ರೋಟರಿ ಕುಂದಾಪುರ: ಸೋಲಾರ್ ದೀಪ ಕೊಡುಗೆ

Call us

Call us

Call us

ಕುಂದಾಪುರ: ರೋಟರಿ ಕ್ಲಬ್, ಕುಂದಾಪುರದ ವತಿಯಿಂದ ಚಿತ್ತೂರು ಗ್ರಾಮದ ನೈಕಂಬಳಿ ಗುಡ್ಡಿಮನೆ ಶ್ರೀಧರ ಆಚಾರ್ಯ ಮತ್ತು ಶ್ರೀಮತಿ ಮಾಲಿನಿ ಆಚಾರ್ಯ ದಂಪತಿಗಳ ಮನೆಗೆ ಸೋಲಾರ್ ದೀಪಗಳನ್ನು ರೋಟರಿ ಜಿಲ್ಲಾ ಅನುದಾನದಲ್ಲಿ ಮೇ. ೨೨ರಂದು ಅಳವಡಿಸಲಾಯಿತು.

Call us

Click Here

ವಿದ್ಯುತ್ ದೀಪದ ಸೌಲಭ್ಯವಂಚಿತ ಗ್ರಾಮೀಣ ಭಾಗದ ಮನೆಗೆ ನಾಲ್ಕು ದೀಪಗಳನ್ನೊಳಗೊಂಡ ಸುಸಜ್ಜಿತ ಸೋಲಾರ್ ದೀಪಗಳ ಘಟಕವನ್ನು ೫ ವರ್ಷಗಳ ವಾರಂಟಿಯೊಂದಿಗೆ ರೋಟರಿ ಕ್ಲಬ್, ಕುಂದಾಪುರದ ಅಧ್ಯಕ್ಷ ಮನೋಜ್ ನಾಯರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ| ಅತುಲ್‌ಕುಮಾರ್ ಶೆಟ್ಟಿ, ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದ ಮಾಲಕ ರಾಮಚಂದ್ರ ಮಂಜ, ಇಡೂರಿನ ಮಹಾಗಣಪತಿ ಐಸ್‌ಕ್ರೀಮ್ ಸಂಸ್ಥೆಯ ಮಾಲಕ ಮಂಜುನಾಥ ಮಡಿವಾಳ, ನಿಯೋಜಿತ ಅಧ್ಯಕ್ಷ ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ಇಂಟರ‍್ಯಾಕ್ಟ್ ಕ್ಲಬ್‌ನ ಛೇರ್‌ಮೆನ್ ಎಚ್.ಎಸ್.ಹತ್ವಾರ್, ಕಾರ್ಯದರ್ಶಿ, ಕೆ. ವಿ. ನಾಯಕ್, ನಿಯೋಜಿತ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

Leave a Reply