ಕುಂದಾಪುರ: ಸತೀಶ್ ಖಾರ್ವಿ ಹಾಗೂ ನಾಗಶ್ರೀ ಉಪ್ಪಿನಕುದ್ರು ಅವರಿಗೆ ಅದ್ದೂರಿ ಸ್ವಾಗತ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತಿಚಿಗೆ ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದ ಕುಂದಾಪುರದ ಸತೀಶ್ ಖಾರ್ವಿ ಹಾಗೂ ಪವರ್ ಲಿಫ್ಟಿಂಗ್ ಸಬ್ ಜ್ಯೂನಿಯರ್ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಮೂರು ಬೆಳ್ಳಿಯ ಪದಕವನ್ನು ಗೆದ್ದ ಉಪ್ಪಿನಕುದ್ರುವಿನ ನಾಗಶ್ರೀ ಶೇರುಗಾರ್ ಅವರನ್ನು ಕುಂದಾಪುರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.

Call us

Click Here

Video

ಮಂಗಳೂರಿನಿಂದ ಆಗಮಿಸಿದ ಈರ್ವರನ್ನು ಸಾಲಿಗ್ರಾಮದಲ್ಲಿ ಸ್ವಾಗತಿಸಿಕೊಳ್ಳಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿಬಂದ ಅವರನ್ನು ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಸತೀಶ್ ಖಾರ್ವಿ ಅವರ ನ್ಯೂ ಹರ್ಕ್ಯೂಲಸ್ ಜಿಮ್ ಬಳಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ನಾಗರಿಕರು ಈರ್ವರನ್ನು ಅಭಿನಂದಿಸಿದರು. ಜಿಮ್‌ನಲ್ಲಿ ಸತೀಶ್ ಖಾರ್ವಿ ಹಾಗೂ ನಾಗಶ್ರೀ ಅವರಿಗೆ ಸನ್ಮಾನಿಸಿ ಬಳಿಕ ಮೆರವಣಿಗೆಯಲ್ಲಿ ಕುಂದಾಪುರ ಖಾರ್ವಿಕೇರಿಗೆ ತಲುಪಿದರು.

ಮಾರ್ಗಮಧ್ಯೆ ವಿಜೇತರಿಗೆ ಹಾರ ಹಾಕಿ ಗೌರವಿಸಿದ್ದು, ಶಾಸ್ತ್ರೀ ವೃತ್ತದ ಬಳಿ ಖಾರ್ವಿಕೇರಿಯ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿಕೊಂಡದ್ದ ವಿಶೇಷವಾಗಿತ್ತು. ಕುಂದಾಪುರದ ಬಳಿಕ ಉಪ್ಪಿನಕುದ್ರುವಿನಲ್ಲಿಯೂ ಈರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು. (ಕುಂದಾಪ್ರ ಡಾಟ್ ಕಾಂ)

Click here

Click here

Click here

Click Here

Call us

Call us

ಕುಂದಾಪುರದ ಎಸಿ ರಾಜು ಮೊಗವೀರ ವಿಜೇತರನ್ನು ಅಭಿನಂದಿಸಿದರು. ಈ ಸಂದರ್ಭ ಮಂಜು ಬಿಲ್ಲವ, ರಾಜೇಶ್ ಕಾವೇರಿ, ಜಯಾನಂದ ಖಾರ್ವಿ, ನಾಗರಾಜ ಕಾಮಧೇನು, ಅಶೋಕ್, ವಸಂತಿ ಮೋಹನ್ ಸಾರಂಗ, ಸಂದೀಪ್ ಖಾರ್ವಿ ಕೆ.ಕೆ, ಚಂದ್ರಶೇಖರ ಖಾರ್ವಿ, ಗಿರೀಶ್ ಕುಂದಾಪುರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply