ಕುಂದಾಪುರ ಸುತ್ತಮುತ್ತ ಸಿಗ್ನೇಚರ್‌ ಕನ್ನಡ ಸಿನಿಮಾ ಚಿತ್ರೀಕರಣ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸುತ್ತಮುತ್ತಲಿನ ಪರಿಸರದಲ್ಲಿ ಅದ್ದೂರಿ ವೆಚ್ಚದ ಕನ್ನಡ ಸಿನಿಮಾ ಸಿಗ್ನೇಚರ್‌ ಚಿತ್ರತಂಡ ಬಿರುಸಿನ ಚಿತ್ರೀಕರಣದಲ್ಲಿ ತೊಡಗಿದೆ.

Call us

Click Here

ಕುಂದಾಪುರ ಮೂಲದ ಕೊರವಡಿ ಪೂರ್ಣಿಮಾ ಭಾಸ್ಕರ ಪೂಜಾರಿ ನಿರ್ಮಾಣದ, ವಿ. ಮನೋಹರ್‌ ಸಂಗೀತ ನಿರ್ದೇಶನದ ಎಂಎಂಕೆ ಮೂವೀಸ್‌ನ ವಿರಾಟ್‌ ಪ್ರೊಡಕ್ಷನ್‌ನ ಬ್ಯಾನರ್‌ನಲ್ಲಿ ಎ. 25ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಚಾಲನೆ ದೊರಕಿದೆ. ತಾಲೂಕಿನ ಹಾಲಾಡಿ, ಅಮಾಸೆಬೈಲು, ಕೋಡಿ, ಮರವಂತೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುಂದರ ಸೊಬಗನ್ನು ಡಿಒಪಿ ಜೀವನ್‌ ಗೌಡ ಛಾಯಾಗ್ರಹಣದ ಮೂಲಕ ಸೆರೆಹಿಡಿಯಲಿದ್ದಾರೆ.

ಕುಂದಾಪುರ ಮೂಲದ ನಟ ರಂಜಿತ್‌ ಹಾಗೂ ನಟಿ ಮಯೂರಿ ಚಿತ್ರದ ಮುಖ್ಯ ಪಾತ್ರದಲ್ಲಿ ಹಾಗೂ ಸಹ ಕಲಾವಿದರಾಗಿ ಸುನಿಲ್‌ ಪುರಾಣಿಕ್‌, ಕಿಶೋರ್‌, ವಾಣಿಶ್ರೀ, ಬಚ್ಚನ್‌ (ಖಳನಾಯಕ) ಹಾಗೂ ಬೇಬಿ ಮಾನ್ಯ ಕೊರವಡಿ ನಟಿಸಲಿದ್ದಾಳೆ.

 

Leave a Reply