Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅರೆಹೊಳೆ ’ಪಲ್ಲಕ್ಕಿ ಫ್ರೆಂಡ್ಸ್’: ವಿಶಿಷ್ಟ ಬೆಳ್ಳಿ ಹಬ್ಬ ’ರಜತ ಪಲ್ಲಕ್ಕಿ – 2020’
    ಊರ್ಮನೆ ಸಮಾಚಾರ

    ಅರೆಹೊಳೆ ’ಪಲ್ಲಕ್ಕಿ ಫ್ರೆಂಡ್ಸ್’: ವಿಶಿಷ್ಟ ಬೆಳ್ಳಿ ಹಬ್ಬ ’ರಜತ ಪಲ್ಲಕ್ಕಿ – 2020’

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ
    ಬೈಂದೂರು : ನಾವುಂದ ಗ್ರಾಮದ ಸೌಪರ್ಣಿಕಾ ತಟದ ಅರೆಹೊಳೆ ಶ್ರೀ ಮಹಾಲಿಂಗೇಶ್ವರ-ಮಹಾಗಣಪತಿ ದೇವಸ್ಥಾನದಲ್ಲಿ ಮಾಘ ಪೌರ್ಣಿಮೆಯಂದು ನಡೆಯುವ ಶ್ರಿ ಮನ್ಮಾಹಾರಥೋತ್ಸವದ ವೇಳೆ ಎಂಟು ದಿನ ಗ್ರಾಮದ ವಿವಿಧೆಡೆ ನಡೆಯುವ ಕಟ್ಟಳೆಯ ವಸಂತ ಪೂಜೆಗೆ ದೇವರ ಉತ್ಸವ ಮೂರ್ತಿಯನ್ನು ಪಲ್ಕಕ್ಕಿಯಲ್ಲಿ ಕೊಂಡೊಯ್ಯುವುದು ಅನೂಚಾನವಾಗಿ ಬಂದ ಸಂಪ್ರದಾಯ. ೨೫ ವರ್ಷಗಳ ಹಿಂದೆ ಪಲ್ಲಕ್ಕಿ ಹೊರಲು ಸಿಬ್ಬಂದಿ ಹಿಂದೆ ಸರಿದಾಗ ಅಸ್ತಿತ್ವಕ್ಕೆ ಬಂದುದು ’ಪಲ್ಲಕ್ಕಿ ಫ್ರೆಂಡ್ಸ್’ ಎಂಬ ಯುವಪಡೆ.

    Click Here

    Call us

    Click Here

    ಸಂಪ್ರದಾಯಕ್ಕೆ ಚ್ಯುತಿ ಬರುವುದೆಂದು ಚಿಂತಿತರಾದ ಅಂದಿನ ಆಡಳಿತ ಮೊಕ್ತೇಸರ ಯಜ್ಞನಾರಾಯಣ ಮಂಜ, ದೇವರ ಸೇವೆಯ ಹೊಣೆ ಹೊರಬೇಕು ಎಂದು ಊರಿನ ವಿಪ್ರ ಯುವಕರ ಮನ ಒಲಿಸಿದರು. ಮೊದಲ ವರ್ಷದಿಂದಲೇ ಯುವಕರು ಈ ಕಾಯಕದಲ್ಲಿ ಧನ್ಯತೆ ಕಂಡುಕೊಂಡರು. ತಮ್ಮನ್ನು ’ಅರೆಹೊಳೆ ಪಲ್ಲಕ್ಕಿ ಫ್ರೆಂಡ್ಸ್’ ಎಂದು ಗುರುತಿಸಿಕೊಂಡು ಸಂಘಟನೆಯ ರೂಪ ಪಡೆದರು. ಅಲ್ಲಿಂದ ಇಂದಿನ ವರೆಗೆ ದೇವರ ಈ ವಿಶಿಷ್ಟ ಗ್ರಾಮಸಂಚಾರಕ್ಕೆ ಚ್ಯುತಿ ಬಂದಿಲ್ಲ. ಮುಂದೆ ವರು ತಮ್ಮ ಸೇವೆಯನ್ನು ಊರಿನ ಅನ್ಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡು ಜನಮೆಚ್ಚುಗೆ ಗಳಿಸಿದರು; ಮನೆ ಮಾತಾದರು.

    ಇತ್ತೀಚೆಗೆ ಸಂಪನ್ನವಾದ ರಥೋತ್ಸವದಲ್ಲಿ, ಪಲ್ಲಕ್ಕಿ ಫ್ರೆಂಡ್ಸ್ ತಮ್ಮ ಸೇವೆಯ ಬೆಳ್ಳಿಹಬ್ಬವನ್ನು ’ರಜತ ಪಲ್ಲಕ್ಕಿ – 2020’ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸಿದರು. ಸಂಜೆ ಮೇಲ್‌ಗಂಗೊಳ್ಳಿಯ ಡಾ| ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ಸದಸ್ಯರಿಂದ ’ಕರಗ ಕೋಲಾಟ’ ಆಯೋಜಿಸಿ, ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಮನೋರಂಜನೆ ನೀಡಿದರು. ಸಂಘಟನೆಯ ಹುಟ್ಟಿಗೆ ಕಾರಣರಾದ ದಿ. ಯಜ್ಞನಾರಾಯಣ ಮಂಜ ಮತ್ತು ಈಚೆಗೆ ನಿಧನರಾದ ತಂತ್ರಿ ಕೋಟ ಯಜ್ಞನಾರಾಯಣ ಸೋಮಯಾಜಿ ಅವರ ನೆನಪಿಗಾಗಿ ’ಯಜ್ಞಾಮೃತ’ ಎಂಬ ವಾದನ ಬಳಗಕ್ಕೆ ಪ್ರಸಕ್ತ ತಂತ್ರಿ ಕೃಷ್ಣ ಸೋಮಯಾಜಿ ಅವರಿಂದ ಚಾಲನೆ ಕೊಡಿಸಿದರು. ಆಡಳಿತ ಮೊಕ್ತೇಸರ ಮಹಾದೇವ ಮಂಜ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ ಎನ್. ಶೆಟ್ಟಿ, ಸಂಘಟನೆಯ ಹಿರಿಯ ಸದಸ್ಯರಾದ ಶ್ರೀ ಗಣಪಯ್ಯ ಮಹಾಲೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ, ನಾಗಸ್ವರ ವಾದಕ ಮಂಜು ದೇವಾಡಿಗ ಆಕಳಬೈಲು ಯಜ್ಞಾಮೃತ ಸಂಗೀತ ಬಳಗದ ವಾದನ ಸಾಧನಗಳಾದ ಶಂಖ, ಜಾಗಟೆ, ಕಂಜೀರ, ಕೈಗಂಟೆ ಮತ್ತು ತಾಳಗಳನ್ನು ಬಾರಿಸುವುದರ ಮೂಲಕ ಯುವತಂಡದ ಬೆನ್ನುತಟ್ಟಿದರು. ನೂತನ ಸಂಗೀತ ಬಳಗ ದೇವರ ಅಷ್ಟಾವಧಾನ ಸೇವೆಯಲ್ಲಿ ಪ್ರಥಮ ಕಾರ್ಯಕ್ರಮವನ್ನು ನೀಡಿತು. ತಂಡದಲ್ಲಿ ಸದಸ್ಯರಾದ ಶಿವರಾಮ ಮಧ್ಯಸ್ಥ, ಯೋಗೀಶ ಕಾರಂತ, ಉಮೇಶ ಹೆಬ್ಬಾರ್, ನರಸಿಂಹಮೂರ್ತಿ ಐತಾಳ್, ಉಮೇಶ ಮಧ್ಯಸ್ಥ, ವೆಂಕಟೇಶ ಶಾಸ್ತ್ರಿ, ಶ್ರೀನಿವಾಸ ಕಾರಂತ, ಗಣೇಶ ಮಧ್ಯಸ್ಥ, ರಾಘವೇಂದ್ರ ಕಾರಂತ, ವೀರೇಂದ್ರ ಭಟ್, ಸುಬ್ರಹ್ಮಣ್ಯ ನಾವಡ, ರಮಾನಂದ ಮಧ್ಯಸ್ಥ, ನಾಗೇಶ ಶ್ಯಾನುಭೋಗ್, ರಾಮರಾಜ ಮಧ್ಯಸ್ಥ, ನಾಗೇಂದ್ರ ಭಟ್, ಮಹೇಶ ಮಂಜ, ಮಂಜುನಾಥ ನಾವಡ, ಜಗದೀಶ ಹೆಬ್ಬಾರ್, ರಮೇಶ ಮಧ್ಯಸ್ಥ, ನಾಗರಾಜ ಶಾಸ್ತ್ರಿ, ಶ್ಯಾಮ್ ಸುಂದರ್, ವೆಂಕಟೇಶ ಮಧ್ಯಸ್ಥ ಮತ್ತು ಸದಾಶಿವ ರಾವ್ ಇದ್ದರು.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ನರ್ಸರಿ ವಿಭಾಗದ ವಾರ್ಷಿಕೋತ್ಸವ

    09/12/2025

    ಮೂಡ್ಲುಕಟ್ಟೆ: ‘ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಕಾರ್ಯಗಾರ

    09/12/2025

    ಅಭ್ಯುದಯ – 2025: ಮದರ್ ತೆರೇಸಾ ಪಿ.ಯು ಕಾಲೇಜು ವಾರ್ಷಿಕೋತ್ಸವ ಸಂಪನ್ನ

    09/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಸಿಎಸ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ನರ್ಸರಿ ವಿಭಾಗದ ವಾರ್ಷಿಕೋತ್ಸವ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಆಹ್ವಾನ
    • ಮೂಡ್ಲುಕಟ್ಟೆ: ‘ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಕಾರ್ಯಗಾರ
    • ಅಭ್ಯುದಯ – 2025: ಮದರ್ ತೆರೇಸಾ ಪಿ.ಯು ಕಾಲೇಜು ವಾರ್ಷಿಕೋತ್ಸವ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d