Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಸಂಘಟನೆ ಲೋಕಾರ್ಪಣೆ
    ಊರ್ಮನೆ ಸಮಾಚಾರ

    ‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಸಂಘಟನೆ ಲೋಕಾರ್ಪಣೆ

    1 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಂದಾಪುರಿಗರ ಸಂಖ್ಯೆ ಬಹಳ ದೊಡ್ಡದಿದೆ. ತಮ್ಮ ವಿಶಿಷ್ಟ ಶೈಲಿಯ ಕನ್ನಡ ಮಾತಿನಿಂದಲೇ ಗಮನ ಸೆಳೆಯುವ ಇವರ ‘ಆಡು ನುಡಿ’ ಕೇಳೋಂದೆ ಚೆಂದ. ಕುಂದಾಪುರದ ಕನ್ನಡ ಅಂತಲೇ ಖ್ಯಾತಿ ಗಳಿಸಿರುವ ಈ ಭಾಗದ ಜನರ ಪ್ರೀತಿಯೂ ದೊಡ್ಡದು. ಹೊಟೇಲ್, ಬೇಕರಿ, ಬ್ಯಾಂಕಿಂಗ್ ಉದ್ಯೋಗ, ಪತ್ರಿಕೋದ್ಯಮ, ಸಿನೆಮಾ ಹೀಗೆ ಇವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಹೀಗೆ ಉದರ ನಿಮಿತ್ಯಂ ಉದ್ಯೋಗ ಅನ್ನೋ ಹಾಗೆ ಬೆಂಗಳೂರು ಸೇರಿರೋ ಕುಂದಾಪುರದ ಕೆಲ ಯುವ ಮನಸ್ಸುಗಳು ಇದೀಗ ತಮ್ಮದೇ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡಿವೆ.

    Click Here

    Call us

    Click Here

    ‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಎಂಬ ಚೆಂದದ ಹೆಸರಿಟ್ಟುಕೊಂಡಿರೋ ಈ ಯುವ ಸಂಘಟನೆ ಲೋಕಾರ್ಪಣೆಗೊಂಡಿತು. ನಾಗರಬಾವಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಂಡದ ಲೋಗೋ ಹಾಗೂ ಟೀ ಶರ್ಟ್ ಅನಾವರಣಗೊಳಿಸಲಾಯ್ತು. ಕೆಜಿಎಫ್ ಖ್ಯಾತಿಯ ಹೆಸರಾಂತ ಸಂಗೀತ ನಿರ್ದೇಶಕ, ಕುಂದಾಪುರದವರೇ ಆದ ರವಿ ಬಸ್ರೂರು, ತಂಡದ ಲೋಗೋವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ತಂಡದ ಸದಸ್ಯರಾದ ಬಿಟಿವಿ ವಾಹಿನಿಯ ಸುದ್ದಿ ನಿರೂಪಕ, ರಂಜೀತ್ ಶಿರಿಯಾರ್, ಯುವ ಪತ್ರಕರ್ತ ರೂಪೇಶ್ ಪೂಜಾರಿ ಬೈಂದೂರು, ಶ್ರೀಕಾಂತ್, ನವೀನ್ ಆಚಾರ್ಯ ಸೇರಿದಂತೆ ಸರ್ವ ಸದಸ್ಯರು ಭಾಗಿಯಾಗಿದ್ದರು.

    ಬೆಂಗಳೂರು ಮಹಾ ಸಾಗರವಿದ್ದಂತೆ. ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಈ ಮಹಾನಗರಿ ಎಲ್ಲರನ್ನ ತನ್ನ ಒಡಲೊಳಗೆ ಸೇರಿಸಿಕೊಳ್ಳುತೆ. ಇಲ್ಲೊಮ್ಮೆ ಬಂದು ಸೇರಿದರೆ ಸಾಕು ನಾವೆಲ್ಲರೂ ಬೆಂಗಳೂರಿಗರಾಗಿ ಬಿಡ್ತಿವೆ.. ಈ ಊರಿನ ಪ್ರೀತಿ, ಋಣ ಎರಡೂ ದೊಡ್ಡದು.. ಹುಟ್ಟಿದೂರಿನದ್ದು. ಹೂ-ಬಳ್ಳಿಯಂತ ಕರುಳ ಸಂಬಂಧವಾದರೆ.. ಮೆಟ್ಟಿದೂರಿನದ್ದು, ಮಮತೆಯ ಬಂಧ.. ಹೀಗಾಗಿ ಸಿಲಿಕಾನ್ ಸಿಟಿಯ ವಾಸ ಒಂದು ರೀತಿಯಲ್ಲಿ ಬಿಡಿಸಿಕೊಳ್ಳಲಾಗದ ಅನುರಾಗದ ಬಂಧನ.

    ಬೆಂಗಳೂರಿಗೆ ನಾವೆಲ್ಲ ಕೆಲಸ ಅರಿಸುತ್ತಲೂ, ಮತ್ತೊಂದು, ಮಗದೊಂದು ಕಾರಣ ಇಟ್ಟು ಇಲ್ಲಿ ಹೆಜ್ಜೆ ಇಡ್ತಿವೆ. ಮೊದಲಿಗೆ ಅಪರಿಚತರಂತೆ ಗುಮ್ಮನಾಗಿ ಕಾಡೋ ಈ ನಗರ ದಿನ ಕಳೆದಂತೆ ಆಪ್ತತೆ ಬೆಳೆಸಿ ನಮ್ಮೊಳಗೆ ಇಳಿದು ಬೀಡುತ್ತೆ. ವಿಜಯನಗರದ ಸುಂದರ ರಸ್ತೆ, ಲಾಲ್‌ಬಾಗ್‌ನ ಮನಮೋಹಕ ಸೆಳೆತ, ಕಬ್ಬನ್ ಪಾರ್ಕ್ನ ಕಚಗುಳಿ ಇಡೋ ವಾತಾವರಣ, ಜಿಕೆವಿಕೆ ಆವರಣದ ಪ್ರಶಾಂತತೆ, ಕೆ,ಆರ್,ಮಾರ್ಕೆಟ್‌ನ ಟಿಪಿಕಲ್ ಸಂತೆಯ ವಾತಾವರಣ ಹೀಗೆ ಆಪ್ತತೆ ತೋರುವ ತಾಣಗಳ ಸಂಖ್ಯೆಯನ್ನ ಎಣಿಸಲಾಗದು.

    Click here

    Click here

    Click here

    Click Here

    Call us

    Call us

    ಆದರೆ ಇಷ್ಟೇಲ್ಲಾ ಪ್ರೀತಿಯ ನಡುವೆಯೂ ನಮಗೆ ಹುಟ್ಟೂರಿನ ಸಂತಸ, ತವರು ಜಿಲ್ಲೆಯ ಗೆಳೆಯರ ಒಡನಾಟವನ್ನು ಮಿಸ್ ಮಾಡಿಕೊಳ್ತಿವಿ ಅಂತ ಅನ್ನಿಸದೇ ಇರಲ್ಲ. ನಾವು ಹೋಗುವ ರಸ್ತೆಗಳಲ್ಲಿ ನಮ್ಮೂರಿನ ಹುಡುಗ, ನಮ್ಮ ಜಿಲ್ಲೆಯ ವ್ಯಕ್ತಿಗಳೇನೇದರೂ ಸಿಕ್ಕರೆ ಅದಕ್ಕಿಂತ ಸಂತಸ, ಸಂಭ್ರಮ ಮತ್ತೊಂದಿಲ್ಲ. ಹಾಗೆ ತಮ್ಮದೇ ಊರಿನ, ತಮ್ಮದೇ ತಾಲೂಕು, ಜಿಲ್ಲೆಯ ಜನರು ಒಂದೆಡೆ ಸೇರಿದ್ರೆ ಅದರ ಖುಷಿ ಹೇಳಬೇಕಾ. ಅದನ್ನ ಪದಗಳಲ್ಲಿ ಹೇಳಲಾಗದು. ಅದರಲ್ಲೂ ಹೆಚ್ಚು ಕಡಿಮೆ ಒಂದೇ ವಯೋಮಾನದ, ಸಮಾನ ಮನಸ್ಕ ಗೆಳೆಯರು ಸೇರಿದರಂತೂ ಅದು ಹಾಲಿಗೆ ಸಕ್ಕರೆ ಬೆರಿಸಿದಂತೆ!

    ಕೆಲಸದ ಒತ್ತಡದ ನಡುವೆಯೂ ಸೇರಿಕೊಂಡಿರೋ ಈ ಯುವ ಮನಸ್ಸುಗಳು ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸುತ್ತೆವೆ. ಶಿಸ್ತು, ಸಂಯಮದ ಜೊತೆಗೆ ಬದ್ಧತೆ ಬೆಳಸಿಕೊಂಡಿರೋ ಈ ಯುವ ಮಿತ್ರರು ಒಂದಿಷ್ಟು ಒಳ್ಳೆಯ ಕಾರ್ಯ ಮಾಡಲು ಮುನ್ನುಗ್ಗುತ್ತಿದ್ದಾರೆ.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026

    ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    21/05/2026

    ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ

    21/05/2026

    1 Comment

    1. S. Janardhana on 08/07/2019 6:24 pm

      GOOD LUCK

      Reply
    Leave A Reply Cancel Reply

    sixteen − three =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.