Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಂಸ್ಕಾರ ಎತ್ತಿದ ಪ್ರಶ್ನೆ ಎಂದಿಗೂ ಪ್ರಸ್ತುತ: ಹುಲಿ ಚಂದ್ರಶೇಖರ
    ಊರ್ಮನೆ ಸಮಾಚಾರ

    ಸಂಸ್ಕಾರ ಎತ್ತಿದ ಪ್ರಶ್ನೆ ಎಂದಿಗೂ ಪ್ರಸ್ತುತ: ಹುಲಿ ಚಂದ್ರಶೇಖರ

    Updated:03/04/2019No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಮಾನವ ಸಹಜ ದೌರ್ಬಲ್ಯಗಳಿಂದ ಯಾರೂ ಹೊರತಾಗಿರುವುದು ಅಸಾಧ್ಯ. ಆದರೆ ಅಂತಹ ದೌರ್ಬಲ್ಯವನ್ನು ಮುಚ್ಚುಮರೆ ಮಾಡದೆ ಬಹಿರಂಗವಾಗಿ ಪ್ರದರ್ಶಿಸುವವರನ್ನು ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ಮಾನವೀಯ ಪರಿಗಣನೆಯಿಂದ ಹೊರಗಿಡಬಹುದೇ ಎಂದು ’ಸಂಸ್ಕಾರ’ ಎತ್ತುವ ಪ್ರಶ್ನೆ ಎಂದಿಗೂ ಪ್ರಸ್ತುತ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಹೇಳಿದರು.

    Click Here

    Call us

    Click Here

    ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ಕುಂದಾಪುರ ಜೇಸಿಐ ಮತ್ತು ಗುಲ್ವಾಡಿ ಟಾಕೀಸ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿನ ಜೇಸಿಐ ಭವನದಲ್ಲಿ ನಡೆದ ಸಂಸ್ಕಾರ ಒಂದು ಮರುನೋಟ, ಸಂಸ್ಕಾರ ಚಲನಚಿತ್ರ ಐವತ್ತು ವರ್ಷ ಮತ್ತು ನಿರ್ದೇಶಕ ಪಟ್ಟಾಬಿರಾಮ ರೆಡ್ಡಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದರು.

    ಡಾ. ಯು. ಆರ್. ಅನಂತಮೂರ್ತಿ ಸಂಸ್ಕಾರ ಕಾದಂಬರಿ ಬರೆದಾಗ ಎದ್ದ ವಿವಾದಗಳು ಪಟ್ಟಾಬಿರಾಮ ರೆಡ್ಡಿ ಚಲನಚಿತ್ರ ಮಾಡಿದಾಗಲೂ ಮುಂದುವರಿದುವು. ಅದು ಹಲವು ಅತ್ಯಂತ ಸಂಕೀರ್ಣ ಸಾಮಾಜಿಕ ಪ್ರಶ್ನೆಗಳನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿದ ಕತೆ. ಅದರಿಂದ ಪ್ರಭಾವಿತರಾದವರಲ್ಲಿ ರಾಮಮನೋಹರ ಲೋಹಿಯಾ ಅವರೂ ಒಬ್ಬರು. ಅವರ ಸಲಹೆಯಂತೆ ರೆಡ್ಡಿ ಅದನ್ನು ಚಲನಚಿತ್ರ ಮಾಡಿದರು. ಅದರ ಎಲ್ಲ ವಿಭಾಗಗಳನ್ನು ಖ್ಯಾತನಾಮರು ನಿರ್ವಹಿಸಿದರು. ಸಂಪ್ರದಾಯವಾದಿಗಳ ವಿರೋಧ, ಸೆನ್ಸಾರ್ ಮಂಡಳಿಯ ಮೀನಮೇಷದ ಹೊರತಾಗಿಯು ಚಿತ್ರ ಯಶಸ್ವಿಯಾಯಿತು. ಅದು ಸತ್ಯಜಿತ್ ರೇ ಅವರ ’ಪ್ರತಿದ್ವಂದ್ವಿ’ಯೊಂದಿಗೆ ಸ್ಪರ್ಧಿಸಿ ಸ್ವರ್ಣಕಮಲ ರಾಷ್ಟ್ರ ಪ್ರಶಸ್ತಿ ಗಳಿಸಿತು. ಜತೆಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಬಂದುವು. ಅದರಲ್ಲಿ ಭಾಗಿಗಳಾದ ಹಲವರು ಚಲನಚಿತ್ರದ ಮುನ್ನೆಲೆಗೆ ಬಂದರು. ಅದನ್ನು ಅನುಸರಿಸಿ ಹೊಸಹಾದಿಯ ಚಿತ್ರಗಳು ಬಂದುವ. ಕನ್ನಡ ಚಲನಚಿತ್ರ ರಂಗಕ್ಕೆ ಸಂಸ್ಕಾರದ ಕೊಡುಗೆ ಅನನ್ಯವಾದುದು ಎಂದು ಅವರು ಹೇಳಿದರು.

    ಬಿ. ದಾಮೋದರ ಆಚಾರ್ಯ ಸ್ವಾಗತಿಸಿದರು. ಸದಾನಂದ ಬೈಂದೂರು ವಂದಿಸಿದರು. ವಾಸುದೇವ ಗಂಗೇರ ನಿರೂಪಿಸಿದರು. ಸ್ನೇಹಲತಾ ರೆಡ್ಡಿ ಅವರ ಪುತ್ರಿ, ಸಿಡಬ್ಯ್ಲೂಸಿಯ ನಂದನಾ ರೆಡ್ಡಿ ಇದ್ದರು. ಹುಲಿ ಚಂದ್ರಶೇಖರ ಮತ್ತು ಅಶೋಕ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸಂಸ್ಕಾರ ಚಲನಚಿತ್ರ ಮತ್ತು ಅದರ ಚಿತ್ರೀಕರಣದ ಹಿನ್ನೆಲೆ, ಮುನ್ನೆಲೆಗಳ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡುವು.

    ಸಂಸ್ಕಾರ ಇಂದು ಬಂದಿದ್ದರೆ ಸಿಗುತ್ತಿದ್ದ ಪ್ರತಿಕ್ರಿಯೆ, ಕಾದಂಬರಿಯ ಬಗೆಗಿನ ವಾದವಿವಾದ, ಸಂಸ್ಕಾರ ನೀಡುವ ಸಂದೇಶ, ಚಲನಚಿತ್ರ ಮಾಧ್ಯಮಕ್ಕೆ ತರುವಾಗ ಮೂಲಕ್ಕೆ ಮಾಡಿಕೊಂಡ ಬದಲಾವಣೆಗಳು, ಧರ್ಮನಿಷ್ಠೆಯ ಪ್ರತೀಕವಾಗಿದ್ದ ಪ್ರಾಣೇಶಾಚಾರ್ಯರೂ ದೌರ್ಬಲ್ಯಕ್ಕೆ ಒಳಗಾಗುವುದು, ಹಾವನ್ನು ಕೊಂದು ಅದರ ಸಂಸ್ಕಾರ ಮಾಡುವ ದೃಶ್ಯದ ಪ್ರಸ್ತುತತೆ ಮತ್ತು ಸಂಕೇತ, ನಾರಣಪ್ಪನ ಶವವು ಸಂಸ್ಕಾರಕ್ಕೆ ಕಾದಿರುವಾಗ ಹದ್ದು, ಕಾಗೆಗಳ ಹಾರಾಟ, ಇಲಿಗಳ ಸಾವು ಸೃಷ್ಟಿಸುವ ಪರಿಣಾಮ ಕುರಿತು ಸುಬ್ರಹ್ಮಣ್ಯ ಪಡುಕೋಣೆ, ರವೀಂದ್ರ ದೊಡ್ಮನೆ, ರಾಮಾಂಜಿ, ಸಂತೋಷಕುಮಾರ ಶೆಟ್ಟಿ, ಎಸ್. ಜನಾರ್ದನ ಎತ್ತಿದ ಪ್ರಶ್ನೆಗಳಿಗೆ ಹುಲಿ ಚಂದ್ರಶೇಖರ, ಸಮುದಾಯದ ಜಿ. ವಿ. ಕಾರಂತ, ಸಿಡಬ್ಲ್ಯೂಸಿಯ ಬಿ. ದಾಮೋದರ ಆಚಾರ್ಯ ಸ್ಪಂದಿಸಿದರು.

    Click here

    Click here

    Click here

    Click Here

    Call us

    Call us

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    fifteen − thirteen =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.