹೇಳಿದರು.

    ಕಾರಂತರ ಮರಳಿಮಣ್ಣಿಗೆ ಕೃತಿಯನ್ನು ಕುರಿತು ಮಾತನಾಡುತ್ತಾ ಕಾರಂತರು ತಮ್ಮ ಈ ಕೃತಿಯಲ್ಲಿ ಕೋಟ ಮತ್ತು ಕುಂದಾಪುರ ವಲಯದ ಭಾಷಾ ಸೊಗಡನ್ನು ನಾವು ನೋಡಲು ಸಾಧ್ಯವಾಗಿಲ್ಲ. ಅವರು ಇಲ್ಲಿನ ಭಾಷಾ ಸಂಸ್ಕೃತಿಯನ್ನು ಮರಮಾಚಿದ್ದಾರೆ. ಅಲ್ಲದೇ ಕೋಟದ ಸುತ್ತಮುತ್ತಲಿನ ಪರಿಸರ, ಜನಜೀವನ ಅವರ ದುಡಿಮೆಯ ಪ್ರಪಂಚ ಮತ್ತು ಅವರ ಭಾವನಾತ್ಮಕ ಸಂವೇದನೆಗಳನ್ನು ಕಟ್ಟಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗಿಲ್ಲ. ಯಾವುದೋ ಒಂದು ವರ್ಗವನ್ನು ಕುರಿತು ಕೃತಿಯಲ್ಲಿ ತಂದಾಗ ಅದು ಸಾಮಾಜಿಕ ನೆಲೆಗಳಿಗೆ ಸ್ಪಂದಿಸಿದಂತಾಗುವುದಿಲ್ಲ. ಎಲ್ಲಾ ವರ್ಗದವರ ಸಾಮಾಜಿಕ ಭಾವನಾತ್ಮಕ ನೆಲೆಗಳಿಗೆ ಸ್ಪ್ಂದಿಸಬೇಕಾದದ್ದು ಸಾಹಿತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

    “ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಕೃತಿಯ ಕುರಿತು ಲೇಖಕಿ ಜ್ಯೋತಿ ಚೆಳ್ಯಾರು ಅವರು ಮಾತನಾಡಿ ಕೃತಿಯಲ್ಲಿನ ಮೊದಲ ಬರಹವೇ ಕಾರಂತರ ದುಡಿಮೆಯ ತಾತ್ವಕತೆಯನ್ನು ಕಟ್ಟಿಕೊಡುತ್ತದೆ. ಕಾರಂತರ ಕೃತಿಗಳಲ್ಲಿನ ದುಡಿಮೆಯ ಪ್ರಪಂಚದ ಕುರಿತಂತೆ ಹೊಸ ನೆಲೆಯನ್ನು ಹುಟ್ಟುಹಾಕುತ್ತದೆ. ಒಳ್ಳೆಯ ಓದು , ಸಂವೇದನೆ ಮತ್ತು ಬರಹಗಳು ಕೃತಿಗಳಿಗೆ ಗುಣಮಟ್ಟದೊಂದಿಗೆ ಸಾರ್ಥಕ್ಯವನ್ನು ತಂದುಕೊಡುತ್ತದೆ. ಕಾರಂತರು ನೇರ ನಡೆನುಡಿಯ ವ್ಯಕ್ತಿತ್ವದವರು. ಅವರ ಬರಹಗಳಲ್ಲಿ ಸತ್ಯದ ಕಾಣ್ಕೆ ಇದೆ. ಅವರ ಕೃತಿಗಳು ಚಿಂತನೆಗೆ ಎಡೆಮಾಡಿಕೊಡುತ್ತದೆ. ಕಾರಂತರ ದೃಷ್ಟಿಯಲ್ಲಿ ಪುರುಷ ಮತ್ತು ಸ್ತ್ರೀ ಇವರಿಬ್ಬರೂ ಸಮಾನರು. ಅದೇ ದೃಷ್ಟಿಕೋನವನ್ನು ನಾವು ಅವರ ಬರಹಗಳಲ್ಲಿ ಕಾಣುತ್ತೇವೆ. ಈ ಕೃತಿಯನ್ನು ಓದುತ್ತಾ ಸಮಕಾಲೀನತೆಯ ಮತ್ತು ಸಮಾನತೆಯ ದರ್ಶನವಾಗುತ್ತದೆ. ಅವುಗಳು ನಮ್ಮನ್ನು ಚಿಂತನೆಗೀಡು ಮಾಡುತ್ತದೆ. ಸಾಹಿತ್ಯ, ಸಂಸ್ಕೃತಿ ಮತ್ತು ಬದುಕು ಇವುಗಳು ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ. ಅವು ಈ ಕೃತಿಯಲ್ಲಿ ಹಲವು ಸಂದರ್ಭಗಳಲ್ಲಿ ಬಿಂಬಿತವಾಗಿದೆ. ತನ್ಮೂಲಕ ಹೊಸ ತಾತ್ವಕತೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕೃತಿಯ ಲೇಖಕಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್ ಎಸ್.ಆರ್ ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣ: ಮುನಿಯಾಲ್ ಉದಯ ಕುಮಾ‌ರ್ ಶೆಟ್ಟಿ

    08/12/2025

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025

    ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾರ್ಷಿಕೋತ್ಸವ

    08/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಶಿಪ್ ರೆಕಾರ್ಡ್ ಕ್ರಿಯೇಟ್‌ಗೈದ ಮಂಜುನಾಥ ಅವರಿಗೆ ಪ್ರಶಸ್ತಿ ಪ್ರದಾನ
    • ಕುಂದಾಪುರದ ರಚಿತಾಗೆ ಕರ್ನಾಟಕ 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ನಾಯಕತ್ವ
    • ಕುಂದಾಪುರ: ಡಿ.15ರಿಂದ ಅಣಬೆ ಮತ್ತು ಜೇನು ಕೃಷಿ ತರಬೇತಿ
    • ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿರ್ವಾಣ ದಿನ
    • ಸ್ವಚ್ಛತೆ ಎಂಬುವುದು ಮನೆಮನಗಳನ್ನು ತಲುಪಲಿ: ಸಂಸದ ಕೋಟ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d